• About us
  • Contact us
  • Disclaimer
Sunday, February 1, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಭಾಗಿ, ನೂಕುನುಗ್ಗಲು 11ಕ್ಕೂ ಅಧಿಕ ಮಹಿಳೆಯರು, ಮಕ್ಕಳು ಅಸ್ವಸ್ಥ

Coastal Times by Coastal Times
October 20, 2025
in ಕರಾವಳಿ
ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಭಾಗಿ, ನೂಕುನುಗ್ಗಲು 11ಕ್ಕೂ ಅಧಿಕ ಮಹಿಳೆಯರು, ಮಕ್ಕಳು ಅಸ್ವಸ್ಥ
52
VIEWS
WhatsappTelegramShare on FacebookShare on Twitter

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ”ಅಶೋಕ ಜನಮನ -2025” ಎಂಬ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ, 11ಕ್ಕೂ ಅಧಿಕ ಮಂದಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥಗೊಂಡ ಘಟನೆ ಪುತ್ತೂರಿನ ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ.

ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಅಧಿಕ ಮಂದಿ ಭಾಗಿಯಾಗಿದ್ದರಿಂದ ನೂಕುನುಗ್ಗಲು ಉಂಟಾಗಿ ಆಮ್ಲಜನಕ ಕೊರತೆಯಿಂದ ಕೆಲವರು ಅಸ್ವಸ್ಥರಾಗಿದ್ದಾರೆ. ಸಿಎಂ ಕಾರ್ಯಕ್ರಮವಾಗಿದ್ದರಿಂದ ಪೊಲೀಸ್ ಪ್ರೊಟೋಕಾಲ್ ಪ್ರಕಾರ ನೀರಿನ ಬಾಟಲಿಗಳನ್ನು ವಿತರಣೆ ಮಾಡಿರಲಿಲ್ಲ. ಆದ್ದರಿಂದ, ಬಿಸಿಲಿನ ಧಗೆಗೆ ಜನರು ಕುಡಿಯಲು ನೀರೂ ಸಿಗದೇ ಪರದಾಟ‌ ನಡೆಸಿದ್ದರು.

ದೂರ ದೂರದಿಂದ ಬಂದಿದ್ದ ಜನರನ್ನು ಸಭಾಂಗಣ ಪ್ರವೇಶ ಸಂದರ್ಭದಲ್ಲಿ ಜೊತೆಗೆ ನೀರಿನ ಬಾಟಲ್ ಒಯ್ಯುವುದಕ್ಕೂ ಪೊಲೀಸರು ಬಿಟ್ಟಿರಲಿಲ್ಲ. ಹೀಗಾಗಿ ಶುಗರ್, ಬಿಪಿ ತೊಂದರೆ ಇದ್ದವರು ಮಧ್ಯಾಹ್ನ ಕಳೆದಾಗ ಅಸ್ವಸ್ಥರಾಗಿದ್ದು, 8-10 ಮಹಿಳೆಯರನ್ನು ಪೊಲೀಸರು ಆಂಬುಲೆನ್ಸ್ ನಲ್ಲಿ ಸರಕಾರಿ ಆಸ್ಪತ್ರೆಗೆ ರವಾನಿಸಿದರು. ಮೂರು ಗಂಟೆಯ ನಂತರ ಊಟ, ಗಿಫ್ಟ್ ಕೊಡಲು ಆರಂಭಿಸಿದಾಗ ಮತ್ತೆ ನೂಕುನುಗ್ಗಲು ಉಂಟಾಯಿತು. ಹಸಿದಿದ್ದವರು ತಾಮುಂದು, ನಾಮುಂದು ಎನ್ನುವಂತೆ ನುಗ್ಗತೊಡಗಿದ್ದು ಪೊಲೀಸರಿಗೂ ನಿಯಂತ್ರಣ ಮಾಡಲಾಗದ ಸ್ಥಿತಿಯಾಗಿತ್ತು.

ಅಸ್ವಸ್ಥಗೊಂಡವರು ಯೋಗಿತ(20), ಸಭಾ ಮಾಡಾವು(20), ಆಮೀನಾ ಪಾಟ್ರಕೋಡಿ(56), ನೇತ್ರಾವತಿ ಇರ್ದೆ(37), ಲೀಲಾವತಿ ಕಡಬ(50), ವಸಂತಿ ಬಲ್ನಾಡ್ (53), ಕುಸುಮ( 62), ರತ್ನವತಿ ಪೆರಿಗೇರಿ (67), ಅಫೀಲಾ ಪಾಟ್ರಕೋಡಿ (20), ಸ್ನೇಹಪ್ರಭಾ (41) ಹಾಗೂ ಜಸೀಲಾ(30)

ಇದೇ ವೇಳೆ, ಮಕ್ಕಳನ್ನು ಕರೆತಂದವರು ದಿಕ್ಕಾಪಾಲಾಗಿದ್ದರು. ಹಲವು ತಾಯಂದಿರು ಮಕ್ಕಳು ಕಾಣದೆ ಪ್ರಯಾಸಪಟ್ಟರು. ವೇದಿಕೆಯಲ್ಲಿದ್ದವರು ಮಕ್ಕಳು ಕಾಣೆಯಾಗಿ ಬಂದವರ ಅಳಲು ಕೇಳುತ್ತ ಗೊಂದಲದ ಸ್ಥಿತಿಯಾಗಿತ್ತು. ಮುಖ್ಯಮಂತ್ರಿ ಸ್ಥಳದಿಂದ ನಿರ್ಗಮಿಸುತ್ತಲೇ 3.30ರ ಸುಮಾರಿಗೆ ಎಲ್ಲಿಂದಲೋ ಆವರಿಸಿಕೊಂಡ ರೀತಿ ಮಳೆರಾಯ ನುಗ್ಗಿ ಬಂದಿದ್ದ. ಭಾರೀ ಮಳೆಯಾಗಿದ್ದರಿಂದ ಜನರು ಶೀಟ್ ಹಾಕಿದ್ದ ಸಭಾಂಗಣದಿಂದ ಹೊರಕ್ಕೆ ಹೋಗಲಾಗದೆ ಪರದಾಡಿದರು.

ಶಾಸಕ ಅಶೋಕ್ ರೈ ಮಾಲೀಕತ್ವದ ರೈ ಎಸ್ಟೇಟ್ ಮತ್ತು ಚಾರಿಟಬಲ್​​​ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೀಪಾವಳಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಟ್ಟೆ, ವಸ್ತ್ರ ಹಂಚುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಕುಂಪಲ ಅಪ್ರಾಪ್ತೆ ಮೇಲೆ ಮಲತಂದೆಯಿಂದಲೇ ನಿರಂತರ ಅತ್ಯಾಚಾರ ಪೋಕ್ಸೊ ಕಾಯ್ದೆಯಡಿ ಆರೋಪಿ ಬಂಧನ

Next Post

ಮಂಗಳೂರು: ಮಲ್ಲಿಕಟ್ಟೆ ಎಸ್ ಬಿಐ ಬ್ಯಾಂಕಿನಲ್ಲಿ MSME ಸಾಲ ಯೋಜನೆ ಹೆಸರಲ್ಲಿ ಮತ್ತೊಂದು ನಕಲಿ ಕಂಪನಿ ಸೃಷ್ಟಿಸಿ1.20 ಕೋಟಿ ವಂಚನೆ, ಬ್ಯಾಂಕ್ ಅಧಿಕಾರಿ ಸೇರಿ ಐವರ ಬಂಧನ, ಪ್ರಮುಖ ಆರೋಪಿಗಳು ಪರಾರಿ

Related Posts

ಮಂಗಳೂರು: ಗುಜ್ಜರಕೆರೆ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ; ಪ್ರಯೋಗಾಲಯ ವರದಿಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ
ಕರಾವಳಿ

ಮಂಗಳೂರು: ಗುಜ್ಜರಕೆರೆ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ; ಪ್ರಯೋಗಾಲಯ ವರದಿಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

January 31, 2026
57
ಉಳ್ಳಾಲ: ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರು ಪಪಂ ಸದಸ್ಯರ ಪ್ರತಿಭಟನೆ
ಕರಾವಳಿ

ಉಳ್ಳಾಲ: ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರು ಪಪಂ ಸದಸ್ಯರ ಪ್ರತಿಭಟನೆ

January 30, 2026
23
Next Post
ಮಂಗಳೂರು: ಮಲ್ಲಿಕಟ್ಟೆ ಎಸ್ ಬಿಐ ಬ್ಯಾಂಕಿನಲ್ಲಿ MSME ಸಾಲ ಯೋಜನೆ ಹೆಸರಲ್ಲಿ ಮತ್ತೊಂದು ನಕಲಿ ಕಂಪನಿ ಸೃಷ್ಟಿಸಿ1.20 ಕೋಟಿ ವಂಚನೆ, ಬ್ಯಾಂಕ್ ಅಧಿಕಾರಿ ಸೇರಿ ಐವರ ಬಂಧನ, ಪ್ರಮುಖ ಆರೋಪಿಗಳು ಪರಾರಿ

ಮಂಗಳೂರು: ಮಲ್ಲಿಕಟ್ಟೆ ಎಸ್ ಬಿಐ ಬ್ಯಾಂಕಿನಲ್ಲಿ MSME ಸಾಲ ಯೋಜನೆ ಹೆಸರಲ್ಲಿ ಮತ್ತೊಂದು ನಕಲಿ ಕಂಪನಿ ಸೃಷ್ಟಿಸಿ1.20 ಕೋಟಿ ವಂಚನೆ, ಬ್ಯಾಂಕ್ ಅಧಿಕಾರಿ ಸೇರಿ ಐವರ ಬಂಧನ, ಪ್ರಮುಖ ಆರೋಪಿಗಳು ಪರಾರಿ

Discussion about this post

Recent News

ಮಂಗಳೂರು: ಗುಜ್ಜರಕೆರೆ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ; ಪ್ರಯೋಗಾಲಯ ವರದಿಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

ಮಂಗಳೂರು: ಗುಜ್ಜರಕೆರೆ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ; ಪ್ರಯೋಗಾಲಯ ವರದಿಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

January 31, 2026
57
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ ಎಗರಿಸುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ, 6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ ಎಗರಿಸುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ, 6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ

January 31, 2026
49
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಗುಜ್ಜರಕೆರೆ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ; ಪ್ರಯೋಗಾಲಯ ವರದಿಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

ಮಂಗಳೂರು: ಗುಜ್ಜರಕೆರೆ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆ; ಪ್ರಯೋಗಾಲಯ ವರದಿಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

January 31, 2026
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ ಎಗರಿಸುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ, 6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ ಎಗರಿಸುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ, 6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ

January 31, 2026
ಉಳ್ಳಾಲ: ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರು ಪಪಂ ಸದಸ್ಯರ ಪ್ರತಿಭಟನೆ

ಉಳ್ಳಾಲ: ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರು ಪಪಂ ಸದಸ್ಯರ ಪ್ರತಿಭಟನೆ

January 30, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d