ಮಂಗಳೂರು : ಬಿಜೆಪಿ ಚುನಾವಣ ಪ್ರಚಾರದ ಭಾಗವಾಗಿ ಶನಿವಾರ(ಎ 29) ನಗರದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ರೋಡ್ ಶೋ ನಡೆಸಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಿಂದ ಆರಂಭವಾಗುವ ರೋಡ್ ಶೋ, ಕೆ.ಎಸ್. ರಾವ್ ರಸ್ತೆ ಮುಖಾಂತರ ಸಾಗಿ ಮಂಜೇಶ್ವರ ಗೋವಿಂದ ಪೈ (ನವಭಾರತ್) ಸರ್ಕಲ್ ನಲ್ಲಿ ಮುಕ್ತಾಯವಾಗಲಿದೆ. ರೋಡ್ ಶೋ ಗೆ ಸಿದ್ಧತೆಗಳು ಭರದಿಂದ ಸಾಗಿವೆ. ಸಿದ್ಧತೆಯ ಭಾಗವಾಗಿ ಮಂಗಳೂರು ಪೊಲೀಸರು ಶುಕ್ರವಾರ ನಗರದಲ್ಲಿ ರಿಹರ್ಸಲ್ ನಡೆಸಿದ್ದಾರೆ.
ನಗರದ ಜನತೆಯ ಬೆಂಬಲ ಪಡೆದು ಕ್ಷೇತ್ರದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುವ ನಿರೀಕ್ಷೆಯಲ್ಲಿ ಬಿಜೆಪಿ ಇದ್ದು, ಅದ್ಧೂರಿ ರೋಡ್ಶೋ ನಡೆಸಲಿದ್ದು, ಭಾರಿ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಪಕ್ಷದ ಎಲ್ಲಾ ಮುಖಂಡರುಗಳು, ಕಾರ್ಯಕರ್ತರು, ಹಿತೈಷಿಗಳು ಆಗಮಿಸುವಂತೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿ.ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post