ಉಡುಪಿ: ತಿರುವನಂತಪುರಂ ಜೈಲಿನಿಂದ ತಪ್ಪಿಸಿಕೊಂಡು ಎರಡು ವರ್ಷಗಳಿಂದ ಬ್ರಹ್ಮಾವರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿಸಲಾಗಿದೆ. ಕೇರಳ ರಾಜ್ಯದ ತಿರುವಂತಪುರಂ ಜಿಲ್ಲೆಯ ರಾಜೇಶ (39) ಬಂಧಿತ ಆರೊಪಿ. ಈತ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂದಿತನಾಗಿದ್ದು, ರಾಜೇಶ್ 2012ರಲ್ಲಿ ತಿರುವಂತಪುರಂ ಗ್ರಾಮಾಂತರ ಜಿಲ್ಲೆಯ ವಾಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದನು. ಈ ಬಗ್ಗೆ ನ್ಯಾಯಾಲಯವು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ 2013ರಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು, ನಂತರ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿತ್ತು.
ಕೇರಳದ ನರಬಲಿ ಸುದ್ದಿಯ ಬೆನ್ನಲ್ಲೇ ಸಮಾಜದಲ್ಲಿ ಮುಳುಗಿ ಹೋಗುತ್ತಿರುವ ಕ್ರಿಮಿನಲ್ ಗಳ ಕುರಿತು ಮಾತೃಭೂಮಿ ನ್ಯೂಸ್ ‘ಮೋಸ್ಟ್ ವಾಂಟೆಡ್’ ಎಂಬ ಸುದ್ದಿ ವರದಿಮಾಡಿತ್ತು . ಈತ ಬ್ರಹ್ಮಾವರ ತಾಲ್ಲೂಕಿನ ಬಿಲ್ಲಾಡಿ ಗ್ರಾಮದ ಕಬ್ಬಿನ ಹಿತ್ಲು ಎಂಬಲ್ಲಿ ಟ್ಯಾಪಿಂಗ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಈತನ ಜೊತೆ ಕೆಲಸ ಮಾಡುತ್ತಿದ್ದ ಮಲಯಾಳಿಗಳು ಈತನ ಸುದ್ದಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಪಡೆದುಕೊಂಡ ಕೇರಳ ಪೊಲೀಸರು ಉಡುಪಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದ ತಂಡದೊಂದಿಗೆ ರೀಯಲ್ ಎಸ್ಟೆಟ್ ವೇಷಧಾರಿಯಾಗಿ ರಾಜೇಶ್ ಅವರನ್ನು ಸಂಪರ್ಕಿಸಿದರು. ಆಗ ಪೊಲೀಸರು ನೀನು ರಾಜೇಶನೇ ಎಂದು ಕೇಳಿದರು. ಮೊದಲಿಗೆ ಏನನ್ನೂ ಒಪ್ಪಿಕೊಳ್ಳದಿದ್ದರೂ, ತನಗೆ ಎಲ್ಲವೂ ಗೊತ್ತಿದೆ ಎಂದು ಜತೆಗಿದ್ದ ಎಎಸ್ ಐ ಎಂ.ಸಿ.ಜೋಸ್ ಹೇಳಿದಾಗ ಆರೋಪಿ ಶರಣಾಗಿದ್ದಾನೆ. ಆರೋಪಿ ರಾಜೇಶನನ್ನು ವಶಕ್ಕೆ ಪಡೆದು ಕುಂದಾಪುರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಕೇರಳಕ್ಕೆ ಕರೆದುಕೊಂಡು ಹೋಗಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post