• About us
  • Contact us
  • Disclaimer
Wednesday, November 5, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕರ್ನಾಟಕ ವಿಧಾನಸಭಾ ಚುನಾವಣೆ: ಹತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಸ್‌ಡಿಪಿಐ

Coastal Times by Coastal Times
January 8, 2023
in ರಾಜಕೀಯ
ಕರ್ನಾಟಕ ವಿಧಾನಸಭಾ ಚುನಾವಣೆ: ಹತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಸ್‌ಡಿಪಿಐ
46
VIEWS
WhatsappTelegramShare on FacebookShare on Twitter

ಬೆಂಗಳೂರು, ಜ. 08: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟ ಮಾಡಿದೆ. ಚುನಾವಣೆಯಲ್ಲಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದು, ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಬಾರಿ ಜಾತ್ಯತೀತ ಪಕ್ಷಗಳು ಎಂದು ಹೇಳಿಕೊಂಡು ಮತ ಪಡೆದಂತಹ ರಾಜಕೀಯ ಪಕ್ಷಗಳು ಮುಂದೆ ಬಟ್ಟೆ ವ್ಯಾಪಾರವಾದಂತೆ ಮಾರಾಟವಾದರು ಎಂದು ಆರೋಪಿಸಿದರು. ಬಿಜೆಪಿ ಪಕ್ಷಕ್ಕೆ ಅಜೆಂಡಾ ಇಲ್ಲ. ಅದಕ್ಕೆ ಇರುವುದು ಕೇವಲ ಕೋಮುವಾದದ ಅಜೆಂಡಾ ಮಾತ್ರ. ಇದಕ್ಕೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು ಅಭಿವೃದ್ಧಿ, ರಸ್ತೆ, ಚರಂಡಿ ಕೇಳಬೇಡಿ, ಲವ್ ಜಿಹಾದ್ ಬಗ್ಗೆ ಚರ್ಚೆ ಮಾಡಿ ಎಂದು ಹೇಳಿರುವುದೇ ಸಾಕ್ಷಿ ಎಂದು ಆರೋಪಿದ್ದಾರೆ.

ಎಸ್‌ಡಿಪಿಐ ಸ್ಪರ್ಧೆಯಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಆರೋಪದ ಬಗ್ಗೆ ಉತ್ತರಿಸಿದ ಎಂ.ಕೆ. ಫೈಝಿ, ‘ಕಾಂಗ್ರೆಸ್ ಸ್ಪರ್ಧೆಯಿಂದ, ಜೆಡಿಎಸ್ ಸ್ಪರ್ಧೆಯಿಂದ ಬಿಜೆಪಿಗೆ ಗೆಲುವಾಗುತ್ತದೆ ಎಂದು ಯಾಕೆ ಹೇಳುವುದಿಲ್ಲ. ನಾವು ನಮ್ಮದೇ ಆದಂತಹ ರಾಜಕೀಯ ಮಾಡುತ್ತೇವೆ’ ಎಂದಿದ್ದಾರೆ. ಜೊತೆಗೆ ಬಿಜೆಪಿಯೇತರ ಯಾವುದೇ ಪಕ್ಷದೊಂದಿಗೆ ಎಸ್‌ಡಿಪಿಐ ಪಕ್ಷ ಮೈತ್ರಿಗೆ ಸಿದ್ಧ ಎಂದು ಘೋಷಿಸಿದ್ದಾರೆ.

ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಇಂತಿವೆ ;  ಮೈಸೂರಿನ ನರಸಿಂಹರಾಜ ಕ್ಷೇತ್ರಕ್ಕೆ ಕೆ.ಎಚ್.ಅಬ್ದುಲ್ ಮಜೀದ್, ಬೆಂಗಳೂರಿನ ಪುಲಕೇಶಿನಗರಕ್ಕೆ (ಎಸ್‌ಸಿ) ಬಿ.ಆರ್.ಭಾಸ್ಕರ ಪ್ರಸಾದ್, ಬೆಂಗಳೂರಿನ ಸರ್ವಜ್ಞನಗರಕ್ಕೆ ಅಬ್ದುಲ್ ಹನ್ನಾನ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಇಲ್ಯಾಸ್ ಮಹಮ್ಮದ್ ತುಂಬೆ, ಮೂಡಬಿದಿರೆ ಕ್ಷೇತ್ರಕ್ಕೆ ಅಲ್ಫೋನ್ಸೋ ಫ್ರಾಂಕೋ, ದಕ್ಷಿಣ ಕನ್ನಡದ ಬೆಳ್ತಂಗಡಿ ಕ್ಷೇತ್ರಕ್ಕೆ ಅಕ್ಬರ್ ಬೆಳ್ತಂಗಡಿ, ಉಡುಪಿಯ ಕಾಪುಗೆ ಹನೀಫ್ ಮುಳೂರು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಇಸ್ಮಾಯಿಲ್ ಝಬೀವುಲ್ಲಾ, ಚಿತ್ರದುರ್ಗಕ್ಕೆ ಬಾಳೆಕಾಯಿ ಶ್ರೀನಿವಾಸ್‌, ವಿಜಯನಗರ ಕ್ಷೇತ್ರಕ್ಕೆ ನಜೀರ್ ಖಾನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.

ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಅಭ್ಯರ್ಥಿ ಅಂತಿಮವಾಗದ 44 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದ್ದು ಶೀಘ್ರವೇ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಕಳೆದ ಬಾರಿ ಎಸ್‍ಡಿಪಿಐ ಪಕ್ಷ ಜಾತ್ಯತೀತ ಪಕ್ಷಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿತ್ತು. ಅಧಿಕಾರಕ್ಕೆ ಬಂದ ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಪಕ್ಷದ 14 ಶಾಸಕರು ಮತ್ತು ಮೂವರು ಜೆಡಿಎಸ್ ಶಾಸಕರು ಹೇಗೆ ಮಾರಾಟವಾದರು ಅವರು ಆರೋಪಿಸಿದ್ದಾರೆ.

ಭ್ರಷ್ಟಾಚಾರರಹಿತ ಶುದ್ಧ ಆಡಳಿತ ನಮ್ಮ ಪಕ್ಷದ ಗುರಿಯಾಗಿದ್ದು, ಪಕ್ಷದ ವತಿಯಿಂದ ಇಲ್ಲಿಯವರೆಗೆ 300 ಜನ ಸ್ಥಳೀಯ ಸಂಸ್ಥೆಗಳ ಮೂಲಕ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಅವರೆಲ್ಲರೂ ಕೂಡ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುತ್ತಿದ್ದಾರೆ. ಅದೇ ರೀತಿಯಲ್ಲಿ ಶಾಸಕರಾಗಿ ಆಯ್ಕೆಯಾಗುವ ನಮ್ಮ ಪಕ್ಷದ ಅಭ್ಯರ್ಥಿಗಳು ಸಹ ಭ್ರಷ್ಟಾಚಾರರಹಿತ ಆಡಳಿತವನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಅರ್ಜಿಗೆ ಶುಲ್ಕವಿಲ್ಲ. ಅಭ್ಯರ್ಥಿಗಳು ಯಾರೂ ಕೂಡ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲ. ಬದಲಾಗಿ ಸಮಾಜದಲ್ಲಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವರನ್ನು ಪಕ್ಷವೇ ಗುರುತಿಸಿ ಟಿಕೆಟ್ ನೀಡುವ ಪರಿಪಾಠವನ್ನು ನಾವು ಇಟ್ಟುಕೊಂಡಿದ್ದೇವೆ. ಅಭ್ಯರ್ಥಿ ತನ್ನ ಖರ್ಚಿನಲ್ಲಿ ಚುನಾವಣೆಗೆ ಹೋಗುವುದಿಲ್ಲ. ಬದಲಾಗಿ ಪಕ್ಷ ಚುನಾವಣೆಯನ್ನು ಎದುರಿಸುತ್ತದೆ ಎಂದು ಅಬ್ದುಲ್ ಮಜೀದ್ ತಿಳಿಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಕುತ್ತಾರು ಬೈಕ್ ಅಪಘಾತ: ಯುವಕನ ಮಿದುಳು ನಿಷ್ಕ್ರಿಯ, ಅಂಗಾಂಗ ದಾನಕ್ಕೆ ಕುಟುಂಬದವರ ನಿರ್ಧಾರ

Next Post

ಮಂಗಳೂರು: ಗಾಂಜಾ, ಎಂಡಿಎಂ ಮಾದಕ ವಸ್ತು ಪ್ರಕರಣ – ಮೂವರ ಬಂಧನ

Related Posts

ರಾಜ್ಯ ಸರ್ಕಾರ ನಿಗಮ ಮಂಡಳಿಗೆ ನೇಮಕ: ಮೆಸ್ಕಾಂ ಹರೀಶ್ ಕುಮಾರ್, ಕರಾವಳಿ ಪ್ರಾಧಿಕಾರಕ್ಕೆ ಗಫೂರ್, ಪ್ರವಾಸೋದ್ಯಮ ಶಾಲೆಟ್ ಪಿಂಟೋ
ರಾಜಕೀಯ

ರಾಜ್ಯ ಸರ್ಕಾರ ನಿಗಮ ಮಂಡಳಿಗೆ ನೇಮಕ: ಮೆಸ್ಕಾಂ ಹರೀಶ್ ಕುಮಾರ್, ಕರಾವಳಿ ಪ್ರಾಧಿಕಾರಕ್ಕೆ ಗಫೂರ್, ಪ್ರವಾಸೋದ್ಯಮ ಶಾಲೆಟ್ ಪಿಂಟೋ

September 27, 2025
49
57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ
ರಾಜಕೀಯ

57 ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಜೆಂಟೀನಾಗೆ ಭೇಟಿ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ

July 5, 2025
40
Next Post
ಮಂಗಳೂರು: ಗಾಂಜಾ, ಎಂಡಿಎಂ ಮಾದಕ ವಸ್ತು ಪ್ರಕರಣ – ಮೂವರ ಬಂಧನ

ಮಂಗಳೂರು: ಗಾಂಜಾ, ಎಂಡಿಎಂ ಮಾದಕ ವಸ್ತು ಪ್ರಕರಣ - ಮೂವರ ಬಂಧನ

Discussion about this post

Recent News

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
25
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
24
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್

World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್

November 3, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d