• About us
  • Contact us
  • Disclaimer
Tuesday, July 22, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕೇರಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ಧುರೀಣ ವಿ.ಎಸ್.ಅಚ್ಯುತಾನಂದನ್ 101ನೇ ವಯಸ್ಸಿನಲ್ಲಿ ನಿಧನ

Coastal Times by Coastal Times
July 22, 2025
in ರಾಷ್ಟ್ರೀಯ ಸುದ್ದಿ
ಕೇರಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ಧುರೀಣ ವಿ.ಎಸ್.ಅಚ್ಯುತಾನಂದನ್ 101ನೇ ವಯಸ್ಸಿನಲ್ಲಿ ನಿಧನ
20
VIEWS
WhatsappTelegramShare on FacebookShare on Twitter

ತಿರುವನಂತಪುರಂ(ಕೇರಳ): ದೇಶದ ಪ್ರಮುಖ ಕಮ್ಯೂನಿಸ್ಟ್​ ನಾಯಕ, ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರು​ ತಮ್ಮ 101ನೇ ವಯಸ್ಸಿನಲ್ಲಿ ಇಂದು ಇಹಲೋಕ ತ್ಯಜಿಸಿದರು. ಈ ಕುರಿತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್​ ಮಾಹಿತಿ ನೀಡಿದ್ದಾರೆ.

ಕಳೆದೊಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಾಯಕ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೇರಳ ರಾಜಕೀಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಅಚ್ಯುತಾನಂದನ್, ಸಿಪಿಐ (ಎಂ)ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ಕಾರ್ಮಿಕರ ಹಕ್ಕುಗಳು, ಭೂ ಸುಧಾರಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. 2006ರಿಂದ 2011ರವರೆಗೆ ಕೇರಳ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯ ವಿಧಾನಸಭೆಗೆ ಏಳು ಬಾರಿ ಆಯ್ಕೆಯಾಗಿದ್ದರು. ಮೂರು ಬಾರಿ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು.

ಈಗಿನ ಆಲಪ್ಪುಳ ಜಿಲ್ಲೆಯ ಪುನ್ನಪ್ರಾದಲ್ಲಿ 1923 ಅಕ್ಟೋಬರ್ 20ರಂದು ಜನಿಸಿದ್ದ ಅಚ್ಯುತಾನಂದನ್, ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿದ್ದರು. 14ನೇ ವಯಸ್ಸಿಗೆ ಶಾಲೆ ತೊರೆದು ನೌಕರಿಗೆ ಸೇರಿದ್ದರು. ತೆಂಗಿನ ನಾರಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಲೇ ಅಲ್ಲಿ ನಾಯಕರಾಗಿ ಬೆಳೆದರು.

1940ರಲ್ಲಿ ಕಮ್ಯೂನಿಸ್ಟ್ ಪಕ್ಷದ ಸದಸ್ಯತ್ವ ಪಡೆದು ಪಕ್ಷದ ಕಾರ್ಯಕರ್ತರಾದರು. 1946ರಲ್ಲಿ ನಡೆದ ಐತಿಹಾಸಿಕ ಪುನ್ನಪ್ರಾ-ವಯಲಾರ್ ದಂಗೆಯನ್ನು ಮುನ್ನಡೆಸಿ, ಬಂಧನಕ್ಕೂ ಒಳಗಾಗಿದ್ದರು. ಬಂಧನದಲ್ಲಿ ಸಾಕಷ್ಟು ದೌರ್ಜನ್ಯಕ್ಕೆ ಒಳಗಾದರು. ಇದಾದ ಬಳಿಕ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಬೆಳೆದರು. ಕಮ್ಯೂನಿಸ್ಟ್ ಕಠಿಣ ಶಿಸ್ತು ಮತ್ತು ನಿಲುವುಗಳಿಂದ ಜನಾನುರಾಗಿಯಾದರು. ಪಕ್ಷ ನೀಡಿದ ನಾಯಕತ್ವ ಮತ್ತು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ, ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿಯಾದರು. ಎಲ್​ಡಿಎಫ್​ ಸಂಚಾಲಕರು, ವಿಪಕ್ಷ ನಾಯಕರು, ಸಿಎಂ ಆಗಿ ಅನೇಕ ಹುದ್ದೆಗಳನ್ನು ವಿ.ಎಸ್.ಅಚ್ಯುತಾನಂದನ್ ನಿರ್ವಹಿಸಿದ್ದಾರೆ.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಯ ಪರಿಚಯ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಯುವಕರ ಬಂಧನ

Related Posts

ಹೆಂಡತಿಯ ತಲೆ ಬೋಳಿಸಿ ವಿಕೃತಿ ಮೆರೆದ ಪಾಪಿ ಪತಿ, ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ
ಕ್ರೈಮ್ ನ್ಯೂಸ್

ಹೆಂಡತಿಯ ತಲೆ ಬೋಳಿಸಿ ವಿಕೃತಿ ಮೆರೆದ ಪಾಪಿ ಪತಿ, ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

July 16, 2025
127
ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು
ರಾಷ್ಟ್ರೀಯ ಸುದ್ದಿ

ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

July 12, 2025
53

Discussion about this post

Recent News

ಕೇರಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ಧುರೀಣ ವಿ.ಎಸ್.ಅಚ್ಯುತಾನಂದನ್ 101ನೇ ವಯಸ್ಸಿನಲ್ಲಿ ನಿಧನ

ಕೇರಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ಧುರೀಣ ವಿ.ಎಸ್.ಅಚ್ಯುತಾನಂದನ್ 101ನೇ ವಯಸ್ಸಿನಲ್ಲಿ ನಿಧನ

July 22, 2025
20
ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಯ ಪರಿಚಯ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಯುವಕರ ಬಂಧನ

ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಯ ಪರಿಚಯ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಯುವಕರ ಬಂಧನ

July 21, 2025
164
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕೇರಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ಧುರೀಣ ವಿ.ಎಸ್.ಅಚ್ಯುತಾನಂದನ್ 101ನೇ ವಯಸ್ಸಿನಲ್ಲಿ ನಿಧನ

ಕೇರಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ಧುರೀಣ ವಿ.ಎಸ್.ಅಚ್ಯುತಾನಂದನ್ 101ನೇ ವಯಸ್ಸಿನಲ್ಲಿ ನಿಧನ

July 22, 2025
ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಯ ಪರಿಚಯ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಯುವಕರ ಬಂಧನ

ಮಂಗಳೂರು: ಇನ್‌ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಯ ಪರಿಚಯ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಯುವಕರ ಬಂಧನ

July 21, 2025
ಭಾರತದಲ್ಲಿ ಮತಾಂತರಕ್ಕೆ ಅಮೆರಿಕ, ಕೆನಾಡ ಸೇರಿದಂತೆ ವಿದೇಶಗಳಿಂದ ಫಂಡಿಂಗ್‌ 6 ರಾಜ್ಯಗಳಲ್ಲಿ 10 ಮಂದಿ ಅರೆಸ್ಟ್‌ ಬೃಹತ್‌ ಜಾಲ ಭೇದಿಸಿದ ಯುಪಿ ಪೊಲೀಸರು

ಭಾರತದಲ್ಲಿ ಮತಾಂತರಕ್ಕೆ ಅಮೆರಿಕ, ಕೆನಾಡ ಸೇರಿದಂತೆ ವಿದೇಶಗಳಿಂದ ಫಂಡಿಂಗ್‌ 6 ರಾಜ್ಯಗಳಲ್ಲಿ 10 ಮಂದಿ ಅರೆಸ್ಟ್‌ ಬೃಹತ್‌ ಜಾಲ ಭೇದಿಸಿದ ಯುಪಿ ಪೊಲೀಸರು

July 20, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d