ಮಂಗಳೂರು: ಮಕ್ಕಳು ಸಿಡಿಸಿದ ದೀಪಾವಳಿ ಪಟಾಕಿಯ ಕಿಡಿಯಿಂದ ನಗರದ ಬೆಂಗ್ರೆಯಲ್ಲಿ ಲಂಗರು ಹಾಕಲಾಗಿದ್ದ 3 ಬೋಟ್ಗಳಿಗೆ ಬೆಂಕಿ ತಗುಲಿ ಆಹುತಿಯಾದ ಘಟನೆ ಇಂದು ನಡೆದಿದೆ. ಲಕ್ಷದ್ವೀಪಕ್ಕೆ ಸರಕು ಸಾಗಾಟ ಮಾಡುವ ಬೋಟ್ಗಳಾಗಿದ್ದು ಮಂಗಳೂರಿನ ಬೆಂಗ್ರೆಯಲ್ಲಿ ರಿಪೇರಿ ಮಾಡಲು ಲಂಗರು ಹಾಕಲಾಗಿತ್ತು. ಇಲ್ಲಿ ಒಟ್ಟೊಟ್ಟಿಗೆ ಮೂರು ಬೋಟ್ಗಳು ಇದ್ದು, ಇದರ ಪಕ್ಕದಲ್ಲಿಯೆ ಮಕ್ಕಳು ಪಟಾಕಿ ಸಿಡಿಸಿದ್ದಾರೆ. ಆದರೆ ಪಟಾಕಿಯ ಕಿಡಿ ಬೋಟ್ನೊಳಗೆ ಬಿದ್ದು ಅನಾಹುತವಾಗಿದೆ.
ಮೂರು ಬೋಟ್ಗಳಲ್ಲಿ ಒಂದು ಬೋಟ್ನಲ್ಲಿ ಡೀಸೆಲ್ ತುಂಬಿತ್ತು. ಪಟಾಕಿಯ ಕಿಡಿಗೆ ಬೆಂಕಿ ಜ್ವಾಲೆಯಾಗಿ ಹಬ್ಬಿ ಪಕ್ಕದಲ್ಲಿದ್ದ ಎರಡು ಬೋಟ್ಗಳು ಆಹುತಿಯಾಗಿವೆ. ಸಂಜೆ 5 ಗಂಟೆಗೆ ತಗುಲಿದ ಬೆಂಕಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ನಂದಿಸಲಾಗಿದೆ. ಬಹುತೇಕ ಬೋಟ್ ಸುಟ್ಟುಹೋಗಿದೆ. ಕೋಟ್ಯಾಂತರ ರೂಪಾಯಿ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ ಮಂಗಳೂರಿನ ಪಾಂಡೇಶ್ವರ, ಕದ್ರಿ ಅಗ್ನಿ ಶಾಮಕ ದಳದ ವಾಹನ, ಸ್ಥಳೀಯ ಕೈಗಾರಿಕಾ ಸಂಸ್ಥೆಗಳ ಹತ್ತು ವಾಹನಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಮಂಗಳೂರು: ಬೆಂಗ್ರೆಯಲ್ಲಿ ಮಕ್ಕಳು ಸಿಡಿಸಿದ ಪಟಾಕಿಗೆ ಹೊತ್ತಿ ಉರಿದ ಬೋಟ್ಗಳು pic.twitter.com/htjIbN9AG0
— COASTAL TIMES (@times_coastal) October 28, 2022
Discover more from Coastal Times Kannada
Subscribe to get the latest posts sent to your email.
Discussion about this post