ಕಾಸರಗೋಡು: ಉಪ್ಪಳ ಆಕ್ಸಿಸ್ ಬ್ಯಾಂಕ್ ನ ಎಟಿಎಂಗೆ ಹಣ ತುಂಬಲು ತಂದಿದ್ದ ವ್ಯಾನ್ ನಲ್ಲಿದ್ದ 50 ಲಕ್ಷ ರೂ.ಗಳನ್ನು ಕದ್ದ ಪ್ರಕರಣದಲ್ಲಿ ತಮಿಳುನಾಡು ಮೂಲದವರನ್ನು ಬಂಧಿಸಲಾಗಿದೆ. ಮುತ್ತು ಕುಮಾರನ್ ಅಲಿಯಾಸ್ ಮುತ್ತು ಎಂಬಾತನನ್ನು ಮಂಜೇಶ್ವರ ಪೊಲೀಸರು ತಿರುಚಿರಾಪಳ್ಳಿ ರಾಮ್ಜಿ ನಗರದಲ್ಲಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಮಾರ್ಚ್ 27 ರಂದು ಆಗಿದೆ. ತಮಿಳುನಾಡು ತಿರುತುಗ್ರಾಮಕ್ಕೆ ಸೇರಿದ ಮೂವರು ಉಪ್ಪಳ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಬಂದಿದ್ದ ವ್ಯಾನ್ ನಂ ಕೆಎಲ್ 07 ಸಿಸಿ 0358 ರ ಗಾಜು ಒಡೆದು ಹಣ ದೋಚಿದ್ದಾರೆ.
Discussion about this post