• About us
  • Contact us
  • Disclaimer
Thursday, September 18, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಾಫಿ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೆ…

Coastal Times by Coastal Times
September 19, 2021
in ಆರೋಗ್ಯ
ಕಾಫಿ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೆ…

Young smiling woman holding cup of latte coffee.

21
VIEWS
WhatsappTelegramShare on FacebookShare on Twitter

ಬಿಸಿ ಬಿಸಿ ಹಾಲಿಗೆ ಕಾಫಿ ಪುಡಿ ಹಾಕಿ, ಸ್ವಲ್ಪ ಸಕ್ಕರೆ ಹಾಕಿಕೊಂಡು ಕುಡಿತಾ ಇದ್ರೆ ಸ್ವರ್ಗ ಅಂತ ಹೇಳೋ ಮಂದಿ ನಮ್ಮ ನಡುವೆ ಹಲವರಿದ್ದಾರೆ. ಕಚೇರಿ ತಲೆಬಿಸಿ, ಒತ್ತಡ, ಭಯ ಹೀಗೆ ನಾನಾ ಭಾವನೆಗಳು ನಮ್ಮನ್ನು ಆವರಿಸಿದಾಗ ಅದರಿಂದ ಹೊರಬರಲು ಮೊದಲು ಹೊಳೆಯುವ ಪರಿಹಾರವೇ ಕಾಫಿ ಕುಡಿಯುವುದು. ಲಾಕ್‌ಡೌನ್‌ ಅವಧಿಯಿಂದೀಚೆಗೆ ಕಾಫಿ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ ಅಂತ ಕೆಲವು ಅಧ್ಯಯನಗಳು ಹೇಳಿವೆ. ಅದು ನಿಜವೂ ಹೌದು. ಕೆಲವೊಮ್ಮೆ ಏನೂ ಕೆಲಸ ಇಲ್ಲ ಇಲ್ಲದಾಗಲೂ ಕಾಫಿ ಕುಡಿಯುವವರಿದ್ದಾರೆ. ಒಟ್ಟಿನಲ್ಲಿ ಹವ್ಯಾಸವೋ, ಚಟವೋ ಕಾಫಿ ಮತ್ತು ಟೀ ನಮ್ಮನ್ನು ಆವರಿಸಿಕೊಂಡುಬಿಟ್ಟಿವೆ.

ಈಗಂತೂ ಬಿಡಿ, ಮಳೆಗಾಲ ಶುರುವಾಗಿದೆ. ಜೋರು ಮಳೆ, ಒಂದು ಕೈಯಲ್ಲಿ ಕಾಫಿ ಇನ್ನೊಂದು ಕೈಯಲ್ಲಿ ಏನಾದರು ಕುರುಕಲು ತಿಂಡಿ; ಮನೆಯ ಹೊರಗೆ ಬಂದು ಕುರ್ಚಿ ಹಾಕಿಕೊಂಡು ಮಳೆ ನೋಡುತ್ತಾ ಕಾಫಿ ಸವಿಯುವ ಆನಂದವೇ ಬೇರೆ! ನಮ್ಮ ಮೈ ಮನಸ್ಸನ್ನು ಇಷ್ಟೊಂದು ಆವರಿಸಿರುವ ಕಾಫಿ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೆ; ಎಲ್ಲರೂ ಕುಡಿಯಬಹುದೇ ಅಥವಾ ಕೆಲವರು ಕೆಲವು ಸಮಯದಲ್ಲಿ ಕಾಫಿಯನ್ನು ಬಿಡುವುದೇ ಒಳ್ಳೆಯದೇ.. ಕಾಫಿಪ್ರಿಯರು ಇಂಥದ್ದರ ಕಡೆ ಕೂಡ ಗಮನಹರಿಸಬೇಕಾಗಿದೆ. ಕಾಫಿಯಲ್ಲಿ ಕೆಫಿನ್‌ ಅಂಶ ಪ್ರಧಾನವಾಗಿದ್ದು ಇದರ ಸೇವನೆ ಕೆಲವು ಆರೋಗ್ಯದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಕೆಲವು ಅಧ್ಯಯನಗಳು ಕೆಲವರು ಕಾಫಿಯ ಅಭ್ಯಾಸವನ್ನು ಬಿಡುವುದು ಅಥವಾ ಕಡಿಮೆ ಕುಡಿಯುವುದು ಒಳ್ಳೆಯದು ಎಂದು ಹೇಳುತ್ತವೆ. ಹಾಗಾದರೆ ತಜ್ಞರ ಪ್ರಕಾರ ಯಾರು ಕಾಫಿ ಸೇವನೆ ತ್ಯಜಿಸುವುದು ಒಳ್ಳೆಯದು ಎಂದು ನೋಡೋಣ.

1. ಇರಿಟೇಬಲ್‌ ಬೋವೆಲ್‌ ಸಿಂಡ್ರೋಮ್‌ ಇರುವವರು.
ಈ ಸಮಸ್ಯೆ ಇದ್ದವರು ಕಾಫಿಯನ್ನು ಸೇವಿಸುವುದರಿಂದ, ಹೊಟ್ಟೆ ತೊಳಸುವುದು ಜಾಸ್ತಿಯಾಗುತ್ತದೆ. ಪದೇ ಪದೇ ಬಹಿರ್ದೆಸೆಗೆ ಹೋಗುವ ಅನಿವಾರ್ಯತೆ ಉಂಟಾಗುತ್ತದೆ. ಹೀಗಾಗಿ ಈ ಸಮಸ್ಯೆ ಇದ್ದವರು ಕಾಫಿ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು.

2. ಮೂತ್ರಕೋಶ ಹೆಚ್ಚು ಕ್ರಿಯಾಶೀಲವಾಗಿದ್ದರೆ.
ಪದೇ ಪದೇ ಮೂತ್ರ ವಿಸರ್ಜನೆ ಮಾಡುವವರು ಪದೇ ಪದೇ ಕಾಫಿ ಸೇವಿಸುವುದನ್ನು ನಿಲ್ಲಿಸುವುದು ಒಳ್ಳೆಯದು. ಕಾಫಿ ಸೇವಿಸುವುದರಿಂದ ಮೂತ್ರಕೋಶಗಳು ಹೆಚ್ಚು ಸಕ್ರಿಯವಾಗುತ್ತವೆ, ಪದೇ ಪದೇ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ. ಈ ಸಮಸ್ಯೆ ಇದ್ದವರು ದೂರದ ಪ್ರಯಾಣದ ವೇಳೆ ಕಾಫಿಯನ್ನು ಮುಟ್ಟದೇ ಇರುವುದೇ ಒಳ್ಳೆಯದು.

3. ಗರ್ಭಿಣಿಯರು.
ಗರ್ಭಿಣಿಯರು ಸಂಪೂರ್ಣವಾಗಿ ಕಾಫಿಯನ್ನು ವ್ಯರ್ಜಿಸಬೇಕೆಂದೇನೂ ಇಲ್ಲ. ಗರ್ಭಿಣಿಯರು ಪ್ರತಿದಿನ 200 ಎಂ.ಜಿ. ಪ್ರಮಾಣದಷ್ಟು ಕೆಫಿನ್‌ ಸೇವಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಒಂದು ಕಪ್‌ ಕಾಫಿಯಲ್ಲಿ ಎಷ್ಟು ಮಿಲಿಗ್ರಾಂ ಕೆಫಿನ್‌ ಇದೆ ಎಂಬುದರ ಆಧಾರದ ಮೇಲೆ ಎಷ್ಟು ಕಾಫಿ ಸೇವಿಸಬಹುದು ಎಂಬುದನ್ನು ವೈದ್ಯರು ಸೂಚಿಸುತ್ತಾರೆ.

4. ಹೃದಯ ಸಂಬಂಧಿ ಕಾಯಿಲೆ ಇರುವವರು.
ಕಾಫಿಯು ಹೃದಯಬಡಿತದ ವೇಗ ಮತ್ತು ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಕಾಫಿಯನ್ನು ಸೇವಿಸಿದರೆ, ಹೃದಯದ ಮೇಲೆ ಒತ್ತಡ ಹೆಚ್ಚಾಗುವ ಅಪಾಯವಿರುತ್ತದೆ. ಹೀಗಾಗಿ ಅಂತಹವರು ಕಾಫಿಯನ್ನು ವ್ಯರ್ಜಿಸುವುದು ಒಳಿತು.

5. ನಿದ್ದೆಯ ಸಮಸ್ಯೆ ಇರುವವರು.
ಕಾಫಿ ಸೇವನೆಯು ನಮ್ಮನ್ನು ಹೆಚ್ಚು ಜಾಗೃತರಾಗಿ ಇರುವಂತೆ ಮಾಡುತ್ತದೆ. ನಿದ್ದೆಯ ಸಮಸ್ಯೆ ಇರುವವರು ಕಾಫಿ ಸೇವಿಸಿದರೆ ನಿದ್ದೆ ಮತ್ತಷ್ಟು ಕಡಿಮೆಯಾಗುತ್ತದೆ. ಹೀಗಾಗಿ ನಿದ್ದೆಗೆ ಹೋಗುವ ಮುನ್ನ ಕನಿಷ್ಠ ಎಂಟು ತಾಸಿನ ಅವಧಿಯಲ್ಲಿ ಕಾಫಿ ಸೇವಿಸದೇ ಇರುವುದು ಒಳ್ಳೆಯದು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕರ್ ಸಹೋದರನ ಪುತ್ರಿ ಪೊಲೆಂಡ್ ದೇಶದಲ್ಲಿ ಭಾರತೀಯ ರಾಯಭಾರಿ

Next Post

ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ: ಶಂಕರ್ ಮನೆಯಲ್ಲಿ 15 ಲಕ್ಷ ನಗದು, 2 ಕೆ.ಜಿ. ಚಿನ್ನಾಭರಣ ಪತ್ತೆ!

Related Posts

ಮಂಗಳೂರು ಕೆಎಂಸಿ ಆಸ್ಪತ್ರೆಯ ಸುಧಾರಿತ ವೈದ್ಯಕೀಯ ತಂತ್ರಜ್ಞಾನ, ಉತ್ತಮ ಆರೈಕೆ – ಗ್ಯಾಸ್ಟ್ರೊಎಂಟರಾಲಾಜಿ ಸೇವೆಗೆ 25 ವರ್ಷ
ಆರೋಗ್ಯ

ಮಂಗಳೂರು ಕೆಎಂಸಿ ಆಸ್ಪತ್ರೆಯ ಸುಧಾರಿತ ವೈದ್ಯಕೀಯ ತಂತ್ರಜ್ಞಾನ, ಉತ್ತಮ ಆರೈಕೆ – ಗ್ಯಾಸ್ಟ್ರೊಎಂಟರಾಲಾಜಿ ಸೇವೆಗೆ 25 ವರ್ಷ

September 14, 2025
14
ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ಸೈವಾಕರ್’ ಆರಂಭ
ಆರೋಗ್ಯ

ಮಂಗಳೂರಿನ ಯೆನೆಪೊಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಕ್ಷಿಣ ಏಷ್ಯಾದ ಮೊದಲ ಆರ್ಥೋಪೆಡಿಕ್ ರೊಬೊಟಿಕ್ ಸರ್ಜರಿ ವ್ಯವಸ್ಥೆ ಸೈವಾಕರ್’ ಆರಂಭ

September 9, 2025
23
Next Post
ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ: ಶಂಕರ್ ಮನೆಯಲ್ಲಿ 15 ಲಕ್ಷ ನಗದು, 2 ಕೆ.ಜಿ. ಚಿನ್ನಾಭರಣ ಪತ್ತೆ!

ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ: ಶಂಕರ್ ಮನೆಯಲ್ಲಿ 15 ಲಕ್ಷ ನಗದು, 2 ಕೆ.ಜಿ. ಚಿನ್ನಾಭರಣ ಪತ್ತೆ!

Discussion about this post

Recent News

ಬಾಲಿವುಡ್‌ ನಟಿ ದಿಶಾ ಪಟಾಣಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

ಬಾಲಿವುಡ್‌ ನಟಿ ದಿಶಾ ಪಟಾಣಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

September 18, 2025
27
ಭೂಗತ ಪಾತಕಿ ಛೋಟಾ ರಾಜನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಭೂಗತ ಪಾತಕಿ ಛೋಟಾ ರಾಜನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

September 18, 2025
11
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಾಲಿವುಡ್‌ ನಟಿ ದಿಶಾ ಪಟಾಣಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

ಬಾಲಿವುಡ್‌ ನಟಿ ದಿಶಾ ಪಟಾಣಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

September 18, 2025
ಭೂಗತ ಪಾತಕಿ ಛೋಟಾ ರಾಜನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಭೂಗತ ಪಾತಕಿ ಛೋಟಾ ರಾಜನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

September 18, 2025
ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ- ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ

ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ- ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ

September 18, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d