• About us
  • Contact us
  • Disclaimer
Thursday, June 5, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಡುಪಿ: ಮಟ್ಕಾ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ 12 ಮಂದಿ ಆರೋಪಿಗಳ ಬಂಧನ

Coastal Times by Coastal Times
June 3, 2025
in ಕ್ರೈಮ್ ನ್ಯೂಸ್
ಉಡುಪಿ: ಮಟ್ಕಾ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ 12 ಮಂದಿ ಆರೋಪಿಗಳ ಬಂಧನ
76
VIEWS
WhatsappTelegramShare on FacebookShare on Twitter

ಉಡುಪಿ, ಜೂ. 03 : ಅಕ್ರಮ ಮಟ್ಕಾ ಜೂಜಾಟದ ವಿರುದ್ಧ ಮಹತ್ವದ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಪೊಲೀಸರು, ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 12 ಮಂದಿ ಆರೋಪಿಗಳನ್ನು ಬಂಧಿಸಿ, 12 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿನ ಮಟ್ಕಾ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರವಿವಾರ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಪ್ರಕರಣದಲ್ಲಿ ಬಂಧಿತನಾದ ಮಟ್ಕಾ ಬುಕ್ಕಿ ಲಿಯೋ ಕರ್ನೆಲಿಯೋ ನೀಡಿದ ಮಾಹಿತಿಯ ಆಧಾರದಲ್ಲಿ ಉಡುಪಿಯಲ್ಲಿ ಒಟ್ಟು 12 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಹಿರಿಯಡ್ಕದ ಬೊಮ್ಮರಬೆಟ್ಟುವಿನ ಮೂಡಬೆಟ್ಟು ನಿವಾಸಿ ಪ್ರಕಾಶ್ ಮೂಲ್ಯ (43), ಮಲ್ಪೆ ಕೊಡವೂರು ಗ್ರಾಮದ ನಿವಾಸಿ ರತ್ನಾಕರ್ ಅಮೀನ್ (48), ಉಡುಪಿ ತಾಲೂಕಿನ ಬಡಗುಬೆಟ್ಟು ಗ್ರಾಮದ ಇಂದಿರಾ ನಗರ ನಿವಾಸಿ ನಾಗೇಶ್ (56), ಬ್ರಹ್ಮಾವರ ತಾಲೂಕಿನ ಕಾರ್ಕಡ ನಿವಾಸಿ ವಿಜಯ ನಾಯರಿ (50), ಚೇರ್ಕಾಡಿಯ ಪೇತ್ರಿ ನಿವಾಸಿ ದಿವಾಕರ ಪೂಜಾರಿ (42), ಮೂಡನಿದಂಬೂರು ಶಿರಿಬೀಡು ಮಠದಬೆಟ್ಟು ನಿವಾಸಿ ರಾಮರಾಜ್ (44), ಕುಂಜಿಬೆಟ್ಟು ಮೂಡಸಗ್ರಿ ನಿವಾಸಿ ಜಗದೀಶ್ (39), ಕೊಪ್ಪಳ ಮೂಲದ ಪ್ರಸ್ತುತ ಅಂಬಾಗಿಲು ನಿವಾಸಿ ಚಿದಾನಂದ (35), ಕೊಡವೂರು ಮಧ್ವನಗರ ನಿವಾಸಿ ತಿಪ್ಪೆಸ್ವಾಮಿ (52), ಉಡುಪಿ ಸಂತಕಟ್ಟೆ ನಿವಾಸಿ ರಾಘವೇಂದ್ರ (41), ಪುತ್ತೂರು ನಿವಾಸಿ ಉದಯ ಎಸ್ ಭಂಡಾರಿ (45) ಮತ್ತು ಉಚ್ಚಿಲ ನಿವಾಸಿ ಮನೋಜ್ ಕುಮಾರ್ (39) ಎಂದು ಗುರುತಿಸಲಾಗಿದೆ.

ಉಡುಪಿ ನಗರ, ಮಣಿಪಾಲ, ಮಲ್ಪೆ, ಕೋಟಾ ಮತ್ತು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. “ಸಂಘಟಿತ ಬೆಟ್ಟಿಂಗ್ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಟ್ಕಾ ಜೂಜಾಟದಲ್ಲಿ ಭಾಗಿಯಾಗಿರುವವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಈ ಕಾರ್ಯಾಚರಣೆಯಿಂದ ಈಗಾಗಲೇ 12 ಮಂದಿ ಬಂಧಿತರಾಗಿದ್ದಾರೆ, ಮತ್ತು ಹೆಚ್ಚಿನ ಕ್ರಮಗಳು ಕೈಗೊಳ್ಳಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನು ಇಂತಹ ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ವರದಿ ಮಾಡುವಂತೆ ಪೊಲೀಸ್ ಅಧಿಕಾರಿ ತಿಳಿಸಿದ್ದು, ಮಾಹಿತಿ ನೀಡಿದವರ ಗುರುತು ಗೌಪ್ಯವಾಗಿ ಇಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲ: ಕೇರಳದಿಂದ ಕರ್ನಾಟಕಕ್ಕೆ ಕಂಟೇನರ್ ವಾಹನದಲ್ಲಿ ಹಿಂಸಾತ್ಮಕ ಸಾಗಿಸುತ್ತಿದ್ದ 24 ಜಾನುವಾರುಗಳ ರಕ್ಷಣೆ

Next Post

ಮಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ, ಬಿಸಿ ಮುಟ್ಟಿಸಿದ ವಿಶೇಷ ಪೊಲೀಸ್ ತಂಡ, 6 ಮಂದಿ ಸೆರೆ

Related Posts

ಮಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ, ಬಿಸಿ ಮುಟ್ಟಿಸಿದ ವಿಶೇಷ ಪೊಲೀಸ್ ತಂಡ, 6 ಮಂದಿ ಸೆರೆ
ಕ್ರೈಮ್ ನ್ಯೂಸ್

ಮಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ, ಬಿಸಿ ಮುಟ್ಟಿಸಿದ ವಿಶೇಷ ಪೊಲೀಸ್ ತಂಡ, 6 ಮಂದಿ ಸೆರೆ

June 5, 2025
83
ಉಳ್ಳಾಲ: ಕೇರಳದಿಂದ ಕರ್ನಾಟಕಕ್ಕೆ ಕಂಟೇನರ್ ವಾಹನದಲ್ಲಿ ಹಿಂಸಾತ್ಮಕ ಸಾಗಿಸುತ್ತಿದ್ದ 24 ಜಾನುವಾರುಗಳ ರಕ್ಷಣೆ
ಕ್ರೈಮ್ ನ್ಯೂಸ್

ಉಳ್ಳಾಲ: ಕೇರಳದಿಂದ ಕರ್ನಾಟಕಕ್ಕೆ ಕಂಟೇನರ್ ವಾಹನದಲ್ಲಿ ಹಿಂಸಾತ್ಮಕ ಸಾಗಿಸುತ್ತಿದ್ದ 24 ಜಾನುವಾರುಗಳ ರಕ್ಷಣೆ

June 3, 2025
34
Next Post
ಮಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ, ಬಿಸಿ ಮುಟ್ಟಿಸಿದ ವಿಶೇಷ ಪೊಲೀಸ್ ತಂಡ, 6 ಮಂದಿ ಸೆರೆ

ಮಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ, ಬಿಸಿ ಮುಟ್ಟಿಸಿದ ವಿಶೇಷ ಪೊಲೀಸ್ ತಂಡ, 6 ಮಂದಿ ಸೆರೆ

Discussion about this post

Recent News

ಸೋಮೇಶ್ವರ, ಅಂಬಿಕಾ ರೋಡ್ ರಾಜಕಾಲುವೆಯ ಕಿರು ಸೇತುವೆಯ ಕೆಳಭಾಗ ಕುಸಿತ

ಸೋಮೇಶ್ವರ, ಅಂಬಿಕಾ ರೋಡ್ ರಾಜಕಾಲುವೆಯ ಕಿರು ಸೇತುವೆಯ ಕೆಳಭಾಗ ಕುಸಿತ

June 5, 2025
18
ಮಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ, ಬಿಸಿ ಮುಟ್ಟಿಸಿದ ವಿಶೇಷ ಪೊಲೀಸ್ ತಂಡ, 6 ಮಂದಿ ಸೆರೆ

ಮಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ, ಬಿಸಿ ಮುಟ್ಟಿಸಿದ ವಿಶೇಷ ಪೊಲೀಸ್ ತಂಡ, 6 ಮಂದಿ ಸೆರೆ

June 5, 2025
83
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸೋಮೇಶ್ವರ, ಅಂಬಿಕಾ ರೋಡ್ ರಾಜಕಾಲುವೆಯ ಕಿರು ಸೇತುವೆಯ ಕೆಳಭಾಗ ಕುಸಿತ

ಸೋಮೇಶ್ವರ, ಅಂಬಿಕಾ ರೋಡ್ ರಾಜಕಾಲುವೆಯ ಕಿರು ಸೇತುವೆಯ ಕೆಳಭಾಗ ಕುಸಿತ

June 5, 2025
ಮಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ, ಬಿಸಿ ಮುಟ್ಟಿಸಿದ ವಿಶೇಷ ಪೊಲೀಸ್ ತಂಡ, 6 ಮಂದಿ ಸೆರೆ

ಮಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ, ಬಿಸಿ ಮುಟ್ಟಿಸಿದ ವಿಶೇಷ ಪೊಲೀಸ್ ತಂಡ, 6 ಮಂದಿ ಸೆರೆ

June 5, 2025
ಉಡುಪಿ: ಮಟ್ಕಾ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ 12 ಮಂದಿ ಆರೋಪಿಗಳ ಬಂಧನ

ಉಡುಪಿ: ಮಟ್ಕಾ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ 12 ಮಂದಿ ಆರೋಪಿಗಳ ಬಂಧನ

June 3, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d