ಮಂಗಳೂರು, ಮಾ.6: ಉಳ್ಳಾಲ ದರ್ಗಾದಲ್ಲಿ ಏಳು ವರ್ಷದ ಸರ್ವಾಧಿಕಾರ ಅಂತ್ಯಗೊಂಡಿದ್ದು, ನೂತನ ಅಧ್ಯಕ್ಷರಾಗಿ ಬಾವಾ ಗುಲಾಮ್ ಹನೀಫ್ ಮತ್ತು ಉಪಾಧ್ಯಕ್ಷರಾಗಿ ರೈಟ್ ವೇ ಅಶ್ರಫ್ ಅಹ್ಮದ್ ಆಯ್ಕೆಯಾಗಿದ್ದಾರೆ.
ಉಳ್ಳಾಲ ಜುಮಾ ಮಸ್ಜಿದ್ ಮತ್ತು ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ ನೂತನ ಆಡಳಿತ ಸಮಿತಿಯ ಉಪಾದ್ಯಾಕ್ಷರಾಗಿ ಅಳೇಕಲ ಮೊಹಲ್ಲಾದ ರೈಟ್ ವೇ ಅಶ್ರಫ್, ಪ್ರಧಾನ ಕಾರ್ಯದರ್ಶಿಯಾಗಿ ಮೇಲಂಗಡಿಯ ಶಿಹಾಬುದ್ದೀನ್ ಸಖಾಫಿ ಹಾಗೂ ಕೊಶಾಧಿಕಾರಿಯಾಗಿ ಮುಕ್ಕಚ್ಚೇರಿ ಮೊಹಲ್ಲಾದ ನಾಝಿಂ ಕೋಟೆಪುರ ಆಯ್ಕೆಗೊಂಡಿದ್ದಾರೆ. ಉಳಿದ ಸ್ಥಾನಗಳಿಗೆ ಆಯ್ಕೆ ಇನ್ನಷ್ಟೇ ಆಗಬೇಕಾಗಿದೆ.
ಕೋಟೆಪುರ, ಮೇಲಂಗಡಿ, ಮುಕ್ಕಚ್ಚೇರಿ, ಅಳೇಕಲ, ಕಲ್ಲಾಪು ಹೀಗೆ ಐದು ಕರಿಯ(ವಲಯ)ಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ 80 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post