ಮಂಗಳೂರು, ನ.15 : ಮಂಗಳೂರಿನ ಪಣಂಬೂರು ಬೀಚ್ ಬಳಿಯ ಸಿಗ್ನಲ್ನಲ್ಲಿ ನಿಂತಿದ್ದಾಗ ಆಟೋ ರಿಕ್ಷಾಕ್ಕೆ ಟ್ಯಾಂಕರ್ವೊಂದು ಅಪ್ಪಳಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಮೂವರು ಮೃತಪಟ್ಟ ದಾರುಣ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಕೊಣಾಜೆ ಮೊಂಟೆಪದವಿನ ನಿವಾಸಿಗಳಾದ ಅಬುಬಕ್ಕರ್ (65), ಇಬ್ರಾಹಿಂ (68) ಮತ್ತು ಉಳ್ಳಾಲದ ಆಟೋ ಚಾಲಕ ಮೊಯ್ದೀನ್ ಕುಂಞ (25) ಮೃತರು. ಇವರು ಬೀಡಿ ಕಾರ್ಮಿಕರಾಗಿದ್ದು ಉಳ್ಳಾಲದಿಂದ ಬೈಕಂಪಾಡಿಗೆ ಬೀಡಿ ಕೊಟ್ಟು ಆಟೋದಲ್ಲಿ ಮತ್ತೆ ಉಳ್ಳಾಲದತ್ತ ಮರಳುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿಯ ಪಣಂಬೂರು ಸಿಗ್ನಲ್ ನಲ್ಲಿ ವಾಹನಗಳು ಸರತಿಯಲ್ಲಿದ್ದ ವೇಳೆ ಎರಡು ಟ್ಯಾಂಕರ್, ಆಟೋ ರಿಕ್ಷಾ ಮತ್ತು ಕಾರು ಅಪಘಾತಕ್ಕೀಡಾಗಿದೆ. ಆಟೋ ರಿಕ್ಷಾ ಒಂದು ಟ್ಯಾಂಕರಿನ ಹಿಂದೆ ನಿಂತಿತ್ತು. ಈ ವೇಳೆ, ಹಿಂದಿನಿಂದ ಮತ್ತೊಂದು ಟ್ಯಾಂಕರ್ ವೇಗವಾಗಿ ಬಂದು ಡಿಕ್ಕಿಯಾಗಿದ್ದು ನಡುವೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿದೆ. ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕ ಕುಳಿತಲ್ಲೇ ದುರಂತ ಸಾವನ್ನಪ್ಪಿದ್ದಾರೆ. ಸುರತ್ಕಲ್ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಡಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.
Discover more from Coastal Times Kannada
Subscribe to get the latest posts sent to your email.







Discussion about this post