• About us
  • Contact us
  • Disclaimer
Friday, August 1, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮುಲ್ಕಿಯ ರಿಕ್ಷಾ ಚಾಲಕ ಶರೀಫ್ ಕೊಲೆ ಪ್ರಕರಣ: ಮೂರು ದಿನದಲ್ಲಿ ಆರೋಪಿಯನ್ನು ಬಂಧಿಸಿದ ಎಸ್‌ಐಟಿ

Coastal Times by Coastal Times
April 15, 2025
in ಕ್ರೈಮ್ ನ್ಯೂಸ್
ಮುಲ್ಕಿಯ ರಿಕ್ಷಾ ಚಾಲಕ ಶರೀಫ್ ಕೊಲೆ ಪ್ರಕರಣ: ಮೂರು ದಿನದಲ್ಲಿ ಆರೋಪಿಯನ್ನು ಬಂಧಿಸಿದ ಎಸ್‌ಐಟಿ
134
VIEWS
WhatsappTelegramShare on FacebookShare on Twitter

ಕಾಸರಗೋಡು , ಏ.14 : ಮೂಲ್ಕಿ ಮೂಲದ ಆಟೋರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ( 52) ರವರನ್ನು ಕೊಲೆಗೈದು ಮಂಜೇಶ್ವರ ಸಮೀಪ ಬಾವಿಗೆಸೆದ ಪ್ರಕರಣದ ಆರೋಪಿಯನ್ನು ವಿಶೇಷ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ

ಸುರತ್ಕಲ್ ನ ಅಭಿಷೇಕ್ ಶೆಟ್ಟಿ (40) ಬಂಧಿತ ಆರೋಪಿ . ಪೂರ್ವ ದ್ವೇಷ ಕೃತ್ಯಕ್ಕೆ ಕಾರಣವಾಗಿದ್ದು , ತಾನು ಓರ್ವನೇ ಕೃತ್ಯ ನಡೆಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಇನ್ನಷ್ಟು ದಿನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಿ ಸಿ ಟಿ ವಿ ಕ್ಯಾಮರಾ ಹಾಗೂ ಇನ್ನಿತರ ಮಾಹಿತಿ ಆಧಾರದಲ್ಲಿ ಆರೋಪಿಯ ಸುಳಿವು ಲಭಿಸಿದ್ದು , ಬೈಕಂಪಾಡಿಯಿಂದ ಈತನನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಾದಕ ವಸ್ತು ಸೇವನೆಯ ಮತ್ತಿನಲ್ಲಿ ಶರೀಫ್ ರನ್ನು ಕೊಲೆಗೈದಿದ್ದು , ಈತನ ವಿರುದ್ಧ ಗಾಂಜಾ ಸೇರಿದಂತೆ ಮಾದಕ ವಸ್ತು ಸೇವನೆ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಮಂಗಳೂರಿನ ಶಾಲೆಯೊಂದರ ಬಸ್ಸಿನ ಚಾಲಕನಾಗಿದ್ದ ಅಭಿಷೇಕ್ ಮತ್ತು ಶರೀಫ್ ನಡುವೆ ವಾಹನ ಸೈಡ್ ನೀಡುವ ವಿಚಾರ ದ್ವೇಷಕ್ಕೆ ಕಾರಣವಾಗಿತ್ತು. ಸುಮಾರು ಆರು ತಿಂಗಳ ಹಿಂದೆ ಷರೀಫ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಸೈಡ್ ನೀಡಿಲ್ಲ ಎಂದು ವಾಗ್ವಾದ ನಡೆದಿತ್ತು .

ಶಾಲೆಯ 13ನೇ ಬಸ್ಸಿನ ಚಾಲಕನಾಗಿದ್ದ ಈತ ಜಗಳಕ್ಕೂ ಬಂದಿದ್ದನು. ಈ ಬಗ್ಗೆ ಶ ರೀಫ್ ಆಟೋ ತಂಗುದಾಣದ ಉಳಿದ ಆಟೋ ಚಾಲಕರಲ್ಲಿ ತಿಳಿಸಿದ್ದರು. ಇದರಿಂದ ನಗರದಲ್ಲಿನ ಆಟೋ ರಿಕ್ಷಾಗಳು ಅಭಿಷೇಕ್ ಶೆಟ್ಟಿಯ ಬಸ್ಸಿಗೆ ಸೈಡ್ ನೀಡುತ್ತಿಲ್ಲ ಎಂದು ತಪ್ಪು ತಿಳಿದುಕೊಂಡ ಈತ ಶರೀಫ್ ನೇ ಇದಕ್ಕೆ ಕಾರಣ ಎಂದು ಈತ ದ್ವೇಷದ ಪ್ರತಿಕಾರಕ್ಕೂ ಮುಂದಾಗಿದ್ದನು ಇದರಿಂದ ಹೇಗಾದರೂ ಮಾಡಿ ಶರೀಫ್ ರನ್ನು ಮುಗಿಸುವ ಸಂಚು ರೂಪಿಸಿದ್ದನು. ಈ ನಡುವೆ ಬಸ್ಸು ಚಾಲಕ ವೃತ್ತಿಯಿಂದ ಅಭಿಷೇಕ್ ನನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿತ್ತು. ಇದಕ್ಕೆ ಕಾರಣ ಶರೀಫ್ ಎಂದು ಅಭಿಷೇಕ್ ಸಂಶಯ ಗೊಂಡಿದ್ದು, ಇದಕ್ಕೆ ಪ್ರ ತಿಕಾರ ತೀರಿಸಲು ಮುಂದಾದನು. ಏಪ್ರಿಲ್ 9ರಂದು ರಾತ್ರಿ ಆಟೋ ರಿಕ್ಷಾ ಬಾಡಿಗೆ ಗೆಂದು ಮಂಜೇಶ್ವರಕ್ಕೆ ಕರೆದು ಬಂದು ನಿರ್ಜನ ಪ್ರದೇಶಕ್ಕೆ ತಲಪುತ್ತಿದಂತೆ ಚಾಕುವಿನಿಂದ ಇರಿದು ಕೊಲೆಗೈದ ಬಳಿಕ ಬಾವಿಗೆಸೆದಿದ್ದು, ಬಳಿಕ ಅಲ್ಲಿದ್ದ ಸ್ವಲ್ಪ ಮುಂದೆ ರಸ್ತೆಗೆ ಬಂದಾಗ ಆ ದಾರಿಯಾಗಿ ಬಂದ ಸ್ಕೂಟರ್ ಗೆ ಹತ್ತಿ ತಲಪಾಡಿಯ ಸಂಬಂಧಿಕರ ಮನೆಯಲ್ಲಿ ವಾಸ್ತ್ಯವ್ಯ ಹೂಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

208 ರಷ್ಟು ಸಿಸಿ ಟಿವಿ ಕ್ಯಾಮರಾ ದ್ರಶ್ಯ ಹಾಗೂ ಆಟೋ ರಿಕ್ಷಾ ನಿಲ್ದಾಣದ ಉಳಿದ ಚಾಲಕರು ಹಾಗೂ ಇತರರಿಂದ ಮಾಹಿತಿ ಕಲೆಹಾಕಲಾಗಿತ್ತು. ತಲಪಾಡಿಯ ಟೋಲ್ ಗೇಟ್ ಹಾಗೂ ಸಮೀಪದ ಕಟ್ಟಡದ ಸಿ ಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ ಆಟೋ ರಿಕ್ಷಾ ಈ ದಾರಿಯಾಗಿ ಹಾದು ಬರುತ್ತಿರುವುದು ಗಮನಕ್ಕೆ ಬಂದಿತ್ತು. ಮಂಗಳೂರು ಪೊಲೀಸರ ಸಹಾಯದಿಂದ ಹಲವು ಮಾಹಿತಿಗಳನ್ನು ಕಲೆಹಾಕಿದ ಪೊಲೀಸರು ಆರೋಪಿಯನ್ನು ಕೃತ್ಯ ಬೆಳಕಿಗೆ ಬಂದು ಮೂರು ದಿನಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .

ಐದು ಮಂದಿಯ ತಂಡವನ್ನು ಸಿ ಸಿ ಟಿ ವಿ ಕ್ಯಾಮರಾ ದ್ರಶ್ಯ ಪರಿಶೀಲನೆಗೆ ನಿಯೋಜಿಸಲಾಗಿತ್ತು. ಕೇರಳ – ಕರ್ನಾಟಕದ ಆಟೋ ರಿಕ್ಷಾ ನಿಲ್ದಾಣ ಕೇಂದ್ರೀಕರಿಸಿ ತನಿಖೆ ನಡೆಸಲಾಗಿತ್ತು. ಒಂದು ನಿಲ್ದಾಣದಿಂದ ಲಭಿಸಿದ ಸುಳಿವು ಆರೋಪಿಯ ಪತ್ತೆಗೆ ನೆರವಾಯಿತು. ಕೃತ್ಯಕ್ಕೆ ಬಳಸಿದ್ದ ಚಾಕು ಪತ್ತೆಹಚ್ಚಲು ಸಾಧ್ಯವಾಗಿಲ್ಲ . ಇನ್ನಷ್ಟು ತನಿಖೆ ನಡೆಸಿ ಮಾಹಿತಿ ಕಲೆ ಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

 

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ದೂರು ನೀಡಿದ ದ್ವೇಷದಿಂದ ಬೆಂಕಿ ಹಚ್ಚಿದ ದುಷ್ಕರ್ಮಿ; ಚಿಕಿತ್ಸೆ ಫಲಕಾರಿಯಾಗದೆ ಕಾಸರಗೋಡಿನ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು

Next Post

ಸಮಾಜಸೇವೆ ಸೋಗಿನ ಆಸಿಫ್ ಆಪತ್ಬಾಂಧವ, ರವೂಫ್ ಬಂದರ್ ಸೇರಿ ಕ್ರೌಡ್ ಫಂಡಿಂಗ್ ಮಾಡ್ತಿದ್ದ ವ್ಯಕ್ತಿಗೇ ಹನಿಟ್ರ್ಯಾಪ್, ಮೂವರ ವಿರುದ್ಧ ಎಫ್ಐಆರ್

Related Posts

13 ವರ್ಷದ ಬಾಲಕನ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ
ಕ್ರೈಮ್ ನ್ಯೂಸ್

13 ವರ್ಷದ ಬಾಲಕನ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ

August 1, 2025
1
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಕ್ರೈಮ್ ನ್ಯೂಸ್

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

July 31, 2025
97
Next Post
ಸಮಾಜಸೇವೆ ಸೋಗಿನ ಆಸಿಫ್ ಆಪತ್ಬಾಂಧವ, ರವೂಫ್ ಬಂದರ್ ಸೇರಿ ಕ್ರೌಡ್ ಫಂಡಿಂಗ್ ಮಾಡ್ತಿದ್ದ ವ್ಯಕ್ತಿಗೇ ಹನಿಟ್ರ್ಯಾಪ್, ಮೂವರ ವಿರುದ್ಧ ಎಫ್ಐಆರ್

ಸಮಾಜಸೇವೆ ಸೋಗಿನ ಆಸಿಫ್ ಆಪತ್ಬಾಂಧವ, ರವೂಫ್ ಬಂದರ್ ಸೇರಿ ಕ್ರೌಡ್ ಫಂಡಿಂಗ್ ಮಾಡ್ತಿದ್ದ ವ್ಯಕ್ತಿಗೇ ಹನಿಟ್ರ್ಯಾಪ್, ಮೂವರ ವಿರುದ್ಧ ಎಫ್ಐಆರ್

Discussion about this post

Recent News

13 ವರ್ಷದ ಬಾಲಕನ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ

13 ವರ್ಷದ ಬಾಲಕನ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ

August 1, 2025
1
ಕೊಣಾಜೆ‌: ಆಶ್ರಮದಿಂದ ಯುವತಿ ಪರಾರಿ; ಪೋಲಿಸರಿಂದ ಲುಕ್‌ಔಟ್ ನೋಟಿಸ್

ಕೊಣಾಜೆ‌: ಆಶ್ರಮದಿಂದ ಯುವತಿ ಪರಾರಿ; ಪೋಲಿಸರಿಂದ ಲುಕ್‌ಔಟ್ ನೋಟಿಸ್

August 1, 2025
38
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

13 ವರ್ಷದ ಬಾಲಕನ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ

13 ವರ್ಷದ ಬಾಲಕನ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ

August 1, 2025
ಕೊಣಾಜೆ‌: ಆಶ್ರಮದಿಂದ ಯುವತಿ ಪರಾರಿ; ಪೋಲಿಸರಿಂದ ಲುಕ್‌ಔಟ್ ನೋಟಿಸ್

ಕೊಣಾಜೆ‌: ಆಶ್ರಮದಿಂದ ಯುವತಿ ಪರಾರಿ; ಪೋಲಿಸರಿಂದ ಲುಕ್‌ಔಟ್ ನೋಟಿಸ್

August 1, 2025
ಬೈಕಂಪಾಡಿ ಕೈಗಾರಿಕ ಸ್ಥಾವರದಲ್ಲಿ ಅಮೋನಿಯಾ ಸೋರಿಕೆಯಿಂದ ಉಸಿರಾಟದ ಸಮಸ್ಯೆ 25ಕ್ಕೂ ಅಧಿಕ ಮಂದಿ ಕಾರ್ಮಿಕರು ಅಸ್ವಸ್ಥ

ಬೈಕಂಪಾಡಿ ಕೈಗಾರಿಕ ಸ್ಥಾವರದಲ್ಲಿ ಅಮೋನಿಯಾ ಸೋರಿಕೆಯಿಂದ ಉಸಿರಾಟದ ಸಮಸ್ಯೆ 25ಕ್ಕೂ ಅಧಿಕ ಮಂದಿ ಕಾರ್ಮಿಕರು ಅಸ್ವಸ್ಥ

August 1, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d