ಉಳ್ಳಾಲ, ಜೂ 2 : ಕೇರಳ ಭಾಗದಿಂದ ಕದ್ದು ಕಂಟೈನರ್ನಲ್ಲಿ ಕೂಡಿಹಾಕಿ ಅಕ್ರಮವಾಗಿ ಸಾಗಿ ಸು ತ್ತಿದ್ದ 24 ದನ ಗಳನ್ನು ರಕ್ಷಿಸಿರುವ ಸಿಸಿಬಿ ಪೊಲೀಸರು ಕಂಟೈನರ್ ಲಾರಿ ಯನ್ನು ವಶಕ್ಕೆ ತೆಗೆದು ಕೊಂಡು, ಆರೋಪಿ ಚಾಲಕ ಉತ್ತರ ಪ್ರದೇಶ ಮುಜಾಫರ್ ನಗರದ ಆಸಿಫ್ (25) ಎಂಬಾತನನ್ನು ಬಂಧಿಸಿ ದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ನೂತನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಬಂದ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಪಿಎಸ್ ಐ. ಶರಣಪ್ಪ ಭಂಡಾರಿ ನೇತೃತ್ವದ ತಂಡ ಜು. 1ರ ನಸುಕಿನ ಜಾವ ತಲಪಾಡಿ ಟೋಲ್ ಗೇಟ್ ಬಳಿ ಕಾರ್ಯಾಚರಣೆ ನಡೆಸಿತ್ತು. ದನಗಳನ್ನು ಕೇರಳದಿಂದ ಕಳವುಗೈದು ಸಾಗಿಸುತ್ತಿರುವುದಾಗಿ ಆರೋಪಿ ತಿಳಿಸಿದ್ದಾನೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post