• About us
  • Contact us
  • Disclaimer
Saturday, November 15, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು

Coastal Times by Coastal Times
October 10, 2025
in ಕ್ರೈಮ್ ನ್ಯೂಸ್
ಮೈಸೂರು ದಸರಾದಲ್ಲಿ ಬಲೂನು ಮಾರಾಟಕ್ಕೆ ಬಂದ 9 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಕೀಚಕನಿಗೆ ಪೊಲೀಸ್ ಗುಂಡೇಟು
155
VIEWS
WhatsappTelegramShare on FacebookShare on Twitter

ಮೈಸೂರು: ದಸರಾ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ಬಲೂನು, ಇತರ ವಸ್ತುಗಳನ್ನು ಮಾರಲು ಬಂದಿದ್ದ 9 ವರ್ಷದ ಬಾಲಕಿಯ ಶವ ನಗರದ ಕುಸ್ತಿ ಅಖಾಡದ ಮುಂಭಾಗದ ಮೈದಾನದಲ್ಲಿ ದೊರೆತಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ನಜರ್​ಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಸರಾ ಸಂದರ್ಭದಲ್ಲಿ ಬಲೂನು ಮಾರಲು 500ಕ್ಕೂ ಹೆಚ್ಚು ಜನರಿದ್ದ ಸುಮಾರು 50 ಕುಟುಂಬಗಳು ಕಲಬುರಗಿ ಜಿಲ್ಲೆಯಿಂದ ಮೈಸೂರಿಗೆ ಬಂದಿವೆ. ಹೀಗೆ ಬಂದವರು ದಸರಾ ವಸ್ತು ಪ್ರದರ್ಶನದ ಪಕ್ಕದ ಕುಸ್ತಿ ಅಖಾಡದ ಮುಂಭಾಗದಲ್ಲಿರುವ ಇಟ್ಟಿಗೆ ಗೂಡಿನ ಮೈದಾನದಲ್ಲಿ ಶೆಡ್ ಹಾಕಿಕೊಂಡು ವಾಸ್ತವ್ಯ ಹೂಡಿದ್ದರು. ಒಂದು ಕುಟುಂಬದ 8 ಜನ ಶೆಡ್‌ವೊಂದರಲ್ಲಿ ಮಲಗಿದ್ದರು. ಈ ಸಂದರ್ಭದಲ್ಲಿ ಅವರ ಜೊತೆಗಿದ್ದ 9 ವರ್ಷದ ಬಾಲಕಿ ನಾಪತ್ತೆಯಾಗಿದ್ದಾಳೆ. ಬೆಳಗಿನ ಜಾವ ಈ ಬಗ್ಗೆ ತಿಳಿದ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಬಳಿಕ, ಕೆಲ ಹೊತ್ತಲ್ಲೇ ಶೆಡ್ ಪಕ್ಕದಲ್ಲೇ ಬಾಲಕಿಯ ಶವ ಪತ್ತೆಯಾಗಿದೆ.

ಬಾಲಕಿಯ ತಾಯಿ ನೀಡಿದ ದೂರಿನ ವಿವರ: ನನ್ನ ಮಗಳು ಎಂದಿನಂತೆ ಅವಳ ಅಜ್ಜಿಯ ಜೊತೆ ಮಲಗಿದ್ದಳು. ಬೆಳಗಿನಜಾವ ಮಳೆ ಬಂದಿದ್ದರಿಂದ ಜೋಪಡಿಗೆ ಟಾರ್ಪಲ್ ಹಾಕುವ ಸಲುವಾಗಿ ನಾನು ಮತ್ತು ನನ್ನ ಗಂಡ ಇಬ್ಬರು ಎದ್ದೆವು. ಆಗ ಮಗಳು ಕಾಣಿಸಲಿಲ್ಲ. ತಕ್ಷಣ ಅಕ್ಕ-ಪಕ್ಕದ ಜೋಪಡಿಗಳಲ್ಲಿ ಹುಡುಕಾಡಿದರೂ ಸಹ ಅವಳು ಕಂಡುಬರಲಿಲ್ಲ. ಆಗ ಅಲ್ಲೇ ಪಕ್ಕದ ಜಾಗವೊಂದರಲ್ಲಿ ಮಗಳ ಚೂಡಿದಾರದ ಪ್ಯಾಂಟ್, ಇತರ ಬಟ್ಟೆ ಸಿಕ್ಕಿತು. ಸುತ್ತಮುತ್ತ ಹುಡುಕಾಡಿದಾಗ ಹತ್ತಿರದಲ್ಲಿದ್ದ ಒಂದು ಗುಂಡಿಯಲ್ಲಿ ಮಗಳು ಕಂಡುಬಂದಳು. ಅವಳ ಮೈಮೇಲೆ ಚೂಡಿದಾರದ ಟಾಪ್ ಬಟ್ಟೆ ಮಾತ್ರ ಇತ್ತು. ಅವಳನ್ನು ಎತ್ತಿಹಿಡಿದು ಮಾತನಾಡಿಸಲು ಯತ್ನಿಸಿದಾಗ ಆಕೆ ಮಾತನಾಡಲಿಲ್ಲ. ಅವಳ ತಲೆಯ ಎಡಭಾಗಕ್ಕೆ ಗಾಯಗಳಾಗಿ ರಕ್ತ ಬಂದಿದ್ದು, ಎಡಭಾಗದ ಕೆನ್ನೆ, ಕತ್ತು ಸೇರಿದಂತೆ ಇತರೆಡೆ ಗಾಯವಾಗಿತ್ತು. ಯಾರೋ ರಾತ್ರಿ ಮಗಳನ್ನು ಕಿಡ್ನಾಪ್ ಮಾಡಿ, ರೇಪ್ ಮಾಡಿ, ಕೊಲೆ ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಬಾಲಕಿಯ ತಾಯಿ ಆಗ್ರಹಿಸಿದ್ದಾರೆ.

ದಸರಾ ದೀಪಾಲಂಕಾರ ಇನ್ನೂ ಇರುವ ಕಾರಣ ಹೊಟ್ಟೆಪಾಡಿಗಾಗಿ ದಸರಾಕ್ಕೆ ಕುಟುಂಬ ಕಟ್ಟಿಕೊಂಡು ಬಂದ ಹಲವರು ನಗರದ ಅರಮನೆ, ವಸ್ತು ಪ್ರದರ್ಶನ ಆವರಣ, ಚಾಮುಂಡಿಬೆಟ್ಟ, ದೇವರಾಜು ಅರಸು ರಸ್ತೆ ಹಾಗೂ ದೇವರಾಜ ಮಾರುಕಟ್ಟೆ ಸೇರಿದಂತೆ ಹಲವು ಕಡೆ ವ್ಯಾಪಾರ ಮಾಡಿಕೊಂಡು ರಾತ್ರಿ ಈ ಮೈದಾನದಲ್ಲಿ ಮಾಡಿಕೊಂಡಿದ್ದ ಶೆಡ್​​ನಲ್ಲಿ ಮಲಗುತ್ತಿದ್ದರು.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಪೊಲೀಸ್ ಶ್ವಾನ ದಳ ಹಾಗೂ ಎಫ್​​ಎಸ್​​ಎಲ್ ತಂಡಗಳು ಭೇಟಿ ನೀಡಿ, ಪರಿಶೀಲನೆ ನಡೆಸಿವೆ. ಕಾನೂನು ಸುವ್ಯವಸ್ಥೆ ಡಿಸಿಪಿ ಬಿಂದುರಾಣಿ ಮಾಹಿತಿ ನೀಡಿ, ”ಘಟನೆ ಬಗ್ಗೆ ತಂದೆ, ತಾಯಿಯರಿಂದ ದೂರು ಸ್ವೀಕರಿಸಲಾಗಿದೆ. ಬಾಲಕಿಯ ಸಾವಿನ ಕುರಿತಂತೆ ತನಿಖೆ ನಡೆಸಲಾಗುವುದು” ಎಂದರು. ಈ ಕುರಿತಂತೆ ಸ್ಥಳೀಯರೊಬ್ಬರು ಮಾತನಾಡಿ, ”ಬಾಲಕಿಯ ಶವವನ್ನು ಬೆಳಗ್ಗೆ 6:30ಕ್ಕೆ ನೋಡಿದ್ದೇವೆ. ಏನಾಗಿದೆ ಎಂಬುದು ಗೊತ್ತಿಲ್ಲ. ಪೊಲೀಸರು ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರಿನ ಸರ್ಕಾರಿ ವೆನ್ಲಾಕ್​​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭ; ಬಡವರಿಗೆ ಕಡಿಮೆ ದರದಲ್ಲಿ ಹಾರ್ಟ್ ಟ್ರೀಟ್​ಮೆಂಟ್​

Next Post

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

Related Posts

ಮಂಗಳೂರಿನಲ್ಲಿ ಮಹಿಳೆಗೆ ಮುಂಬೈ ಪೊಲೀಸ್ ಎಂದು ಬೆದರಿಸಿ ʼಡಿಜಿಟಲ್ ಅರೆಸ್ಟ್ʼ: 1.81 ಕೋಟಿ ರೂ. ವಂಚನೆ
ಕ್ರೈಮ್ ನ್ಯೂಸ್

ಮಂಗಳೂರಿನಲ್ಲಿ ಮಹಿಳೆಗೆ ಮುಂಬೈ ಪೊಲೀಸ್ ಎಂದು ಬೆದರಿಸಿ ʼಡಿಜಿಟಲ್ ಅರೆಸ್ಟ್ʼ: 1.81 ಕೋಟಿ ರೂ. ವಂಚನೆ

November 14, 2025
50
ಉಳ್ಳಾಲ: ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರ ಬಂಧನ
ಕ್ರೈಮ್ ನ್ಯೂಸ್

ಉಳ್ಳಾಲ: ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರ ಬಂಧನ

November 11, 2025
764
Next Post
ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

ಎರಡೂ ಕಾಲು ಕಳೆದುಕೊಂಡ ಅಶ್ವಿ‌ನಿಗೆ ನೋಟಿಸ್‌ ನೀಡಿ ಅಧಿಕಾರಿಯೇ ಗೈರು ಸ್ಥಳೀಯರ ತೀವ್ರ ಆಕ್ರೋಶ

Discussion about this post

Recent News

ನವಮಂಗಳೂರು ಬಂದರ್‌ನ ಸುವರ್ಣ ಮಹೋತ್ಸವ: 1,507 ಕೋಟಿ ರೂ.ಗಳ 20 ಯೋಜನೆಗಳಿಗೆ ಚಾಲನೆ, ದೇಶದಲ್ಲಿ ಹಡಗು ನಿರ್ಮಾಣದ ಕ್ಲಸ್ಟರ್ ಅಭಿವೃದ್ಧಿ; ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್

ನವಮಂಗಳೂರು ಬಂದರ್‌ನ ಸುವರ್ಣ ಮಹೋತ್ಸವ: 1,507 ಕೋಟಿ ರೂ.ಗಳ 20 ಯೋಜನೆಗಳಿಗೆ ಚಾಲನೆ, ದೇಶದಲ್ಲಿ ಹಡಗು ನಿರ್ಮಾಣದ ಕ್ಲಸ್ಟರ್ ಅಭಿವೃದ್ಧಿ; ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್

November 14, 2025
25
ಮಂಗಳೂರಿನಲ್ಲಿ ಮಹಿಳೆಗೆ ಮುಂಬೈ ಪೊಲೀಸ್ ಎಂದು ಬೆದರಿಸಿ ʼಡಿಜಿಟಲ್ ಅರೆಸ್ಟ್ʼ: 1.81 ಕೋಟಿ ರೂ. ವಂಚನೆ

ಮಂಗಳೂರಿನಲ್ಲಿ ಮಹಿಳೆಗೆ ಮುಂಬೈ ಪೊಲೀಸ್ ಎಂದು ಬೆದರಿಸಿ ʼಡಿಜಿಟಲ್ ಅರೆಸ್ಟ್ʼ: 1.81 ಕೋಟಿ ರೂ. ವಂಚನೆ

November 14, 2025
50
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನವಮಂಗಳೂರು ಬಂದರ್‌ನ ಸುವರ್ಣ ಮಹೋತ್ಸವ: 1,507 ಕೋಟಿ ರೂ.ಗಳ 20 ಯೋಜನೆಗಳಿಗೆ ಚಾಲನೆ, ದೇಶದಲ್ಲಿ ಹಡಗು ನಿರ್ಮಾಣದ ಕ್ಲಸ್ಟರ್ ಅಭಿವೃದ್ಧಿ; ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್

ನವಮಂಗಳೂರು ಬಂದರ್‌ನ ಸುವರ್ಣ ಮಹೋತ್ಸವ: 1,507 ಕೋಟಿ ರೂ.ಗಳ 20 ಯೋಜನೆಗಳಿಗೆ ಚಾಲನೆ, ದೇಶದಲ್ಲಿ ಹಡಗು ನಿರ್ಮಾಣದ ಕ್ಲಸ್ಟರ್ ಅಭಿವೃದ್ಧಿ; ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್

November 14, 2025
ಮಂಗಳೂರಿನಲ್ಲಿ ಮಹಿಳೆಗೆ ಮುಂಬೈ ಪೊಲೀಸ್ ಎಂದು ಬೆದರಿಸಿ ʼಡಿಜಿಟಲ್ ಅರೆಸ್ಟ್ʼ: 1.81 ಕೋಟಿ ರೂ. ವಂಚನೆ

ಮಂಗಳೂರಿನಲ್ಲಿ ಮಹಿಳೆಗೆ ಮುಂಬೈ ಪೊಲೀಸ್ ಎಂದು ಬೆದರಿಸಿ ʼಡಿಜಿಟಲ್ ಅರೆಸ್ಟ್ʼ: 1.81 ಕೋಟಿ ರೂ. ವಂಚನೆ

November 14, 2025
ನ.16ರಂದು ಕಟೀಲು 7ನೇ ಮೇಳದ ಪದಾರ್ಪಣೆ, ನ.15ರಂದು ಸಂಜೆ ಬಜಪೆ ಪೇಟೆಯಿಂದ ದೇವಸ್ಥಾನದ ವರೆಗೆ ಮೆರವಣಿಗೆ

ನ.16ರಂದು ಕಟೀಲು 7ನೇ ಮೇಳದ ಪದಾರ್ಪಣೆ, ನ.15ರಂದು ಸಂಜೆ ಬಜಪೆ ಪೇಟೆಯಿಂದ ದೇವಸ್ಥಾನದ ವರೆಗೆ ಮೆರವಣಿಗೆ

November 13, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d