ಬೆಂಗಳೂರು: ಹಾಲು, ನೀರು- ವಿದ್ಯುತ್ ದರ ಸೇರಿದಂತೆ ಬೆಲೆ ಏರಿಕೆಯ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ಮಾಡಿಲ್ಲ.ಅದು ಪ್ರಸ್ತಾಪವಷ್ಟೆ, ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು. ಕೊರೋನಾದಿಂದಾಗಿ ಬಡ-ಮಧ್ಯಮ ವರ್ಗದ ಜನರು ಕಷ್ಟದಲ್ಲಿದ್ದಾರೆ. ಎಲ್ಲಾ ಆಯಾಮಗಳಲ್ಲಿ ನೋಡಿಕೊಂಡು ನಾವು ತೀರ್ಮಾನ ಮಾಡುತ್ತೇವೆ, ಈ ವಿಷಯದಲ್ಲಿ ಅವಸರದ ತೀರ್ಮಾನಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಈ ಸ್ಪಷ್ಟನೆ ನೀಡಿದ ಅವರು, ಬೆಲೆ ಏರಿಕೆ ಮಾಡುವ ವಿಚಾರವಾಗಿ ನನಗೆ ಪ್ರಸ್ತಾವನೆ ಬಂದಿದ್ದು ಹೌದು, ಆದರೆ ಎಲ್ಲಾ ದೃಷ್ಟಿಕೋನದಿಂದ ನಾವು ನೋಡಬೇಕಾಗುತ್ತದೆ. ಕೊರೋನಾ ಹೊಡೆತದಿಂದ ಸಾಕಷ್ಟು ಜನ ನಲುಗಿಹೋಗಿದ್ದಾರೆ, ಜನರ ಜೀವದ ಜೊತೆಗೆ ಜೀವನವೂ ಮುಖ್ಯ, ಬೆಲೆ ಏರಿಕೆ ವಿಚಾರದಲ್ಲಿ ತರಾತುರಿಯ ನಿರ್ಧಾರವಿಲ್ಲ ಎಂದರು.
ವೀಕೆಂಡ್ ಕರ್ಫ್ಯೂ ರದ್ದು :
ಕೊರೋನಾ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಜನರ ಜೀವದ ಜೊತೆಗೆ ಜೀವನವೂ ನಡೆಯಬೇಕೆಂಬ ದೃಷ್ಟಿಯಿಂದ ವೀಕೆಂಡ್ ಕರ್ಫ್ಯೂವನ್ನು ರದ್ದುಪಡಿಸಲಾಗಿದೆ. ಕೊರೋನಾ ಮೂರನೇ ಅಲೆ ತೀವ್ರತೆ ಸೌಮ್ಯ ರೂಪದಲ್ಲಿದೆ. ಗುಣಮುಖ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರದ ಇಲಾಖೆಯವರು ಮತ್ತು ತಜ್ಞರು ಇದನ್ನು ಯಾವ ರೀತಿ ನಿರ್ವಹಿಸಬಹುದು ಎಂದು ಧೈರ್ಯ ನೀಡಿದ್ದರಿಂದ, ಬಡ-ಕೂಲಿ ಕಾರ್ಮಿಕರಿಗೆ ಕರ್ಫ್ಯೂನಿಂದ ತೊಂದರೆಯಾಗುತ್ತಿರುವುದರಿಂದ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡಲಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post