• About us
  • Contact us
  • Disclaimer
Friday, December 12, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ರೈಲಿನಲ್ಲಿ ನಿದ್ರಿಸಿದ ಚಿನ್ನದ ವ್ಯಾಪಾರಿ: 4,456 ಗ್ರಾಂ ತೂಕದ 5.33 ಕೋಟಿ ರೂ.ಮೌಲ್ಯದ ಚಿನ್ನಾಭರಣದ ಬ್ಯಾಗ್​ಗಳನ್ನ ಎಗರಿಸಿದ ಖದೀಮರು

Coastal Times by Coastal Times
December 10, 2025
in ಕ್ರೈಮ್ ನ್ಯೂಸ್
ರೈಲಿನಲ್ಲಿ ನಿದ್ರಿಸಿದ ಚಿನ್ನದ ವ್ಯಾಪಾರಿ: 4,456 ಗ್ರಾಂ ತೂಕದ 5.33 ಕೋಟಿ ರೂ.ಮೌಲ್ಯದ ಚಿನ್ನಾಭರಣದ ಬ್ಯಾಗ್​ಗಳನ್ನ ಎಗರಿಸಿದ ಖದೀಮರು
41
VIEWS
WhatsappTelegramShare on FacebookShare on Twitter

ಮಹಾರಾಷ್ಟ್ರ: ಮುಂಬೈ ಮೂಲದ ಚಿನ್ನದ ವ್ಯಾಪಾರಿಯೊಬ್ಬ ಸೋಲಾಪುರದಿಂದ ಮುಂಬೈಗೆ ರೈಲು ಪ್ರಯಾಣ ಮಾಡುತ್ತಿದ್ದರು. ಅವರು ನಿದ್ರೆಗೆ ಜಾರಿದ ವೇಳೆ, ಅವರ ಬಳಿ ಇದ್ದ 5.53 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಡಿಸೆಂಬರ್ 6 ಮತ್ತು 7ರ ಮಧ್ಯರಾತ್ರಿ ಸಂತ್ರಸ್ತರು ಸಿದ್ಧೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೋಲಾಪುರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಣ್ ಸರ್ಕಾರಿ ರೈಲ್ವೆ ಪೊಲೀಸರ (ಜಿಆರ್‌ಪಿ) ಪ್ರಕಾರ, ವ್ಯಾಪಾರಿ 4,456 ಗ್ರಾಂ ಚಿನ್ನದ ಆಭರಣಗಳನ್ನು ಹೊಂದಿರುವ ಎರಡು ಟ್ರಾಲಿ ಬ್ಯಾಗ್‌ಗಳನ್ನು ಸರಪಳಿಯಿಂದ ಭದ್ರಪಡಿಸಿಕೊಂಡು ತಮ್ಮ ಸೀಟಿನ ಕೆಳಗೆ ಇಟ್ಟಿದ್ದರು. ಅವರು ನಿದ್ರಿಸುತ್ತಿದ್ದಾಗ ಅಪರಿಚಿತ ಕಳ್ಳನೊಬ್ಬ ಸರಪಣಿ ಮುರಿದು ಎರಡೂ ಬ್ಯಾಗ್‌ಗಳನ್ನು ಕದ್ದು, ಸೋಲಾಪುರ ಮತ್ತು ಕಲ್ಯಾಣ್ ಮಾರ್ಗದ ನಡುವೆ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ವ್ಯಾಪಾರಿ ನಿದ್ದೆ ಮಾಡುತ್ತಿದ್ದಾಗ ಬಂಗಾರದ ಬ್ಯಾಗ್​ಗಳನ್ನ ಎಗರಿಸಿದ ಖದೀಮರು: ನಿದ್ದೆಯಿಂದ ಎಚ್ಚರಗೊಂಡ ವ್ಯಾಪಾರಿ, ಎರಡೂ ಬ್ಯಾಗ್‌ಗಳು ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ತಕ್ಷಣ ಗಾಬರಿಗೊಂಡ ಅವರು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಭರಣ ಕಳೆದುಕೊಂಡ ವ್ಯಾಪಾರಿ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 305 (ಸಿ) ಅಡಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆಯ ಕುರಿತಂತೆ ಮಾತನಾಡಿರುವ ಕಲ್ಯಾಣ್ ಜಿಆರ್‌ಪಿಯ ಹಿರಿಯ ಇನ್ಸ್‌ಪೆಕ್ಟರ್ ಪಂಢರಿ ಕಾಂಡೆ, ನಾವು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದೇವೆ. ಕಳ್ಳರು ವ್ಯಾಪಾರಿ ನಿದ್ದೆಗೆ ಜಾರಿದ್ದರ ಲಾಭ ಪಡೆದು ಚಿನ್ನದ ಆಭರಣಗಳನ್ನು ಹೊಂದಿರುವ ಚೀಲಗಳೊಂದಿಗೆ ಪರಾರಿಯಾಗಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಶಂಕಿತನನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ. ಆರೋಪಿಗಳನ್ನು ಪತ್ತೆಹಚ್ಚಲು ಜಿಆರ್‌ಪಿ ತಂಡಗಳು ಪ್ರಯಾಣಿಕರ ಪಟ್ಟಿ, ಮಾರ್ಗದ ಉದ್ದಕ್ಕೂ ಇರುವ ನಿಲ್ದಾಣಗಳಿಂದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಂಭಾವ್ಯ ಪ್ರವೇಶ – ನಿರ್ಗಮನಗಳನ್ನು ಪರಿಶೀಲಿಸುತ್ತಿವೆ ಎಂದು ತಿಳಿಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

10 ಬಾಂಗ್ಲಾ ಅಕ್ರಮ ವಲಸಿಗರಿಗೆ ಜೈಲು ಶಿಕ್ಷೆ ವಿಧಿಸಿದ ಉಡುಪಿ ಕೋರ್ಟ್​

Next Post

ಭಟ್ರಕುಮೇರು ಸ್ವಾಮಿ ಬಾಲ ತನಿಯ ಕ್ಷೇತ್ರ : ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ ಸಂಪನ್ನ

Related Posts

ಪುತ್ತೂರು: ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌಲ್ಯದ 80 ಕಾಫಿ ಚೀಲ ಕಳ್ಳತನ ಐವರು ಆರೋಪಿಗಳ ಬಂಧನ
ಕ್ರೈಮ್ ನ್ಯೂಸ್

ಪುತ್ತೂರು: ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌಲ್ಯದ 80 ಕಾಫಿ ಚೀಲ ಕಳ್ಳತನ ಐವರು ಆರೋಪಿಗಳ ಬಂಧನ

December 9, 2025
92
ವಿದೇಶದಲ್ಲಿ ಕುಳಿತು ಭಗವದ್ಗೀತೆ ಮತ್ತು ಮಹಿಳೆ ಬಗ್ಗೆ ಅವಹೇಳನ ಪೋಸ್ಟ್ ; ಮುಂಬೈ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್
ಕ್ರೈಮ್ ನ್ಯೂಸ್

ವಿದೇಶದಲ್ಲಿ ಕುಳಿತು ಭಗವದ್ಗೀತೆ ಮತ್ತು ಮಹಿಳೆ ಬಗ್ಗೆ ಅವಹೇಳನ ಪೋಸ್ಟ್ ; ಮುಂಬೈ ಏರ್ಪೋರ್ಟ್ ನಲ್ಲಿ ಆರೋಪಿ ಅರೆಸ್ಟ್

December 9, 2025
74
Next Post
ಭಟ್ರಕುಮೇರು ಸ್ವಾಮಿ ಬಾಲ ತನಿಯ ಕ್ಷೇತ್ರ  : ಪ್ರತಿಷ್ಠಾವರ್ಧಂತಿ ಹಾಗೂ  ಕೋಲ ಸೇವೆ ಸಂಪನ್ನ

ಭಟ್ರಕುಮೇರು ಸ್ವಾಮಿ ಬಾಲ ತನಿಯ ಕ್ಷೇತ್ರ : ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ ಸಂಪನ್ನ

Discussion about this post

Recent News

ಮಂಗಳೂರು: ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, ತಪಾಸಣೆಗೆ ಸಿಕ್ಕಿಬಿದ್ದ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಮಂಗಳೂರು: ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, ತಪಾಸಣೆಗೆ ಸಿಕ್ಕಿಬಿದ್ದ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

December 11, 2025
64
ಬಂಟ್ವಾಳ: ಹೊಟೇಲ್ ಮುಂಭಾಗದಲ್ಲಿದ್ದ ಖಾದ್ಯಕ್ಕಾಗಿ‌ ಇರಿಸಲಾಗಿದ್ದ ಶವರ್ಮಾ ತಿನ್ನುತ್ತಿರುವ ನಾಯಿ‌ – ವಿಡಿಯೋ ವೈರಲ್

ಬಂಟ್ವಾಳ: ಹೊಟೇಲ್ ಮುಂಭಾಗದಲ್ಲಿದ್ದ ಖಾದ್ಯಕ್ಕಾಗಿ‌ ಇರಿಸಲಾಗಿದ್ದ ಶವರ್ಮಾ ತಿನ್ನುತ್ತಿರುವ ನಾಯಿ‌ – ವಿಡಿಯೋ ವೈರಲ್

December 11, 2025
103
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, ತಪಾಸಣೆಗೆ ಸಿಕ್ಕಿಬಿದ್ದ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಮಂಗಳೂರು: ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, ತಪಾಸಣೆಗೆ ಸಿಕ್ಕಿಬಿದ್ದ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

December 11, 2025
ಬಂಟ್ವಾಳ: ಹೊಟೇಲ್ ಮುಂಭಾಗದಲ್ಲಿದ್ದ ಖಾದ್ಯಕ್ಕಾಗಿ‌ ಇರಿಸಲಾಗಿದ್ದ ಶವರ್ಮಾ ತಿನ್ನುತ್ತಿರುವ ನಾಯಿ‌ – ವಿಡಿಯೋ ವೈರಲ್

ಬಂಟ್ವಾಳ: ಹೊಟೇಲ್ ಮುಂಭಾಗದಲ್ಲಿದ್ದ ಖಾದ್ಯಕ್ಕಾಗಿ‌ ಇರಿಸಲಾಗಿದ್ದ ಶವರ್ಮಾ ತಿನ್ನುತ್ತಿರುವ ನಾಯಿ‌ – ವಿಡಿಯೋ ವೈರಲ್

December 11, 2025
ಪಡುಬಿದ್ರೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಗೌಜಿ ಇವೆಂಟ್ಸ್ ಮಾಲಕ ಅಭಿಷೇಕ್ ಮೃತ್ಯು

ಪಡುಬಿದ್ರೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಗೌಜಿ ಇವೆಂಟ್ಸ್ ಮಾಲಕ ಅಭಿಷೇಕ್ ಮೃತ್ಯು

December 10, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d