ಬೆಂಗಳೂರು : ಕನ್ನಡದ ʼಆಕಾಶದೀಪʼ ಧಾರಾವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ಇತ್ತೀಚೆಗಷ್ಟೇ ತಾವು ಮದುವೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಸ್ಯಾಂಡಲ್ ವುಡ್ ನಟಿ ಹಾಗೂ ಕಿರುತೆರೆ ನಟಿ ದಿವ್ಯಾ ಶ್ರೀಧರ್ ತಮ್ಮ ಗಂಡನಿಂದ ದೈಹಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ. ಗಂಡನಿಂದ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿವ್ಯಾ ಅವರು ಪತಿ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ವಿರುದ್ಧ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ದಿವ್ಯಾ, ನಾನು ಮತ್ತು ಅಮ್ಜದ್ ಖಾನ್ ಇತ್ತೀಚೆಗೆ ಮದುವೆಯಾಗಿದ್ದೇವು. 2017ರಿಂದಲೂ ನಾವಿಬ್ಬರು ಲಿವಿಂಗ್ ಟು ಗೆದರ್ ನಲ್ಲಿದ್ದೇವು. 5 ವರ್ಷದಿಂದ ಜೊತೆಗಿದ್ದೇವೆ. ಸ್ವಂತ ಮನೆ ತೆಗೆದುಕೊಳ್ಳಲು ನಾನೇ ಹಣಕಾಸಿನ ನೆರವು ನೀಡಿದ್ದೇನೆ. ಮದುವೆಗಿಂತ ಮೊದಲು ಕೊರೋನಾ ಲಾಕ್ಡೌನ್ ಸಮಯದಲ್ಲಿ ಅವನಿಗೆ ಏನು ಕೆಲಸ ಇರಲಿಲ್ಲ. ಇಂತಹ ಸಮಯದಲ್ಲೂ 30 ಲಕ್ಷ ಲೋನ್ ಮಾಡಿ, 30 ಸಾವಿರದಂತೆ ಸಾಲ ಕಟ್ಟಿದ್ದೇನೆ. ಅವನಿಗೆ ಒಂಚೂರು ಕಮ್ಮಿಯಾದಗಂತೆ ನೋಡಿಕೊಂಡರೂ ಅವನಿಂದಲೇ ಈಗ ಕಿರುಕುಳ ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ.ಮದ್ವೆ ವಿಚಾರ ಗುಟ್ಟಾಗಿ ಇಡಲು ಹೇಳಿದ್ದ. ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕದಂತೆ ಎಚ್ಚರಿಕೆ ನೀಡಿದ್ದ. ಇದೇ ವಿಚಾರದಲ್ಲಿ ಹಲವು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಇದೀಗ ನನ್ನನ್ನು ದೂರ ಇಟ್ಟಿದ್ದಾನೆ ಎಂದು ದಿವ್ಯಾ ಕಣ್ಣೀರಿಟ್ಟಿದ್ದಾರೆ.
ಆತ ನನ್ನ ಹೊಟ್ಟೆಗೆ ಒದಿದ್ದು ತೀವ್ರ ನೋವಿನಿಂದ ಕೆಳಗೆ ಬಿದ್ದೆ. ಆಗ ಆತ ನನ್ನ ಕೈಕಾಲುಗಳನ್ನೆಲ್ಲಾ ತುಳಿದ ಇದು ವಿಪರೀತ ನೋವು ಕೊಟ್ಟಿದು. ನಂತರ ನಾನು ಲೋ ಬಿಪಿಯಾಗಿ ಅಸ್ವಸ್ಥಳಾದೆ. ಕೆಲ ಸಮಯದ ನಂತರ ನನಗೆ ಪ್ರಜ್ಞೆ ಬಂದಿತ್ತು. ಆತ ಮನೆಯಲ್ಲೇ ಇದ್ದರೂ ನನ್ನ ಬಳಿ ಬಂದು ನೋಡಲಿಲ್ಲ. ಮರುದಿನ ಬೆಳಗ್ಗೆ ಅತೀವ ರಕ್ತಸ್ರಾವ ಆಯ್ತು. ಆಗ ಆತನಿಗೆ ಕರೆ ಮಾಡಿದೆ. ಅವನು ಬೇರೆ ಅಪಾರ್ಟ್ಮೆಂಟ್ನಲ್ಲಿ ಇದ್ದಾನೆ ಎಂದು ಹೇಳಿದರು ಎಂದು ದಿವ್ಯಾ ಶ್ರೀಧರ್ ಅಲವತ್ತುಗೊಂಡಿದ್ದಾರೆ. ಇನ್ನು ನಾನು ಗರ್ಭೀಣಿಯಾಗಿದ್ದು ಇದರಿಂದ ಗರ್ಭಪಾತವಾಗಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದು ನಟಿ ಹೇಳಿದ್ದಾರೆ.

ವಿಚಿತ್ರ ಪ್ರೇಮಿ, ಹುಚ್ಚುಡುಗಿ, ಹೀಗೂ ಉಂಟಾ, ಸಾಚಾ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ದಿವ್ಯಾ ನಟಿಸಿದ್ದಾರೆ. ಸದ್ಯ, ತಮಿಳಿನ ಸೀರಿಯಲ್ ಒಂದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಪತಿಯಿಂದ ಕಿರುಕುಳಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post