• About us
  • Contact us
  • Disclaimer
Friday, August 21, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರಿನಲ್ಲಿ ಅಲ್ಟ್ರಾವಯಲೆಟ್‌ ಸ್ಪೇಸ್‌ ಸ್ಟೇಷನ್‌ ಇವಿ ಸೂಪರ್‌ಬೈಕ್‌ ಮಳಿಗೆ ಆರಂಭ

Coastal Times by Coastal Times
November 18, 2024
in ಕರಾವಳಿ
ಮಂಗಳೂರಿನಲ್ಲಿ ಅಲ್ಟ್ರಾವಯಲೆಟ್‌ ಸ್ಪೇಸ್‌ ಸ್ಟೇಷನ್‌ ಇವಿ ಸೂಪರ್‌ಬೈಕ್‌ ಮಳಿಗೆ ಆರಂಭ
76
VIEWS
WhatsappTelegramShare on FacebookShare on Twitter

ಮಂಗಳೂರು, ನ.18- ಮಂಗಳೂರಿನಲ್ಲಿ ಸೋಮವಾರ ಆರಂಭವಾದ ಅಲ್ಟ್ರಾವಯಲೆಟ್‌ ಸ್ಪೇಸ್‌ ಸ್ಟೇಷನ್‌ ಇವಿ ಸೂಪರ್‌ಬೈಕ್‌ ಮಳಿಗೆಯನ್ನು ಅಲ್ಟ್ರಾವಯಲೆಟ್‌ನ ಸಿಇಒ ಮತ್ತು ಸಹಸ್ಥಾಪಕರಾದ ನಾರಾಯಣ್‌ ಸುಬ್ರಮಣಿಯಮ್‌ ಉದ್ಘಾಟಿಸಿದರು. ಸೂಪರ್‌ಬೈಕ್‌ ಡೀಲರ್‌ಷಿಪ್‌ ಪಡೆದಿರುವ ಫ್ರೊವೆಂಟ್‌ ಮೋಟೋಕಾರ್ಪ್‌ ಎಲ್‌ಎಲ್‌ಪಿಯ ಮೊಯಿದ್ದೀನ್‌ ಬಿಲಾಲ್‌, ಸಾಹೀರ್‌ ಅಬ್ದುಲ್‌ ಹಮೀದ್‌, ಮಲಯಾಳಂ ನಟ ನಾದೀರ್‌ಶಾ ಇನ್ನಿತರರು ಉಪಸ್ಥಿತರಿದ್ದರು.

ಮುಂಚೂಣಿಯ ಇವಿ ಸೂಪರ್‌ಬೈಕ್‌ ಉತ್ಪಾದಕ ಕಂಪೆನಿ ಅಲ್ಟ್ರಾವಯಲೆಟ್‌ ಮಂಗಳೂರಿನಲ್ಲಿ ಹೊಸ ಯುವಿ ಸ್ಪೇಸ್‌ ಸ್ಟೇಷನ್‌ ಆರಂಭಿಸಿದೆ. ಕಂಪೆನಿಯ ವಿಸ್ತರಣೆಯ ಹಾದಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಯುವಿ ಸ್ಪೇಸ್‌ ಸ್ಟೇಷನ್‌, ಅಲ್ಟ್ರಾವಯಲೆಟ್‌ನ ನೂತನ ತಂತ್ರಜ್ಞಾನಗಳ ಎಲೆಕ್ಟ್ರಿಕ್‌ ವಾಹನಗಳನ್ನು ಗ್ರಾಹಕರಿಗೆ ತಲುಪಿಸಲಿದೆ. ಮಂಗಳೂರಿನ ಗ್ರಾಹಕರು ಸುಲಭವಾಗಿ ಇವಿ ಸೂಪರ್‌ಬೈಕ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸಿ ಖರೀದಿಸಲು ಸಾಧ್ಯವಾಗಲಿದೆ. ಹೊಸ ಕೇಂದ್ರ ಕರ್ನಾಟಕದಲ್ಲಿ ಕಂಪೆನಿಯ ಎರಡನೇ ಸ್ಪೇಸ್‌ ಸ್ಟೇಷನ್‌ ಆಗಿದೆ. ಈ ಕ್ಯಾಲೆಂಡರ್‌ ವರ್ಷದಲ್ಲಿ ಒಟ್ಟು ಹನ್ನೆರಡು ಸ್ಪೇಸ್‌ ಸ್ಟೇಷನ್‌ ಆರಂಭಿಸುವ ಗುರಿಯನ್ನು ಕಂಪೆನಿ ಹೊಂದಿದೆ.

ಬೆಂದೂರ್‌ವೆಲ್‌ನಲ್ಲಿರುವ ಸ್ಪೇಸ್‌ ಸ್ಪೇಷನ್‌ ಇವಿ ಅನುಭವ ಕೇಂದ್ರ ಗ್ರಾಹಕರಿಗೆ ವಿನೂತನ ಅನುಭವ ನೀಡಲಿದೆ. ಇವಿ ದ್ವಿಚಕ್ರವಾಹನ ಕ್ಷೇತ್ರದಲ್ಲಿ ಹೆಸರಾಗಿರುವ ಅಲ್ಟ್ರಾವಯಲೆಟ್‌ನ F77 ಮಾಕ್‌2 ಬೈಕ್‌ಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಉತ್ತಮ ಮೈಲೇಜ್‌, ಅಧಿಕ ಸಾಮರ್ಥ್ಯ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿರುವ F77 ಮಾಕ್‌2 ಇವಿ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಿದೆ. ಹೊಸ ಸ್ಪೇಸ್‌ ಸ್ಪೇಷನ್‌ಗೆ ಚಾಲನೆ ನೀಡಿ ಮಾತನಾಡಿದ ಅಲ್ಟ್ರಾವಯಲೆಟ್‌ನ ಸಿಇಒ ಮತ್ತು ಸಹಸ್ಥಾಪಕರಾದ ನಾರಾಯಣ್‌ ಸುಬ್ರಮಣಿಯಮ್‌ ಅವರು “ಇವಿ ಬಳಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಮ್ಮ ಮೊದಲ ಕೇಂದ್ರವನ್ನು ಆರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ನೂತನ ಡೀಲರ್‌ಷಿಪ್‌ ಮೂಲಕ ನಮ್ಮ ಆಧುನಿಕ ತಂತ್ರಜ್ಞಾನದ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ಸಾಧ್ಯವಾಗಲಿದೆ. ನಗರದ ಸಂಚಾರ ಮಾದರಿಯಲ್ಲಿ ಹೊಸತನವನ್ನು ತರಲು ಕಂಪೆನಿ ಉತ್ಸುಕವಾಗಿದ್ದು ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನಮ್ಮ ಕೇಂದ್ರದ ಆರಂಭ ಸಹಕಾರಿಯಾಗಲಿದೆ” ಎಂದು ತಿಳಿಸಿದರು.

ಮಂಗಳೂರಿನ ಯುವಿ ಸ್ಪೇಸ್‌ ಸ್ಟೇಷನ್‌ ಮಾರಾಟ, ಸೇವೆ ಮತ್ತು ಬಿಡಿಭಾಗಗಳ ಮಾರಾಟ ಮೂರೂ (3S) ವಿಭಾಗಗಳನ್ನು ಹೊಂದಿದೆ. ವಾಹನಗಳನ್ನು ಕಾಲಕಾಲಕ್ಕೆ ಪರೀಕ್ಷಿಸುವ, ಕ್ಲಪ್ತಸಮಯಕ್ಕೆ ತಾಂತ್ರಿಕ ನೆರವು ನೀಡುವ ಸೌಲಭ್ಯ ಇರಲಿದೆ. ಅಲ್ಟ್ರಾವಯಲೆಟ್‌ನ ಬೆಂಗಳೂರು ಕೇಂದ್ರ ಈಗಾಗಲೇ ಗ್ರಾಹಕ ಸೇವೆಗೆ ಹೆಸರಾಗಿದೆ. ಹೊಸ ಖರೀದಿಯಾಗಲೀ ಅಥವಾ ಹಾಲಿ ವಾಹನದ ನಿರ್ವಹಣೆಯಾಗಲೀ ಈ ಕೇಂದ್ರ ಗ್ರಾಹಕರ ಪ್ರಯಾಣದ ಪ್ರತೀ ಹಂತದಲ್ಲಿಯೂ ನೆರವಾಗಲಿದೆ.

ಅಲ್ಟ್ರಾವಯಲೆಟ್‌ನ ಸಿಟಿಒ ಮತ್ತು ಸಹ ಸ್ಥಾಪಕ ನೀರಜ್‌ ರಾಜಮೋಹನ್‌ ಮಾತನಾಡಿ “ಮಂಗಳೂರಿನಲ್ಲಿ ಡೀಲರ್‌ಷಿಪ್‌ ಆರಂಭಿಸುವ ಮೂಲಕ ನಾವು ಎಲೆಕ್ಟ್ರಿಕ್‌ ಮೊಬಿಲಿಟಿಯನ್ನು ದೇಶಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಿದ್ದೇವೆ. ನಾವು F77 ಮಾಕ್‌2 ಬೈಕನ್ನು ಸರಿಸಾಟಿಯಿಲ್ಲದ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ಹುಟ್ಟಿಸುವ ರೀತಿಯಲ್ಲಿ ರೂಪಿಸಿದ್ದೇವೆ. ಮಂಗಳೂರಿನ ಗ್ರಾಹಕರೂ ನಮ್ಮ ತಂತ್ರಜ್ಞಾನವನ್ನು ಪರೀಕ್ಷಿಸಿ ನೋಡಬೇಕೆನ್ನುವುದು ನಮ್ಮ ಉದ್ದೇಶ” ಎಂದರು. ಅಲ್ಟ್ರಾವಯಲೆಟ್‌ ಈಗಾಗಲೇ ಬೆಂಗಳೂರು, ಪುಣೆ, ಅಹ್ಮದಾಬಾದ್‌, ಕೊಚ್ಚಿ, ಹೈದರಾಬಾದ್‌ ಮತ್ತು ನೇಪಾಳದಲ್ಲಿ ಸ್ಪೇಸ್‌ ಸ್ಟೇಷನ್‌ ಆರಂಭಿಸಿದ್ದು, ಮಂಗಳೂರು ಹೊಸ ಕೇಂದ್ರವಾಗಿದೆ. ಹೊಸ ಅನುಭವ ಕೇಂದ್ರದಲ್ಲಿ ಗ್ರಾಹಕರು ಬೈಕ್‌ ಪರೀಕ್ಷಿಸಬಹುದು, ಟೆಸ್ಟ್‌ ರೈಡ್‌ ಮಾಡಿ ಖರೀದಿಸಬಹುದು. ಹೊಸ ಕೇಂದ್ರದ ವಿಳಾಸ ಹೀಗಿದೆ; ಜಿ -01, ಗ್ರೌಂಡ್‌ ಫ್ಲೋರ್‌, ಲೋಟಸ್‌ ಪ್ಯಾರಡೈಸ್‌ ಪ್ಲಾಜಾ, ಬೆಂದೂರ್‌ವೆಲ್‌, ಮಂಗಳೂರು- 575002

● 50 ಸ್ಪೇಸ್‌ ಸ್ಟೇಷನ್‌ ಆರಂಭಿಸುವ ಅಲ್ಟ್ರಾವಯಲೆಟ್‌ನ ವಿಸ್ತರಣೆ ಕಾರ್ಯತಂತ್ರಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಕೇಂದ್ರ ಆರಂಭ

● ಮಂಗಳೂರಿನ ಸ್ಪೇಸ್‌ ಸ್ಟೇಷನ್‌ ಭಾರತದಲ್ಲಿ ಅಲ್ಟ್ರಾವಯಲೆಟ್‌ನ 7ನೇ ಕೇಂದ್ರ.

● ಮಂಗಳೂರಿನ ಸ್ಪೇಸ್‌ ಸ್ಟೇಷನ್‌ನಲ್ಲಿ ಗ್ರಾಹಕರ ಎಲ್ಲ ಅಗತ್ಯತೆಗಳನ್ನು (3ಎಸ್‌) ಪೂರೈಸುವ ಸೌಕರ್ಯ

● ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಸ್ಪೇಸ್‌ ಸ್ಟೇಷನ್‌ ಕಂಪೆನಿಯ ಬೆಂಗಳೂರು ಕೇಂದ್ರ ಕಚೇರಿಯಿಂದ ಗ್ರಾಹಕ ಸೇವೆಗಳು ವರ್ಧನೆಗೊಂಡಿದೆ.

 

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related


Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲ ಸೋಮೇಶ್ವರ ಈಜುಕೊಳದಲ್ಲಿ ಮೂವರು ಯುವತಿಯರ ದುರ್ಮರಣ -ವಾಝ್ಕೊ ಬೀಚ್ ರೆಸಾರ್ಟ್ ಲೈಸನ್ಸ್ ರದ್ದು, ಬೀಗ ಜಡಿದ ಪೊಲೀಸರು

Next Post

ಕಾರ್ಕಳ: ಹೆಬ್ರಿ ಬಳಿ ಎಎನ್ ಎಫ್ ಎನ್ ಕೌಂಟರ್ ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ

Related Posts

ತುಳುನಾಡಿನಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ ಸಂಭ್ರಮ: ಮೂಲಸ್ಥಾನ, ನಾಗಬನಗಳಲ್ಲಿ ಕುಟುಂಬಸ್ಥರಿಂದ ಹಾಲು-ಎಳನೀರು ಸಮರ್ಪಣೆ
ಕರಾವಳಿ

ತುಳುನಾಡಿನಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ ಸಂಭ್ರಮ: ಮೂಲಸ್ಥಾನ, ನಾಗಬನಗಳಲ್ಲಿ ಕುಟುಂಬಸ್ಥರಿಂದ ಹಾಲು-ಎಳನೀರು ಸಮರ್ಪಣೆ

August 18, 2026
10
ರೋಹನ್ ಕಾರ್ಪೊರೇಶನ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ – ಜ್ಯಾಕ್ ಅನಿಲ್ ಅವರಿಗೆ ‘ಕೃಷಿ ವೃಕ್ಷಾನ್ವೇಷಕ ಸಾಧಕ’ ಪ್ರಶಸ್ತಿ ಪ್ರದಾನ
ಕರಾವಳಿ

ರೋಹನ್ ಕಾರ್ಪೊರೇಶನ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ – ಜ್ಯಾಕ್ ಅನಿಲ್ ಅವರಿಗೆ ‘ಕೃಷಿ ವೃಕ್ಷಾನ್ವೇಷಕ ಸಾಧಕ’ ಪ್ರಶಸ್ತಿ ಪ್ರದಾನ

August 15, 2026
35
Next Post
ಕಾರ್ಕಳ: ಹೆಬ್ರಿ ಬಳಿ ಎಎನ್ ಎಫ್ ಎನ್ ಕೌಂಟರ್ ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ

ಕಾರ್ಕಳ: ಹೆಬ್ರಿ ಬಳಿ ಎಎನ್ ಎಫ್ ಎನ್ ಕೌಂಟರ್ ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ

Discussion about this post

Recent News

94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ

94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ

August 21, 2026
3
1988ರಲ್ಲಿ ನಡೆದ ಕೊಲೆ ಪ್ರಕರಣ ಮುಕ್ತಾಯಗೊಳಿಸಿರುವ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 105 ವರ್ಷದ ವೃದ್ಧನಿಗೆ ​ಸೆರೆವಾಸದಿಂದ ಮುಕ್ತಿ

1988ರಲ್ಲಿ ನಡೆದ ಕೊಲೆ ಪ್ರಕರಣ ಮುಕ್ತಾಯಗೊಳಿಸಿರುವ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 105 ವರ್ಷದ ವೃದ್ಧನಿಗೆ ​ಸೆರೆವಾಸದಿಂದ ಮುಕ್ತಿ

August 21, 2026
6
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ

94ನೇ ವಯಸ್ಸಿಗೆ ಕೊನೆಯುಸಿರೆಳೆದ ದಕ್ಷಿಣ ಭಾರತದ ಖ್ಯಾತ ನಟಿ ಸಾಹುಕಾರ್ ಜಾನಕಿ

August 21, 2026
1988ರಲ್ಲಿ ನಡೆದ ಕೊಲೆ ಪ್ರಕರಣ ಮುಕ್ತಾಯಗೊಳಿಸಿರುವ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 105 ವರ್ಷದ ವೃದ್ಧನಿಗೆ ​ಸೆರೆವಾಸದಿಂದ ಮುಕ್ತಿ

1988ರಲ್ಲಿ ನಡೆದ ಕೊಲೆ ಪ್ರಕರಣ ಮುಕ್ತಾಯಗೊಳಿಸಿರುವ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 105 ವರ್ಷದ ವೃದ್ಧನಿಗೆ ​ಸೆರೆವಾಸದಿಂದ ಮುಕ್ತಿ

August 21, 2026
ಬಂಟ್ವಾಳ: ಬೈಕ್ ಸವಾರನಿಗೆ ಅಡ್ಡಗಟ್ಟಿ ತಲ್ವಾರ್ ತೋರಿಸಿ, ಸಿಮೆಂಟ್ -ಕಬ್ಬಿಣ ಮಾರಾಟ ಸಂಸ್ಥೆಯ ಲೈನ್ ಸೇಲ್ ಸಂಗ್ರಹದ 8.5 ಲಕ್ಷ ರೂ ಸುಲಿಗೆ

ಬಂಟ್ವಾಳ: ಬೈಕ್ ಸವಾರನಿಗೆ ಅಡ್ಡಗಟ್ಟಿ ತಲ್ವಾರ್ ತೋರಿಸಿ, ಸಿಮೆಂಟ್ -ಕಬ್ಬಿಣ ಮಾರಾಟ ಸಂಸ್ಥೆಯ ಲೈನ್ ಸೇಲ್ ಸಂಗ್ರಹದ 8.5 ಲಕ್ಷ ರೂ ಸುಲಿಗೆ

August 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d