ಮಂಗಳೂರು, ಮಾ.7: ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿಯ ಬಪ್ಪನಾಡು ದೇವಸ್ಥಾನ ಮುಂಭಾಗದಲ್ಲಿ ಭೀಕರ ಅಪಘಾತ ನಡೆದಿದ್ದು, ಟ್ಯಾಂಕರ್ ಡಿಕ್ಕಿಯಾಗಿ ಸ್ಕೂಟರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಮೃತರನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕೋಳಿ ಕಾಲುಗುಡ್ಡೆ ನಿವಾಸಿಗಳಾದ ಅಕ್ಬರ್ ಬಾಷಾ (60), ಅವರ ಪತ್ನಿ ಖತೀಜಾಬಿ (46) ಎಂದು ಗುರುತಿಸಲಾಗಿದೆ. ಇವರು ಪಾಸ್ಪೋರ್ಟ್ ಮಾಡಿಸಲು ಮಂಗಳೂರಿನ ಪಾಸ್ಪೋರ್ಟ್ ಕಚೇರಿಗೆ ಬೆಳಗ್ಗೆ ಹೊರಟಿದ್ದವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುಲ್ಕಿ ತಲುಪಿದ್ದರು. ಬಪ್ಪನಾಡು ದೇವಸ್ಥಾನ ಮುಂಭಾಗದ ಬ್ಯಾರಿಕೇಡ್ ಹಾಕಿರುವಲ್ಲಿ ಸ್ಕೂಟರ್ ಸಾಗುತ್ತಿದ್ದಾಗ ಎಲ್ ಪಿಜಿ ಟ್ಯಾಂಕರ್ ಹಿಂಭಾಗದಿಂದ ಡಿಕ್ಕಿಯಾಗಿದೆ. ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ದಂಪತಿ ಸ್ಕೂಟರಿನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದು ಟ್ಯಾಂಕರ್ ಲಾರಿ ಇವರ ಮೇಲಿನಿಂದಲೇ ಹರಿದು ಹೋಗಿದೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post