• About us
  • Contact us
  • Disclaimer
Thursday, August 7, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪ್ರಮಾಣ ಮಾಡಲು ಕಾನತ್ತೂರಿಗೆ ಬನ್ನಿ’ ಮಹೇಶ್ ಶೆಟ್ಟಿ ತಿಮರೋಡಿಗೆ ಧೀರಜ್ ಜೈನ್ ಆಹ್ವಾನ

Coastal Times by Coastal Times
June 30, 2023
in ಕರಾವಳಿ
ಪ್ರಮಾಣ ಮಾಡಲು ಕಾನತ್ತೂರಿಗೆ ಬನ್ನಿ’ ಮಹೇಶ್ ಶೆಟ್ಟಿ ತಿಮರೋಡಿಗೆ ಧೀರಜ್ ಜೈನ್ ಆಹ್ವಾನ
132
VIEWS
WhatsappTelegramShare on FacebookShare on Twitter

ಮಂಗಳೂರು, ಜೂನ್ 30: ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಿಐಡಿ ಮತ್ತು ಸಿಬಿಐ ಅಧಿಕಾರಿಗಳ ತನಿಖೆಗೆ ಒಳಪಟ್ಟಿದ್ದೇವೆ. ಅವರು ನಡೆಸಿರುವ ಎಲ್ಲ ರೀತಿಯ ತನಿಖೆಗೂ ಸಹಕರಿಸಿದ್ದೇವೆ. ನಮ್ಮನ್ನು ಸಿಬಿಐ ಅಧಿಕಾರಿಗಳು ಆರೋಪಿಗಳಲ್ಲ ಎಂದು ಹೇಳಿದ್ದರೂ, ತಿಮರೋಡಿ ಮಹೇಶ್ ಶೆಟ್ಟಿ ಮಾತ್ರ ನಮ್ಮನ್ನೇ ಆರೋಪಿಗಳೆಂದು ಹೇಳುತ್ತಿದ್ದಾರೆ. ಅವರೇ ಹೇಳಿದಂತೆ, ನಾವು ಕಾನತ್ತೂರಿಗೆ ಆಣೆ ಪ್ರಮಾಣಕ್ಕೆ ಕರೆಯುತ್ತೇವೆ. ತಿಮರೋಡಿ ಮತ್ತು ಅವರ ತಂಡದವರು ದೈವದ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಧರ್ಮಸ್ಥಳದ ಧೀರಜ್ ಜೈನ್ ಸವಾಲು ಹಾಕಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರದ ಪ್ರಮುಖರ ವಿರುದ್ಧ ಆರೋಪ ಮಾಡಿ, ಮುಗ್ಧ ಜನರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ಸಿಬಿಐ ತನಿಖೆ ನಡೆಸುವಾಗ, ಸಾಕ್ಷಿಯ ಹೇಳಿಕೆ ನೀಡಲು ಹಿಂದೇಟು ಹಾಕಿದರು. ಯಾರ ಮೇಲೆ ಆರೋಪ ಮಾಡಲಾಗಿತ್ತೋ ಅವರು ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಈಗ ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ಆರೋಪ ಮಾಡುವ ವ್ಯಕ್ತಿಗೆ ನಿಜವಾದ ಕಾಳಜಿ ಇದ್ದರೆ, ನೈಜ ಆರೋಪಿಗಳ ಬಂಧನಕ್ಕೆ ಹಾಗೂ ಪೊಲೀಸ್ ತನಿಖೆಯ ವಿರುದ್ಧ ಧರಣಿ ನಡೆಸಲಿ’ ಎಂದರು.

ಬೆಳ್ತಂಗಡಿಯ ಧೀರಜ್ ಜೈನ್ ಮಾತನಾಡಿ, ‘ನಮ್ಮ ಮೇಲೆ ಆರೋಪ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಜತೆಗಿದ್ದವರಿಗೆ ಆರೋಪದ ಬಗ್ಗೆ ದೃಢತೆ ಇದ್ದರೆ, ತುಳುನಾಡಿನ ಆರಾಧ್ಯ ಕ್ಷೇತ್ರವಾದ ಕಾನತ್ತೂರು ದೈವ ಕ್ಷೇತ್ರಕ್ಕೆ 10 ದಿನಗಳೊಳಗೆ ಬಂದು ಪ್ರಮಾಣ ಮಾಡಲಿ. ನಾವು ದೈವದ ಸಮ್ಮುಖದಲ್ಲಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ಹಿಂದೆಯೂ ಪ್ರಮಾಣಕ್ಕೆ ಕರೆದಾಗ ಅವರು ಬಂದಿರಲಿಲ್ಲ. ಈಗಲಾದರೂ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.

‘ಈ ಹಿಂದೆ ಸಿಐಡಿ, ಸಿಬಿಐ ತನಿಖಾ ಸಂಸ್ಥೆಗಳು ಎರಡು ಬಾರಿ ನನ್ನನ್ನು ಹಾಗೂ ಮಲ್ಲಿಕ್ ಜೈನ್, ಉದಯ ಜೈನ್‌ ಅವರನ್ನು ತನಿಖೆಗೆ ಒಳಪಡಿಸಿವೆ. ಸಿಬಿಐ ತಂಡವು ರಕ್ತ ಪರೀಕ್ಷೆ, ಡಿಎನ್‌ಎ, ಮಂಪರು ಪರೀಕ್ಷೆ (ಬ್ರೇನ್ ಮ್ಯಾಪಿಂಗ್‌), ಮೊಬೈಲ್ ಲೊಕೇಷನ್ ಪತ್ತೆ, ಸುಳ್ಳು ಪತ್ತೆ (ಪಾಲಿಗ್ರಾಫ್ ಟೆಸ್ಟ್), ಇನ್ನೂ ಅನೇಕ ರೀತಿ ವೈಜ್ಞಾನಿಕ ವಿಧದಲ್ಲಿ ತನಿಖೆಗೆ ಒಳಪಡಿಸಿದೆ. ಅಮಾಯಕ ಯುವತಿಯ ಸಾವಿಗೆ ನ್ಯಾಯ ಸಿಗಲಿ ಎಂಬ ಕಾರಣಕ್ಕೆ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. 2015ರ ಸಿಬಿಐ ಚಾರ್ಜ್‌ ಶೀಟ್‌ನಲ್ಲೂ ನಮ್ಮನ್ನು ಆರೋಪಿಗಳು ಎಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ನಂತರ ಸಿಬಿಐ ಕೋರ್ಟ್ ನಮ್ಮನ್ನು ನಿರಪರಾಧಿಗಳು ಎಂದು ಆದೇಶ ನೀಡಿದ್ದರೂ, ನಮ್ಮ ಮೇಲೆ ಈಗಲೂ ಆರೋಪ ಮಾಡಲಾಗುತ್ತಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕ್ ಜೈನ್, ಉದಯ ಜೈನ್ ಉಪಸ್ಥಿತರಿದ್ದರು.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಕೃತಕ ಗರ್ಭಧಾರಣೆಯಿಂದ ಅವಳಿ ಮಕ್ಕಳ ಜನನ..ವೈದ್ಯರ ಎಡವಟ್ಟಿನಿಂದ ವೀರ್ಯ ಅದಲು ಬದಲು, ಆಸ್ಪತ್ರೆಗೆ ಬಿತ್ತು 1.5 ಕೋಟಿ ರೂ. ದಂಡ

Next Post

ಮಹಾರಾಷ್ಟ್ರ: ನಡುರಸ್ತೆಯಲ್ಲೇ ಹೊತ್ತಿ ಉರಿದ ಬಸ್, 25 ಮಂದಿ ಸಜೀವ ದಹನ! 8 ಪ್ರಯಾಣಿಕರಿಗೆ ಗಾಯ

Related Posts

ಧರ್ಮಸ್ಥಳ ಬಳಿ ಯೂಟ್ಯೂಬರ್ ತಂಡದ ಮೇಲೆ ಹಲ್ಲೆ ;ನಾಲ್ವರು ಆಸ್ಪತ್ರೆಗೆ ದಾಖಲು, ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ!
ಕರಾವಳಿ

ಧರ್ಮಸ್ಥಳ ಬಳಿ ಯೂಟ್ಯೂಬರ್ ತಂಡದ ಮೇಲೆ ಹಲ್ಲೆ ;ನಾಲ್ವರು ಆಸ್ಪತ್ರೆಗೆ ದಾಖಲು, ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ!

August 6, 2025
127
ಪತ್ರಕರ್ತರಿಗೆ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ: ಹುಬ್ಬಳ್ಳಿಯ ಕನ್ನಡ ಪ್ರಭ ಪತ್ರಿಕೆಯ ಛಾಯಾಗ್ರಾಹಕ ಈರಪ್ಪ ನಾಯ್ಕರ್ ಪ್ರಥಮ ಸ್ಥಾನ
ಕರಾವಳಿ

ಪತ್ರಕರ್ತರಿಗೆ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ: ಹುಬ್ಬಳ್ಳಿಯ ಕನ್ನಡ ಪ್ರಭ ಪತ್ರಿಕೆಯ ಛಾಯಾಗ್ರಾಹಕ ಈರಪ್ಪ ನಾಯ್ಕರ್ ಪ್ರಥಮ ಸ್ಥಾನ

August 5, 2025
26
Next Post
ಮಹಾರಾಷ್ಟ್ರ: ನಡುರಸ್ತೆಯಲ್ಲೇ ಹೊತ್ತಿ ಉರಿದ ಬಸ್, 25 ಮಂದಿ ಸಜೀವ ದಹನ! 8 ಪ್ರಯಾಣಿಕರಿಗೆ ಗಾಯ

ಮಹಾರಾಷ್ಟ್ರ: ನಡುರಸ್ತೆಯಲ್ಲೇ ಹೊತ್ತಿ ಉರಿದ ಬಸ್, 25 ಮಂದಿ ಸಜೀವ ದಹನ! 8 ಪ್ರಯಾಣಿಕರಿಗೆ ಗಾಯ

Discussion about this post

Recent News

ಧರ್ಮಸ್ಥಳ ಬಳಿ ಯೂಟ್ಯೂಬರ್ ತಂಡದ ಮೇಲೆ ಹಲ್ಲೆ ;ನಾಲ್ವರು ಆಸ್ಪತ್ರೆಗೆ ದಾಖಲು, ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ!

ಧರ್ಮಸ್ಥಳ ಬಳಿ ಯೂಟ್ಯೂಬರ್ ತಂಡದ ಮೇಲೆ ಹಲ್ಲೆ ;ನಾಲ್ವರು ಆಸ್ಪತ್ರೆಗೆ ದಾಖಲು, ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ!

August 6, 2025
127
ಮಂಗಳೂರು ಅಕ್ರಮ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು ಅಕ್ರಮ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳ ಬಂಧನ

August 6, 2025
4
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಧರ್ಮಸ್ಥಳ ಬಳಿ ಯೂಟ್ಯೂಬರ್ ತಂಡದ ಮೇಲೆ ಹಲ್ಲೆ ;ನಾಲ್ವರು ಆಸ್ಪತ್ರೆಗೆ ದಾಖಲು, ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ!

ಧರ್ಮಸ್ಥಳ ಬಳಿ ಯೂಟ್ಯೂಬರ್ ತಂಡದ ಮೇಲೆ ಹಲ್ಲೆ ;ನಾಲ್ವರು ಆಸ್ಪತ್ರೆಗೆ ದಾಖಲು, ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ!

August 6, 2025
ಮಂಗಳೂರು ಅಕ್ರಮ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು ಅಕ್ರಮ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳ ಬಂಧನ

August 6, 2025
ಪತ್ರಕರ್ತರಿಗೆ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ: ಹುಬ್ಬಳ್ಳಿಯ ಕನ್ನಡ ಪ್ರಭ ಪತ್ರಿಕೆಯ ಛಾಯಾಗ್ರಾಹಕ ಈರಪ್ಪ ನಾಯ್ಕರ್ ಪ್ರಥಮ ಸ್ಥಾನ

ಪತ್ರಕರ್ತರಿಗೆ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ: ಹುಬ್ಬಳ್ಳಿಯ ಕನ್ನಡ ಪ್ರಭ ಪತ್ರಿಕೆಯ ಛಾಯಾಗ್ರಾಹಕ ಈರಪ್ಪ ನಾಯ್ಕರ್ ಪ್ರಥಮ ಸ್ಥಾನ

August 5, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d