• About us
  • Contact us
  • Disclaimer
Thursday, September 11, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕುಂದಾಪುರ: ಗೋಪಾಡಿ ಬೀಚ್‌ನಲ್ಲಿ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲು, ಓರ್ವನ‌ ರಕ್ಷಣೆ; ತುರ್ತು ಕರೆಗೆ ಈಶ್ವರ್‌ ಮಲ್ಪೆ ಸ್ಪಂದನೆ

Coastal Times by Coastal Times
September 8, 2025
in ಕರಾವಳಿ
ಕುಂದಾಪುರ: ಗೋಪಾಡಿ ಬೀಚ್‌ನಲ್ಲಿ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲು, ಓರ್ವನ‌ ರಕ್ಷಣೆ; ತುರ್ತು ಕರೆಗೆ ಈಶ್ವರ್‌ ಮಲ್ಪೆ ಸ್ಪಂದನೆ
24
VIEWS
WhatsappTelegramShare on FacebookShare on Twitter

ಉಡುಪಿ: ಸಮುದ್ರಕ್ಕೆ ಈಜಲು ಹೋದ ನಾಲ್ವರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಬೆಂಗಳೂರಿನಿಂದ 10 ಮಂದಿ ಯುವಕರ ತಂಡ ಗೋಪಾಡಿಗೆ ಬಂದಿದ್ದು, ಅದರಲ್ಲಿ ಏಳು ಮಂದಿ ಸಮುದ್ರಕ್ಕೆ ಇಳಿದು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ನಾಲ್ವರು ಅಲೆಗಳಿಗೆ ಸಿಲುಕಿ ನೀರು ಪಾಲಾಗಿದ್ದು, ಅವರಲ್ಲಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಧನುಷ್‌ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ಲೋಕೇಶ್‌, ಆಶೀಶ್‌, ಗೌತಮ್‌, ರಾಹುಲ್‌, ಕುಶಲ್‌, ಅನೀಶ್‌, ನಿರೂಪ್‌, ನಿತಿನ್‌ ಹಾಗೂ ಅಂಜನ್‌ ಅವರೊಂದಿಗೆ ಪ್ರವಾಸಿ ತಾಣಗಳ ವೀಕ್ಷಣೆಗೆಂದು ಬೆಂಗಳೂರಿನಿಂದ ರೈಲಿನಲ್ಲಿ ಶುಕ್ರವಾರ ಉಡುಪಿಗೆ ಬಂದಿಳಿದಿದ್ದರು. ಅಲ್ಲೆಲ್ಲ ಸುತ್ತಾಡಿ, ರವಿವಾರ ಬೆಳಗ್ಗೆ ಗೂಗಲ್‌ ಮ್ಯಾಪ್‌ ಮೂಲಕ ಬೀಚ್‌ ಲೊಕೇಶನ್‌ ಹಾಕಿ, ಇವರಲ್ಲಿ ಐವರು ಗೋಪಾಡಿಯ ಚರ್ಕಿಕಡು ಬೀಚ್‌ಗೆ ಬಂದಿದ್ದರು. ಅಲ್ಲಿ ಬಲೆ ಬೀಸುತ್ತಿದ್ದ ಕೆಲವರು ನೀರಿಗೆ ಇಳಿಯದಂತೆ ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿ ಇಳಿದಿದ್ದರು. ಸ್ವಲ್ಪ ಹೊತ್ತು ಈಜಾಡಿ, ಬಳಿಕ ತೆರಳಿದ್ದರು. ಆ ಬಳಿಕ ಮತ್ತೆ ಬೆಳಗ್ಗೆ 11.30ರ ಸುಮಾರಿಗೆ 10 ಮಂದಿ ಈಜಲು ಬೀಚ್‌ಗೆ ಬಂದಿದ್ದರು. ಆಗಲೂ ಇದು ಅಪಾಯಕಾರಿ ಸ್ಥಳ, ಆಳವಿದೆ. ಇಲ್ಲಿ ಇಳಿಯಬೇಡಿ ಎಂದು ಸ್ಥಳೀಯರು ಎಚ್ಚರಿಸಿದ್ದರು. ಆದರೂ ಇವರಲ್ಲಿ 9 ಮಂದಿ ಈಜಲು ಕಡಲಿಗಿಳಿದಿದ್ದರು. ಚರ್ಮದ ಅಲರ್ಜಿ ಇದ್ದುದರಿಂದ ಇವರಲ್ಲಿ ಒಬ್ಬನಾದ ಅಂಜನ್‌ ಬೀಚ್‌ಗೆ ಬಂದಿರಲಿಲ್ಲ.

ತುರ್ತು ಕರೆಗೆ ಈಶ್ವರ್‌ ಮಲ್ಪೆ ಸ್ಪಂದನೆ: ಘಟನೆಯ ಬಗ್ಗೆ ಸಮಾಜ ಸೇವಕ ಈಶ್ವರ್‌ ಮಲ್ಪೆಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ತತ್‌ಕ್ಷಣ ಸ್ಪಂದಿಸಿದ ಅವರು, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ್ದರು. ನೀರುಪಾಲಾಗಿ ಸಾವನ್ನಪ್ಪಿದ ಲೋಕೇಶ್‌ ಹಾಗೂ ಗೌತಮ್‌ ಅವರ ಮೃತದೇಹಗಳನ್ನು ತತ್‌ಕ್ಷಣ ಮೇಲೆತ್ತುವಲ್ಲಿ ಸ್ಥಳೀಯರೊಂದಿಗೆ ನೆರವಾದರು. ಸಂಜೆಯ ವೇಳೆಗೆ ಸ್ಥಳೀಯ ಮೀನುಗಾರರಿಗೆ ಅನೀಶ್‌ ಅವರ ಮೃತದೇಹ ಕೂಡ ಸಿಕ್ಕಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಯಿತು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಬೆಳ್ತಂಗಡಿ: ಎಸ್.ಐ.ಟಿ ಕಚೇರಿಗೆ ವಿಚಾರಣೆಗೆ ಹಾಜರಾದ ಕೇರಳದ ಯೂಟ್ಯೂಬರ್ ಮನಾಫ್

Next Post

ಮಂಗಳೂರು: 26 ವರ್ಷಗಳ ಹಿಂದೆ ಕೋಮುಗಲಭೆಯಲ್ಲಿ ಭಾಗಿಯಾದ ಆರೋಪಿಗಳಿಬ್ಬರನ್ನು ವಿದೇಶದಿಂದ ಬಂದಿದ್ದಾಗಲೇ ಅರೆಸ್ಟ್

Related Posts

ಉಳ್ಳಾಲ ಸೆ:14 ರಂದು ತಾಲೂಕು ಮಟ್ಟದ ದಸರಾ ಕಬಡ್ಡಿ -2025
ಕರಾವಳಿ

ಉಳ್ಳಾಲ ಸೆ:14 ರಂದು ತಾಲೂಕು ಮಟ್ಟದ ದಸರಾ ಕಬಡ್ಡಿ -2025

September 10, 2025
37
ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ಸೈವಾಕರ್’ ಆರಂಭ
ಆರೋಗ್ಯ

ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ಸೈವಾಕರ್’ ಆರಂಭ

September 9, 2025
16
Next Post
ಮಂಗಳೂರು: 26 ವರ್ಷಗಳ ಹಿಂದೆ ಕೋಮುಗಲಭೆಯಲ್ಲಿ ಭಾಗಿಯಾದ ಆರೋಪಿಗಳಿಬ್ಬರನ್ನು ವಿದೇಶದಿಂದ ಬಂದಿದ್ದಾಗಲೇ ಅರೆಸ್ಟ್

ಮಂಗಳೂರು: 26 ವರ್ಷಗಳ ಹಿಂದೆ ಕೋಮುಗಲಭೆಯಲ್ಲಿ ಭಾಗಿಯಾದ ಆರೋಪಿಗಳಿಬ್ಬರನ್ನು ವಿದೇಶದಿಂದ ಬಂದಿದ್ದಾಗಲೇ ಅರೆಸ್ಟ್

Discussion about this post

Recent News

ಉಳ್ಳಾಲ ಸೆ:14 ರಂದು ತಾಲೂಕು ಮಟ್ಟದ ದಸರಾ ಕಬಡ್ಡಿ -2025

ಉಳ್ಳಾಲ ಸೆ:14 ರಂದು ತಾಲೂಕು ಮಟ್ಟದ ದಸರಾ ಕಬಡ್ಡಿ -2025

September 10, 2025
37
ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ಸೈವಾಕರ್’ ಆರಂಭ

ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ಸೈವಾಕರ್’ ಆರಂಭ

September 9, 2025
16
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಉಳ್ಳಾಲ ಸೆ:14 ರಂದು ತಾಲೂಕು ಮಟ್ಟದ ದಸರಾ ಕಬಡ್ಡಿ -2025

ಉಳ್ಳಾಲ ಸೆ:14 ರಂದು ತಾಲೂಕು ಮಟ್ಟದ ದಸರಾ ಕಬಡ್ಡಿ -2025

September 10, 2025
ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ಸೈವಾಕರ್’ ಆರಂಭ

ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ಸೈವಾಕರ್’ ಆರಂಭ

September 9, 2025
ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ, ಭಾರತದ ಮೊಟ್ಟ ಮೊದಲ ಬೀಚ್‌ ಫೇಸಿಂಗ್ ಐಷಾರಾಮಿ ಮನೆಗಳ ಯೋಜನೆ – “ರೋಹನ್ ಮರೀನಾ ಒನ್”

ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ, ಭಾರತದ ಮೊಟ್ಟ ಮೊದಲ ಬೀಚ್‌ ಫೇಸಿಂಗ್ ಐಷಾರಾಮಿ ಮನೆಗಳ ಯೋಜನೆ – “ರೋಹನ್ ಮರೀನಾ ಒನ್”

September 9, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d