ಉಡುಪಿ: ಹೂಡೆ ಬೀಚ್ನಲ್ಲಿ ಭಾನುವಾರ ಈಜಲು ಹೋಗಿ ಅಲೆಗಳ ಸೆಳೆತಕ್ಕೆ ಸಿಲುಕಿ ತೀವ್ರ ಅಸ್ವಸ್ಥಗೊಂಡಿದ್ದ ಮಣಿಪಾಲದ ಎಂಐಟಿಯ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಒಬ್ಬ ವಿದ್ಯಾರ್ಥಿ ಸಮುದ್ರದ ಅಲೆಯಲ್ಲಿ ಕೊಚ್ಚಿಹೋಗಿದ್ದು ಶೋಧ ಕಾರ್ಯ ನಡೆಯುತ್ತಿದೆ. ಬೆಂಗಳೂರು ಮೂಲದ ಶಣ್ಮುಖ(19) ಮತ್ತು ನಿಶಾಂತ್ (19) ಎಂಬಿಬ್ಬರ ಶವ ಪತ್ತೆಯಾಗಿದ್ದು ಹೈದರಾಬಾದ್ ಮೂಲದ ಶ್ರೀಕರ್ (19) ಎಂಬ ವಿದ್ಯಾರ್ಥಿಯ ಶವಕ್ಕಾಗಿ ಹುಡುಕಾಟ ನಡೆದಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಸ್ನೇಹಿತರೆಲ್ಲ ಹೂಡೆ ಬೀಚ್ಗೆ ಬಂದು ಈಜುವಾಗ ಮೂವರು ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಒಬ್ಬ ವಿದ್ಯಾರ್ಥಿ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿಹೋಗಿದ್ದ. ವಿದ್ಯಾರ್ಥಿಗಳು ನೀರಿಗಿಳಿದಿದ್ದ ಜಾಗ ತೀರ ಅಪಾಯಕಾರಿ ಸ್ಥಳವಾಗಿದ್ದು, ಭಾನುವಾರ ಅಮಾವಾಸ್ಯೆ ಆಗಿದ್ದರಿಂದ ಸಮುದ್ರದಲ್ಲಿ ಭೋರ್ಗರೆತ ಹೆಚ್ಚಿತ್ತು. ಬೀಚ್ ಏರಿಯಾದಲ್ಲಿ ಯಾವುದೇ ಜೀವ ರಕ್ಷಕ ತಂಡಗಳಿಲ್ಲ. ಸ್ಥಳೀಯರು ನೀರು ರಭಸ ಇದೆ, ಹೊಂಡ ಬೀಳುತ್ತೆ ಎನ್ನುವ ಎಚ್ಚರಿಕೆ ನೀಡಿದ್ದರೂ ಯುವಕರು ನೀರಾಟ ಆಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post