ಮಂಗಳೂರು, ಜುಲೈ 17: ಕಾವೂರು ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಚೂರಿಯಿಂದ ಹಲ್ಲೆಯಾಗಿದ್ದು, ಕೊಲೆಯತ್ನ ಪ್ರಕರಣ ದಾಖಲಾಗಿದೆ. ಸ್ಥಳೀಯ ಖಾಸಗಿ ಸಂಸ್ಥೆಯೊಂದರ ಕ್ಯಾಬ್ ಚಾಲಕರಾಗಿದ್ದವರು ಪರಸ್ಪರ ಹೊಡೆದಾಡಿದ್ದು, ಈ ವೇಳೆ ಒಬ್ಬನಿಗೆ ಚೂರಿಯಿಂದ ಇರಿಯಲಾಗಿದೆ.
ಸಂದೀಪ್ ಚೂರಿ ಇರಿತಕ್ಕೊಳಗಾದ ವ್ಯಕ್ತಿ. ಅದೇ ಕಂಪನಿಯಲ್ಲಿ ಚಾಲಕರಾಗಿದ್ದ ತೇಜಸ್ ಶೆಟ್ಟಿ, ಭವಿತ್ ಶೆಟ್ಟಿ, ಪ್ರೀತಂ ಮತ್ತು ಪುನೀತ್ ದೇವಾಡಿಗ ಸೇರಿ ಹಲ್ಲೆ ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ. ತೇಜಸ್ ಮತ್ತು ಸಂದೀಪ್ ಒಂದೇ ಕಂಪನಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು ಇವರೊಳಗೆ ಹಳೆ ದ್ವೇಷ ಇತ್ತು.
ಬುಧವಾರ ಸಂಜೆ ಇವರು ತಮ್ಮ ಶಿಫ್ಟ್ ಮುಗಿಸಿ ಹೊರ ಬಂದಿದ್ದಾಗ, ಹಳೆ ದ್ವೇಷದಲ್ಲಿ ಜಗಳ ಆಗಿದೆ. ತೇಜಸ್ ತನ್ನ ತಮ್ಮ ಮತ್ತಿಬ್ಬರು ಸ್ನೇಹಿತರೊಂದಿಗೆ ಸೇರಿ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ. ಹರಿತ ಆಯುಧದಿಂದ ಸಂದೀಪ್ ತಲೆಗೆ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡು ಎಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post