• About us
  • Contact us
  • Disclaimer
Wednesday, March 18, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಮಲ್ಲಿಕಟ್ಟೆ ಎಸ್ ಬಿಐ ಬ್ಯಾಂಕಿನಲ್ಲಿ MSME ಸಾಲ ಯೋಜನೆ ಹೆಸರಲ್ಲಿ ಮತ್ತೊಂದು ನಕಲಿ ಕಂಪನಿ ಸೃಷ್ಟಿಸಿ1.20 ಕೋಟಿ ವಂಚನೆ, ಬ್ಯಾಂಕ್ ಅಧಿಕಾರಿ ಸೇರಿ ಐವರ ಬಂಧನ, ಪ್ರಮುಖ ಆರೋಪಿಗಳು ಪರಾರಿ

Coastal Times by Coastal Times
October 21, 2025
in ಕ್ರೈಮ್ ನ್ಯೂಸ್
ಮಂಗಳೂರು: ಮಲ್ಲಿಕಟ್ಟೆ ಎಸ್ ಬಿಐ ಬ್ಯಾಂಕಿನಲ್ಲಿ MSME ಸಾಲ ಯೋಜನೆ ಹೆಸರಲ್ಲಿ ಮತ್ತೊಂದು ನಕಲಿ ಕಂಪನಿ ಸೃಷ್ಟಿಸಿ1.20 ಕೋಟಿ ವಂಚನೆ, ಬ್ಯಾಂಕ್ ಅಧಿಕಾರಿ ಸೇರಿ ಐವರ ಬಂಧನ, ಪ್ರಮುಖ ಆರೋಪಿಗಳು ಪರಾರಿ
171
VIEWS
WhatsappTelegramShare on FacebookShare on Twitter

ಮಂಗಳೂರು, ಅ.20 : ಕೇಂದ್ರ ಸರಕಾರದ ಸಾಲದ ಯೋಜನೆಗಳಿಗೆ ಕನ್ನ ಹಾಕಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸೇರಿ ಹಣ ಗುಳುಂ ಮಾಡುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸುರತ್ಕಲ್ ನಲ್ಲಿ ಕಾರ್ಯಾಚರಿಸುತ್ತಿದ್ದ ಇಲೆಕ್ಟ್ರಾನಿಕ್ ಶಾಪ್ ಒಂದನ್ನು ಖರೀದಿಸುವ ನೆಪದಲ್ಲಿ ಸ್ವೋದ್ಯೋಗಕ್ಕಾಗಿ ಸಾಲದ ಯೋಜನೆಯಡಿ ಬರೋಬ್ಬರಿ 1.20 ಕೋಟಿ ಸಾಲ ಪಡೆದು ವಂಚಿಸಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸುರತ್ಕಲ್ ಬಳಿಯ ತಡಂಬೈಲ್ ನಲ್ಲಿ ನೂರ್ ಅಹ್ಮದ್ ಎಂಬವರ ಹೆಸರಲ್ಲಿದ್ದ ಇಲೆಕ್ಟ್ರೋ ವರ್ಲ್ಡ್ ಎನ್ನುವ ಹೆಸರಿನ ಶಾಪ್ ಒಂದನ್ನು ಖರೀದಿಸಲು ನಗರದ ಮಲ್ಲಿಕಟ್ಟೆಯ ಎಸ್ ಬಿಐ ಬ್ಯಾಂಕ್ ಶಾಖೆಯಿಂದ ಸಾಲ ಪಡೆಯಲಾಗಿದೆ. 2023ರ ಅಕ್ಟೋಬರ್ ತಿಂಗಳಲ್ಲಿ ಬೇನಾಮಿ ಕಂಪನಿಯೊಂದನ್ನು ಸೃಷ್ಟಿಸಿ, ವಿಟ್ಲ ಮೂಲದ ಹಮೀದ್ ಎಂಬವರ ಹೆಸರಿನಲ್ಲಿ ಹಳೆ ಶಾಪ್ ಖರೀದಿಸಲು 1.20 ಕೋಟಿ ಸಾಲ ಪಡೆಯಲಾಗಿತ್ತು.

ಆದರೆ ಶಾಪ್ ಖರೀದಿಸಿದ್ದಾಗಿ ತೋರಿಸಿ ಆನಂತರ ಅದನ್ನು ಪಂಪ್ವೆಲ್ ಪ್ರದೇಶಕ್ಕೆ ಶಿಫ್ಟ್ ಮಾಡಿದ್ದಾಗಿ ದಾಖಲೆಯಲ್ಲಿ ತೋರಿಸಲಾಗಿದೆ. ಆದರೆ ಪಂಪ್ವೆಲ್ ನಲ್ಲಿ ದಾಖಲೆಯಲ್ಲಿ ತೋರಿಸಿದ ಯಾವುದೇ ಇಲೆಕ್ಟ್ರಾನಿಕ್ ಶಾಪ್ ಹೊಂದಿಲ್ಲ ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ಆಂತರಿಕ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಅಲ್ಲದೆ, ಸಾಲ ಪಡೆದ ಹಣವನ್ನು ಹಮೀದ್, ಆತನ ಸೋದರ ಹುಸೇನ್, ಮುನೀರ್ ಕಡಮನ್ ಮತ್ತು ಮುನೀರ್ ಪತ್ನಿ ಅಸ್ಮಾ ಖಾತೆಗೆ  ವರ್ಗಾಯಿಸಲಾಗಿದೆ. ಇದಲ್ಲದೆ, ವಿಟ್ಲ ಮೂಲದ ಅವಿನಾಶ್ ಎಂಬಾತನ ಖಾತೆಗೂ ಹಣ ವರ್ಗಾಯಿಸಿದ್ದು ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿಯೂ ಆಶಿಕ್ ಪಾತ್ರದ ಬಗ್ಗೆ ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದು, ಆತನ ಸೂಚನೆಯಂತೆ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾರೆ.

ಇದರಂತೆ ಸದ್ಯಕ್ಕೆ ತನಿಖೆ ನಡೆಸುತ್ತಿರುವ ಮಂಗಳೂರು ಸಿಸಿಬಿ ಪೊಲೀಸರು ಆಶಿಕ್ ಬಂಧನಕ್ಕಾಗಿ ಕೋರ್ಟಿನಿಂದ ವಾರೆಂಟ್ ಪಡೆದಿದ್ದಾರೆ. ಆದರೆ ಆಶಿಕ್ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾನೆ. ಮಲ್ಲಿಕಟ್ಟೆ ಎಸ್ ಬಿಐ ಶಾಖೆಯಲ್ಲಿ 1.30 ಕೋಟಿ ಮತ್ತು 1.20 ಕೋಟಿ ಸಾಲ ಪಡೆದು ವಂಚಿಸಿರುವ ಬಗ್ಗೆ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ. ಎರಡು ಪ್ರಕರಣದಲ್ಲೂ ಬ್ಯಾಂಕಿನಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಆಗಿದ್ದ ಅಭಿಷೇಕ್ ನಂದಾ ಆರೋಪಿಗಳಿಗೆ ಸಹಕರಿಸಿದ್ದು, ಆಶಿಕ್ ಸೂಚನೆಯಂತೆ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗುತ್ತಿದೆ.

ಸದ್ಯಕ್ಕೆ ಮುನೀರ್ ಕಡಮನ್, ಹುಸೇನ್, ಆಸ್ಮಾ, ಅವಿನಾಶ್, ಅಭಿಷೇಕ್ ನಂದಾ ಬಂಧಿತರಾಗಿದ್ದಾರೆ. ಪ್ರಮುಖ ಆರೋಪಿ ಹಮೀದ್ ಬೆಂಗಳೂರಿನಲ್ಲಿದ್ದು ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ. ಆಶಿಕ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಂದೇ ಬ್ಯಾಂಕಿನಲ್ಲಿ ಎಸಗಿರುವ ಎರಡು ಸಾಲದ ಪ್ರಕರಣಗಳನ್ನು ಸಿಸಿಬಿ ಪೊಲೀಸರ ಪ್ರತ್ಯೇಕ ತಂಡಗಳು ತನಿಖೆ ನಡೆಸುತ್ತಿದ್ದು ಮಹತ್ತರ ಮಾಹಿತಿಗಳನ್ನು ಕಲೆಹಾಕಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಪುತ್ತೂರು: ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಭಾಗಿ, ನೂಕುನುಗ್ಗಲು 11ಕ್ಕೂ ಅಧಿಕ ಮಹಿಳೆಯರು, ಮಕ್ಕಳು ಅಸ್ವಸ್ಥ

Next Post

ಮಂಗಳೂರು: ಲಾಲ್ ಬಾಗ್ ನ ಅಪಾರ್ಟ್ ಮೆಂಟ್ ನುಗ್ಗಿ 20 ಲಕ್ಷದ ಚಿನ್ನಾಭರಣ, ನಗದು ಹಣ, ವಿದೇಶಿ ಕರೆನ್ಸಿ,ಮೊಬೈಲ್ ಕಳವು, ಅಸ್ಸಾಂ ಮೂಲದ ಇಬ್ಬರ ಬಂಧನ

Related Posts

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ
ಕ್ರೈಮ್ ನ್ಯೂಸ್

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

March 13, 2026
140
ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ
ಕ್ರೈಮ್ ನ್ಯೂಸ್

ವಿಟ್ಲ: ಬಾಡಿಗೆ ಮನೆಯೊಂದರಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 4 ಮಂದಿ ಆರೋಪಿಯ ಬಂಧನ

March 12, 2026
31
Next Post
ಮಂಗಳೂರು: ಲಾಲ್ ಬಾಗ್ ನ ಅಪಾರ್ಟ್ ಮೆಂಟ್ ನುಗ್ಗಿ 20 ಲಕ್ಷದ ಚಿನ್ನಾಭರಣ, ನಗದು ಹಣ, ವಿದೇಶಿ ಕರೆನ್ಸಿ,ಮೊಬೈಲ್ ಕಳವು, ಅಸ್ಸಾಂ ಮೂಲದ ಇಬ್ಬರ ಬಂಧನ

ಮಂಗಳೂರು: ಲಾಲ್ ಬಾಗ್ ನ ಅಪಾರ್ಟ್ ಮೆಂಟ್ ನುಗ್ಗಿ 20 ಲಕ್ಷದ ಚಿನ್ನಾಭರಣ, ನಗದು ಹಣ, ವಿದೇಶಿ ಕರೆನ್ಸಿ,ಮೊಬೈಲ್ ಕಳವು, ಅಸ್ಸಾಂ ಮೂಲದ ಇಬ್ಬರ ಬಂಧನ

Discussion about this post

Recent News

ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

March 18, 2026
0
ಮೂಡುಬಿದಿರೆ ಇನ್ಸ್‌ಪೆಕ್ಟರ್ ಕಾಮಕಾಂಡ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಕೊಟ್ಟ ಸಂತ್ರಸ್ತೆ ಸಹೋದರಿ ಫುಲ್ಲಾ ನಾಯ್ಕ್

ಮೂಡುಬಿದಿರೆ ಇನ್ಸ್‌ಪೆಕ್ಟರ್ ಕಾಮಕಾಂಡ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಕೊಟ್ಟ ಸಂತ್ರಸ್ತೆ ಸಹೋದರಿ ಫುಲ್ಲಾ ನಾಯ್ಕ್

March 17, 2026
56
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

March 18, 2026
ಮೂಡುಬಿದಿರೆ ಇನ್ಸ್‌ಪೆಕ್ಟರ್ ಕಾಮಕಾಂಡ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಕೊಟ್ಟ ಸಂತ್ರಸ್ತೆ ಸಹೋದರಿ ಫುಲ್ಲಾ ನಾಯ್ಕ್

ಮೂಡುಬಿದಿರೆ ಇನ್ಸ್‌ಪೆಕ್ಟರ್ ಕಾಮಕಾಂಡ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಕೊಟ್ಟ ಸಂತ್ರಸ್ತೆ ಸಹೋದರಿ ಫುಲ್ಲಾ ನಾಯ್ಕ್

March 17, 2026
ಉಡುಪಿ: ಕಟಪಾಡಿ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ; ಅನಿಲ ಸೋರಿಕೆ ಹಿನ್ನೆಲೆ ಉಡುಪಿ- ಮಂಗಳೂರು ಸಂಚಾರಕ್ಕೆ ಪರ್ಯಾಯ ರಸ್ತೆಗೆ ಸೂಚನೆ

ಉಡುಪಿ: ಕಟಪಾಡಿ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ; ಅನಿಲ ಸೋರಿಕೆ ಹಿನ್ನೆಲೆ ಉಡುಪಿ- ಮಂಗಳೂರು ಸಂಚಾರಕ್ಕೆ ಪರ್ಯಾಯ ರಸ್ತೆಗೆ ಸೂಚನೆ

March 16, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d