• About us
  • Contact us
  • Disclaimer
Monday, August 25, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಚೇತೇಶ್ವರ್ ಪೂಜಾರ ಅವರು ಎಲ್ಲಾ ಸ್ವರೂಪಗಳ ಕ್ರಿಕೆಟ್ ನಿಂದ ನಿವೃತ್ತಿ

Coastal Times by Coastal Times
August 24, 2025
in ಕ್ರೀಡಾ ಸುದ್ದಿ
ಚೇತೇಶ್ವರ್ ಪೂಜಾರ ಅವರು ಎಲ್ಲಾ ಸ್ವರೂಪಗಳ ಕ್ರಿಕೆಟ್ ನಿಂದ ನಿವೃತ್ತಿ
15
VIEWS
WhatsappTelegramShare on FacebookShare on Twitter

ಹೈದರಾಬಾದ್: ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​, ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರ್ ಅವರು​ ಇಂದು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ‘ಎಕ್ಸ್’​ನಲ್ಲಿ ಪೋಸ್ಟ್ ಮಾಡಿರುವ ಪೂಜಾರ, “ಭಾರತೀಯ ಜೆರ್ಸಿ ಧರಿಸುವುದು, ರಾಷ್ಟ್ರಗೀತೆ ಹಾಡುವುದು ಮತ್ತು ಮೈದಾನಕ್ಕೆ ಕಾಲಿಡುವಾಗ ಪ್ರತಿ ಬಾರಿಯೂ ತಂಡಕ್ಕೆ ನನ್ನ ಕೈಲಾದ ಪ್ರಯತ್ನಗಳನ್ನು ಮಾಡುತ್ತಿದ್ದುದರ ನಿಜವಾದ ಅರ್ಥವನ್ನು ಪದಗಳಲ್ಲಿ ಹೇಳುವುದು ಅಸಾಧ್ಯ. ಆದರೆ ಎಲ್ಲಾ ಒಳ್ಳೆಯ ವಿಷಯಗಳು ಒಂದಲ್ಲ ಒಂದು ದಿನ ಕೊನೆಗೊಳ್ಳಲೇಬೇಕು. ಅದರಂತೆ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಿಮ್ಮ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

“ನಾನು ನನ್ನ ಕ್ರಿಕೆಟ್ ಪ್ರಯಾಣವನ್ನು ಪ್ರಾರಂಭಿಸಿದಾಗ, ಈ ಆಟ ನನಗೆ ಇಷ್ಟೊಂದು ಯಶಸ್ಸು ನೀಡುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ. ಅಮೂಲ್ಯ ಅವಕಾಶಗಳು, ಅನುಭವ, ಪ್ರೀತಿ ಮತ್ತು ಮುಖ್ಯವಾಗಿ ನನ್ನ ರಾಜ್ಯ ಮತ್ತು ಈ ದೇಶವನ್ನು ಪ್ರತಿನಿಧಿಸಿರುವ ಬಗ್ಗೆ ನನಗೆ ಹೆಮ್ಮೆಯಿದೆ” ಎಂದಿದ್ದಾರೆ. “ನನಗೆ ಅವಕಾಶ, ಬೆಂಬಲ ನೀಡಿದ ಬಿಸಿಸಿಐ ಮತ್ತು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ಗೆ ಧನ್ಯವಾದ ಹೇಳಬಯಸುತ್ತೇನೆ. ಇದಲ್ಲದೆ, ನನಗೆ ಅವಕಾಶ ನೀಡಿದ ಎಲ್ಲಾ ತಂಡಗಳು, ಫ್ರಾಂಚೈಸಿಗಳು ಮತ್ತು ಕೌಂಟಿ ತಂಡಗಳಿಗೂ ನಾನು ಕೃತಜ್ಞ. ನನ್ನ ಗುರುಗಳು, ತರಬೇತುದಾರರು ಮತ್ತು ಮಾರ್ಗದರ್ಶಕರಿಲ್ಲದೆ ನಾನು ಇಲ್ಲಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಅವರಿಗೆ ಯಾವಾಗಲೂ ಋಣಿಯಾಗಿರುತ್ತೇನೆ”.

“ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ನೆಟ್ ಬೌಲರ್‌ಗಳು, ವಿಶ್ಲೇಷಕರು, ಲಾಜಿಸ್ಟಿಕ್ಸ್ ತಂಡ, ಅಂಪೈರ್‌ಗಳು, ಗ್ರೌಂಡ್ ಸ್ಟಾಫ್, ಸ್ಕೋರರ್‌ಗಳು, ಮಾಧ್ಯಮ ಸಿಬ್ಬಂದಿ ಮತ್ತು ತೆರೆಮರೆಯಲ್ಲಿ ಶ್ರಮಿಸುವ ಮತ್ತು ನನಗೆ ಮೈದಾನದಲ್ಲಿ ಉತ್ತಮವಾಗಿ ಆಡುವಂತೆ ಸಹಾಯ ಮಾಡಿದ ಮತ್ತು ಪ್ರಾಯೋಜಕರು, ಪಾಲುದಾರರಿಗೂ ಧನ್ಯವಾದ ಅರ್ಪಿಸುತ್ತೇನೆ” ಎಂದು ಪೂಜಾರ್ ಬರೆದುಕೊಂಡಿದ್ದಾರೆ.

ಚೇತೇಶ್ವರ್ ಪೂಜಾರ್​ ಕ್ರಿಕೆಟ್​ ಜರ್ನಿ: 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪೂಜಾರ, ಟೆಸ್ಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಟೀಮ್ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ ಕೆಲವೇ ಕ್ರಿಕೆಟಿಗರಲ್ಲಿ ಪೂಜಾರ ಒಬ್ಬರು. ತಮ್ಮ 15 ವರ್ಷಗಳ ಕ್ರಿಕೆಟ್​ ವೃತ್ತಿಜೀವನದಲ್ಲಿ 103 ಟೆಸ್ಟ್‌ಗ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 7,195 ರನ್ ಗಳಿಸಿದ್ದು, 19 ಶತಕಗಳು ಮತ್ತು 3 ದ್ವಿಶತಕಗಳು ಸೇರಿವೆ. ಅತ್ಯುತ್ತಮ ಸ್ಕೋರ್ 206* ಆಗಿದೆ.

ಇದಲ್ಲದೆ 278 ಪ್ರಥಮ ದರ್ಜೆ ಪಂದ್ಯಗಳು, 130 ಲಿಸ್ಟ್ ಎ ಮತ್ತು 71 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ 66 ಶತಕಗಳೊಂದಿಗೆ 21,301 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಲಿಸ್ಟ್ ಎನಲ್ಲಿ 16 ಶತಕಗಳೊಂದಿಗೆ 5,759 ರನ್ ಗಳಿಸಿದ್ದಾರೆ. ಟಿ20 ನಲ್ಲಿ ಒಂದು ಶತಕದೊಂದಿಗೆ 1,556 ರನ್ ಗಳಿಸಿದ್ದಾರೆ. ಜೂನ್ 2023ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಬೋಂದೆಲ್ ಜಂಕ್ಷನ್ ಬಳಿ ಬೀದಿಬದಿ ಮಹಿಳಾ ಹೂವಿನ ವ್ಯಾಪಾರಿ ಆತ್ಮಹತ್ಯೆಗೆ ಯತ್ನ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Next Post

ಶಿವಮೊಗ್ಗ : ಶಿಕ್ಷಕ ಇಮ್ತಿಯಾಝ್ ಕೊಲೆ ಪ್ರಕರಣ, ಪತ್ನಿ, ಪ್ರಿಯಕರನಿಗೆ ಮರಣದಂಡನೆ

Related Posts

ಚೆಸ್ ಗ್ರ್ಯಾಂಡ್ ಮಾಸ್ಟರ್ ಸೋಲಿಸಿ ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಬ್ರಿಟಿಷ್ ಚೆಸ್ ಆಟಗಾರ್ತಿ 10 ವರ್ಷದ ಬೋಧನಾ ಶಿವಾನಂದನ್
ಕ್ರೀಡಾ ಸುದ್ದಿ

ಚೆಸ್ ಗ್ರ್ಯಾಂಡ್ ಮಾಸ್ಟರ್ ಸೋಲಿಸಿ ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಬ್ರಿಟಿಷ್ ಚೆಸ್ ಆಟಗಾರ್ತಿ 10 ವರ್ಷದ ಬೋಧನಾ ಶಿವಾನಂದನ್

August 15, 2025
15
Asia Cup 2025: ಏಷ್ಯಾ ಕಪ್ ಪಂದ್ಯಾವಳಿಯು ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಲಿದೆ, ಯುಎಇಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಿದೆ ಬಿಸಿಸಿಐ
ಕ್ರೀಡಾ ಸುದ್ದಿ

Asia Cup 2025: ಏಷ್ಯಾ ಕಪ್ ಪಂದ್ಯಾವಳಿಯು ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಲಿದೆ, ಯುಎಇಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಿದೆ ಬಿಸಿಸಿಐ

July 24, 2025
13
Next Post
ಶಿವಮೊಗ್ಗ : ಶಿಕ್ಷಕ ಇಮ್ತಿಯಾಝ್ ಕೊಲೆ ಪ್ರಕರಣ, ಪತ್ನಿ, ಪ್ರಿಯಕರನಿಗೆ ಮರಣದಂಡನೆ

ಶಿವಮೊಗ್ಗ : ಶಿಕ್ಷಕ ಇಮ್ತಿಯಾಝ್ ಕೊಲೆ ಪ್ರಕರಣ, ಪತ್ನಿ, ಪ್ರಿಯಕರನಿಗೆ ಮರಣದಂಡನೆ

Discussion about this post

Recent News

ಮಂಗಳೂರು ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪ: ಜೈಲು ಸಿಬ್ಬಂದಿ ಸಂತೋಷ್ ಬಂಧನ

ಮಂಗಳೂರು ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪ: ಜೈಲು ಸಿಬ್ಬಂದಿ ಸಂತೋಷ್ ಬಂಧನ

August 25, 2025
19
ಶಿವಮೊಗ್ಗ : ಶಿಕ್ಷಕ ಇಮ್ತಿಯಾಝ್ ಕೊಲೆ ಪ್ರಕರಣ, ಪತ್ನಿ, ಪ್ರಿಯಕರನಿಗೆ ಮರಣದಂಡನೆ

ಶಿವಮೊಗ್ಗ : ಶಿಕ್ಷಕ ಇಮ್ತಿಯಾಝ್ ಕೊಲೆ ಪ್ರಕರಣ, ಪತ್ನಿ, ಪ್ರಿಯಕರನಿಗೆ ಮರಣದಂಡನೆ

August 25, 2025
30
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪ: ಜೈಲು ಸಿಬ್ಬಂದಿ ಸಂತೋಷ್ ಬಂಧನ

ಮಂಗಳೂರು ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆರೋಪ: ಜೈಲು ಸಿಬ್ಬಂದಿ ಸಂತೋಷ್ ಬಂಧನ

August 25, 2025
ಶಿವಮೊಗ್ಗ : ಶಿಕ್ಷಕ ಇಮ್ತಿಯಾಝ್ ಕೊಲೆ ಪ್ರಕರಣ, ಪತ್ನಿ, ಪ್ರಿಯಕರನಿಗೆ ಮರಣದಂಡನೆ

ಶಿವಮೊಗ್ಗ : ಶಿಕ್ಷಕ ಇಮ್ತಿಯಾಝ್ ಕೊಲೆ ಪ್ರಕರಣ, ಪತ್ನಿ, ಪ್ರಿಯಕರನಿಗೆ ಮರಣದಂಡನೆ

August 25, 2025
ಚೇತೇಶ್ವರ್ ಪೂಜಾರ ಅವರು ಎಲ್ಲಾ ಸ್ವರೂಪಗಳ ಕ್ರಿಕೆಟ್ ನಿಂದ ನಿವೃತ್ತಿ

ಚೇತೇಶ್ವರ್ ಪೂಜಾರ ಅವರು ಎಲ್ಲಾ ಸ್ವರೂಪಗಳ ಕ್ರಿಕೆಟ್ ನಿಂದ ನಿವೃತ್ತಿ

August 24, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d