• About us
  • Contact us
  • Disclaimer
Friday, December 12, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಕ್ರೇನ್‌ನಿಂದ ಸುರಕ್ಷಿತವಾಗಿ ದೆಹಲಿಗೆ ಬಂದಿಳಿದ ಕರ್ನಾಟಕದ‌ ವಿದ್ಯಾರ್ಥಿಗಳು.

Coastal Times by Coastal Times
February 27, 2022
in ರಾಷ್ಟ್ರೀಯ ಸುದ್ದಿ
ಉಕ್ರೇನ್‌ನಿಂದ ಸುರಕ್ಷಿತವಾಗಿ ದೆಹಲಿಗೆ ಬಂದಿಳಿದ ಕರ್ನಾಟಕದ‌ ವಿದ್ಯಾರ್ಥಿಗಳು.
15
VIEWS
WhatsappTelegramShare on FacebookShare on Twitter

ನವದೆಹಲಿ: ಉಕ್ರೇನ್‌ಗೆ ವ್ಯಾಸಂಗಕ್ಕೆ ತೆರಳಿದ್ದ ರಾಜ್ಯದ ಒಟ್ಟು 18 ವಿದ್ಯಾರ್ಥಿಗಳು ಭಾನುವಾರ ಬೆಳಗಿನ ಜಾವ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಯುದ್ಧಪೀಡಿತ ಉಕ್ರೇನ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದ್ದರಿಂದ ನೆರೆಯ ರೋಮೆನಿಯಾ ತಲುಪಿದ್ದ ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳು, ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸತತ 10 ಗಂಟೆ‌ ಪ್ರಯಾಣ ಮಾಡಿ ಇಲ್ಲಿಗೆ ಸುರಕ್ಷಿತವಾಗಿ ಬಂದಿಳಿದರು.

ಸಾಕ್ಷಿ ದಾಮನಕರ್, ಮಹಾಗಣಪತಿ ಬಿಳಿಮಗ್ಗದ, ಐಶ್ವರ್ಯಾ ಪಾಟೀಲ, ಚಂದ್ರಶೇಖರ, ಮಿಜ್ಬಾ‌ ನೂರ್, ಮುನಿಸ್ವಾಮಿ ಗೌಡ, ಜೈನಾ ಎರಂ, ಧನರಾಜ್, ರಾವತನಹಳ್ಳಿ ಸ್ವಾತಿ, ಬಿ.ಜ್ಞಾನಶ್ರೀ, ಎಂ.ಯಶವಂತ, ಗಣೇಶ್ವರ ಪ್ರಿಯಾ, ಕೆ.ಜೆ.‌ ದೀಪಿಕಾ ಅವರು ಮೊದಲ ವಿಮಾನದಲ್ಲಿ ಬಂದಿಳಿದಿದ್ದು, ಇನ್ನು ಐದು ಜನ ಎರಡನೇ ವಿಮಾನದಲ್ಲಿ ಬಂದಿದ್ದಾರೆ.

ಕರ್ನಾಟಕ ಭವನದ‌ ಅಧಿಕಾರಿಗಳು ಈ ಎಲ್ಲ ವಿದ್ಯಾರ್ಥಿಗಳನ್ನು ಸರ್ದಾರ್ ಪಟೇಲ್ ಮಾರ್ಗದಲ್ಲಿರುವ‌ ಕರ್ನಾಟಕ ಭವನಕ್ಕೆ ಕರೆ‌ ತಂದಿದ್ದು, ಬೆಂಗಳೂರಿಗೆ ಕಳುಹಿಸಲು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ.

ಯುದ್ಧದ ಆತಂಕ, ಶೀತ ವಾತವರಣ, ದೂರದ  ಪ್ರಯಾಣದಿಂದ ಬಳಲಿರುವ‌ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ತಮ್ಮ ತಮ್ಮ ಊರುಗಳಿಗೆ ತಲುಪಲು ಅಗತ್ಯವಿರುವ ಮುಂದಿನ ಪ್ರಯಾಣಕ್ಕೆ ಅಣಿಯಾಗುತ್ತಿದ್ದಾರೆ.

‘ಉಕ್ರೇನ್‌ನ ಕೀವ್ ಹಾಗೂ ಇತರ‌ ನಗರಗಳಲ್ಲಿದ್ದ ನಾವು ಭಾರತೀಯ ರಾಯಭಾರಿ ಕಚೇರಿಯ ಸಹಕಾರದೊಂದಿಗೆ ರೋಮೆನಿಯಾ ಗಡಿ ತಲುಪಿ ಅಲ್ಲಿಂದ ಮರಳಿದ್ದೇವೆ. ಕೇಂದ್ರ ಸರ್ಕಾರ ಕೈಗೊಂಡ ವ್ಯವಸ್ಥೆಯಿಂದಾಗಿ ಸುರಕ್ಷಿತವಾಗಿ ವಾಪಸಾಗಲು ಸಾಧ್ಯವಾಯಿತು’ ಎಂದು ವಿದ್ಯಾರ್ಥಿಗಳು ಹೇಳಿದರು.

‘ಉಕ್ರೇನ್‌ನಲ್ಲಿ ಯುದ್ಧ ಭೀತಿ ಆವರಿಸಿದ್ದರಿಂದ ನಾವು ಸಾಕಷ್ಟು ಆತಂಕಕ್ಕೆ‌ ಒಳಗಾಗಿದ್ದೆವು. ತಾಯ್ನಾಡಿಗೆ‌ ಮರಳಿರುವುದರಿಂದ ಭೀತಿ ದೂರವಾಗಿದೆ. ರಾಜ್ಯದ ಇನ್ನೂ ಸಾಕಷ್ಟು ಜನ ಇನ್ನೂ ಅಲ್ಲೇ ಇದ್ದು, ಆದಷ್ಟು ಬೇಗ ವಾಪಸಾಗಲಿದ್ದಾರೆ’ ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರ ಈ ಎಲ್ಲ ವಿದ್ಯಾರ್ಥಿಗಳನ್ನು ವಾಪಸ್ ಬೆಂಗಳೂರಿಗೆ ಕರೆ ತರಲು ವ್ಯವಸ್ಥೆ ಮಾಡಿದ್ದು, ಮಧ್ಯಾಹ್ನ 2 ಗಂಟೆ ವಿಮಾನದ‌ ಮೂಲಕ ತೆರಳಲಿದ್ದಾರೆ ಎಂದು ಕರ್ನಾಟಕ ಭವನದ ಅಧಿಕಾರಿಗಳು ಹೇಳಿದರು. ಸಚಿವ ಆರ್.ಅಶೋಕ್ ಈ ವಿದ್ಯಾರ್ಥಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸಿದರು. ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಭವನಕ್ಕೆ‌ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಆಪರೇಷನ್ ಗಂಗಾ: ಉಕ್ರೇನ್‌ನಿಂದ 250 ಮಂದಿ ಭಾರತಕ್ಕೆ

Next Post

ರಷ್ಯಾ ಜೊತೆ ಶಾಂತಿ ಮಾತುಕತೆಗೆ ಸಿದ್ಧ; ಬೆಲಾರಸ್‌ನಲ್ಲಿ ಮಾತಕುತೆ ಬೇಡ – ಉಕ್ರೇನ್ ಅಧ್ಯಕ್ಷ!

Related Posts

ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ಭಾರೀ ಬೆಂಕಿ, ಸಿಲಿಂಡರ್ ಸ್ಫೋಟಕ್ಕೆ 20 ಪುರುಷರು ಮೂವರು ಮಹಿಳೆಯರು ಸಜೀವ ದಹನ
ರಾಷ್ಟ್ರೀಯ ಸುದ್ದಿ

ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ಭಾರೀ ಬೆಂಕಿ, ಸಿಲಿಂಡರ್ ಸ್ಫೋಟಕ್ಕೆ 20 ಪುರುಷರು ಮೂವರು ಮಹಿಳೆಯರು ಸಜೀವ ದಹನ

December 7, 2025
74
48 ಗಂಟೆಯೊಳಗೆ ಬಾಕಿ ಹಣ ಮರುಪಾವತಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸೂಚನೆ
ರಾಷ್ಟ್ರೀಯ ಸುದ್ದಿ

48 ಗಂಟೆಯೊಳಗೆ ಬಾಕಿ ಹಣ ಮರುಪಾವತಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸೂಚನೆ

December 6, 2025
50
Next Post
ರಷ್ಯಾ ಜೊತೆ ಶಾಂತಿ ಮಾತುಕತೆಗೆ ಸಿದ್ಧ; ಬೆಲಾರಸ್‌ನಲ್ಲಿ ಮಾತಕುತೆ ಬೇಡ – ಉಕ್ರೇನ್ ಅಧ್ಯಕ್ಷ!

ರಷ್ಯಾ ಜೊತೆ ಶಾಂತಿ ಮಾತುಕತೆಗೆ ಸಿದ್ಧ; ಬೆಲಾರಸ್‌ನಲ್ಲಿ ಮಾತಕುತೆ ಬೇಡ - ಉಕ್ರೇನ್ ಅಧ್ಯಕ್ಷ!

Discussion about this post

Recent News

ಮಂಗಳೂರು: ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, ತಪಾಸಣೆಗೆ ಸಿಕ್ಕಿಬಿದ್ದ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಮಂಗಳೂರು: ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, ತಪಾಸಣೆಗೆ ಸಿಕ್ಕಿಬಿದ್ದ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

December 11, 2025
66
ಬಂಟ್ವಾಳ: ಹೊಟೇಲ್ ಮುಂಭಾಗದಲ್ಲಿದ್ದ ಖಾದ್ಯಕ್ಕಾಗಿ‌ ಇರಿಸಲಾಗಿದ್ದ ಶವರ್ಮಾ ತಿನ್ನುತ್ತಿರುವ ನಾಯಿ‌ – ವಿಡಿಯೋ ವೈರಲ್

ಬಂಟ್ವಾಳ: ಹೊಟೇಲ್ ಮುಂಭಾಗದಲ್ಲಿದ್ದ ಖಾದ್ಯಕ್ಕಾಗಿ‌ ಇರಿಸಲಾಗಿದ್ದ ಶವರ್ಮಾ ತಿನ್ನುತ್ತಿರುವ ನಾಯಿ‌ – ವಿಡಿಯೋ ವೈರಲ್

December 11, 2025
104
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, ತಪಾಸಣೆಗೆ ಸಿಕ್ಕಿಬಿದ್ದ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

ಮಂಗಳೂರು: ಶಾಲಾ-ಕಾಲೇಜು ಕ್ಯಾಂಪಸ್‌ನಲ್ಲಿ ಡ್ರಗ್‌ ಬೇಟೆಯಾಡಿದ ಪೊಲೀಸರು: ರ‍್ಯಾಡಂಮ್‌ ಟೆಸ್ಟ್‌, ತಪಾಸಣೆಗೆ ಸಿಕ್ಕಿಬಿದ್ದ 20ವಿದ್ಯಾರ್ಥಿಗಳಲ್ಲಿ ಪಾಸಿಟಿವ್‌

December 11, 2025
ಬಂಟ್ವಾಳ: ಹೊಟೇಲ್ ಮುಂಭಾಗದಲ್ಲಿದ್ದ ಖಾದ್ಯಕ್ಕಾಗಿ‌ ಇರಿಸಲಾಗಿದ್ದ ಶವರ್ಮಾ ತಿನ್ನುತ್ತಿರುವ ನಾಯಿ‌ – ವಿಡಿಯೋ ವೈರಲ್

ಬಂಟ್ವಾಳ: ಹೊಟೇಲ್ ಮುಂಭಾಗದಲ್ಲಿದ್ದ ಖಾದ್ಯಕ್ಕಾಗಿ‌ ಇರಿಸಲಾಗಿದ್ದ ಶವರ್ಮಾ ತಿನ್ನುತ್ತಿರುವ ನಾಯಿ‌ – ವಿಡಿಯೋ ವೈರಲ್

December 11, 2025
ಪಡುಬಿದ್ರೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಗೌಜಿ ಇವೆಂಟ್ಸ್ ಮಾಲಕ ಅಭಿಷೇಕ್ ಮೃತ್ಯು

ಪಡುಬಿದ್ರೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಗೌಜಿ ಇವೆಂಟ್ಸ್ ಮಾಲಕ ಅಭಿಷೇಕ್ ಮೃತ್ಯು

December 10, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d