• About us
  • Contact us
  • Disclaimer
Sunday, January 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಜಪೆ:16 ಕ್ಯಾಮೆರಾ, 8 ನಾಯಿಗಳಿದ್ದರೂ ಮನೆಯ ಲಾಕರಿನಲ್ಲಿಟ್ಟಿದ್ದ ಕೋಟಿ ಮೌಲ್ಯದ ಕೇಜಿಯಷ್ಟು ಚಿನ್ನಾಭರಣ ದೋಚಿದ ಖದೀಮರು!

Coastal Times by Coastal Times
April 2, 2025
in ಕ್ರೈಮ್ ನ್ಯೂಸ್
ಬಜಪೆ:16 ಕ್ಯಾಮೆರಾ, 8 ನಾಯಿಗಳಿದ್ದರೂ ಮನೆಯ ಲಾಕರಿನಲ್ಲಿಟ್ಟಿದ್ದ ಕೋಟಿ ಮೌಲ್ಯದ ಕೇಜಿಯಷ್ಟು ಚಿನ್ನಾಭರಣ ದೋಚಿದ ಖದೀಮರು!
340
VIEWS
WhatsappTelegramShare on FacebookShare on Twitter

ಮಂಗಳೂರು: ಮನೆಯ ಲಾಕರಿನಲ್ಲಿಟ್ಟಿದ್ದ ಅಂದಾಜು ಒಂದು ಕೋಟಿ ಮೌಲ್ಯದ ಒಂದು‌ ಕೇಜಿ‌ಯಷ್ಟು ಚಿನ್ನಾಭರಣ ಕಳವಾದ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಜಪೆ‌ ಸಮೀಪದ ಪೆರ್ಮುದೆ ನಿವಾಸಿ, ಕುವೈಟ್‌ ಉದ್ಯೋಗಿ ಜೋಸೆಫ್ ಪಿಂಟೋ ಎಂಬವರ ಮನೆಯಲ್ಲಿ ಕಳ್ಳತನ ಆಗಿದ್ದು ಮನೆ ನೋಡಿಕೊಳ್ಳುತ್ತಿದ್ದ ಕೇರಳ ಮೂಲದ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೋಸೆಫ್ ಪಿಂಟೋ ಅವರ ಕುಟುಂಬ ಕುವೈಟ್‌ ನಲ್ಲಿ ನೆಲೆಸಿದ್ದು ವರ್ಷಕ್ಕೊಮ್ಮೆ ಪೆರ್ಮುದೆಯ ಮನೆಗೆ ಬರುತ್ತಿದ್ದರು. ಮನೆಯ ಲಾಕರಿನಲ್ಲಿದ್ದ ಒಂದು ಕೆ.ಜಿ ಬಂಗಾರ ಕಳವಾಗಿರೋದು ಮಂಗಳವಾರ ತಿಳಿದುಬಂದಿದ್ದು ದಂಪತಿ ಪೊಲೀಸ್ ದೂರು ನೀಡಿದ್ದಾರೆ.

ಜಾನ್ವಿನ್ ಪಿಂಟೋ ಹಾಗೂ ಅವರ ಪುತ್ರ ಪ್ರವೀಣ್ ಪಿಂಟೋ ಕುವೈಟ್‌ ನಲ್ಲಿ ನೆಲೆಸಿದ್ದಾರೆ. ಅವರ ಪೆರ್ಮುದೆಯ ಮನೆಯಲ್ಲಿ ಸದ್ಯ ಯಾರೂ ವಾಸವಿರಲಿಲ್ಲ. ಮನೆಯ ರಕ್ಷಣೆಗಾಗಿ 16 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಮತ್ತು ಮುಧೋಳ, ಜರ್ಮನ್ ಶೆಫರ್ಡ್ ತಳಿಗಳು ಸೇರಿದಂತೆ ಒಟ್ಟು 8 ಕಾವಲು ನಾಯಿಗಳನ್ನು ಸಾಕಲಾಗಿತ್ತು. ಇಷ್ಟೆಲ್ಲಾ ಬಿಗಿ ಭದ್ರತೆ ಇದ್ದರೂ, ಕಳ್ಳರು ಅತ್ಯಂತ ಚಾಣಾಕ್ಷತನದಿಂದ ಕೃತ್ಯ ಎಸಗಿದ್ದಾರೆ.

ಲಾಕರ್ ಕೀ ಬಳಸಿ ಕಳ್ಳತನ – ಒಳಗಿನವರ ಕೈವಾಡದ ಶಂಕೆ? : ಅತ್ಯಂತ ಆತಂಕಕಾರಿ ಮತ್ತು ಅನುಮಾನಾಸ್ಪದ ವಿಷಯವೆಂದರೆ, ಕಳ್ಳರು ಚಿನ್ನಾಭರಣಗಳಿದ್ದ ಲಾಕರ್ ಅನ್ನು ಬಲವಂತವಾಗಿ ಮುರಿದಿಲ್ಲ. ಬದಲಾಗಿ, ಲಾಕರ್ನ ಕೀಲಿಯನ್ನೇ ಬಳಸಿ ಅದನ್ನು ತೆರೆದು, ಒಳಗಿದ್ದ ಚಿನ್ನಾಭರಣ ಮತ್ತು ವಾಚ್ಗಳನ್ನು ದೋಚಿದ್ದಾರೆ. ಲಾಕರ್ನ ಕೀಲಿ ಕಳ್ಳರ ಕೈಗೆ ಸಿಕ್ಕಿದ್ದು ಹೇಗೆ ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಇದು ಮನೆಯ ಆಪ್ತರು ಅಥವಾ ಕೆಲಸದವರೇ ನಡೆಸಿದ ಕೃತ್ಯವಾಗಿರಬಹುದೇ ಎಂಬ ಸಂಶಯವನ್ನು ಬಲಪಡಿಸಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಳ್ಳರು ಸಿಸಿಟಿವಿ ಕ್ಯಾಮೆರಾಗಳ ಕಣ್ಣಿಗೆ ಬೀಳದ ಜಾಗದಿಂದ ಬಂದಿದ್ದಾರೆ. ಕೆಲವು ಕ್ಯಾಮೆರಾಗಳ ದಿಕ್ಕನ್ನು ಬದಲಿಸಿ, ನಂತರ ಮನೆಯ ಕಿಟಕಿಯೊಂದರ ಕಬ್ಬಿಣದ ಸರಳುಗಳನ್ನು ಮುರಿದು ಒಳ ಪ್ರವೇಶಿಸಿದ್ದಾರೆ. ಆಶ್ಚರ್ಯಕರವಾಗಿ, 8 ಕಾವಲು ನಾಯಿಗಳಿದ್ದರೂ ಅವುಗಳ ಗಮನಕ್ಕೆ ಬಾರದಂತೆ ಅಥವಾ ಅವುಗಳನ್ನು ನಿಷ್ಕ್ರಿಯಗೊಳಿಸಿ ಕಳ್ಳರು ತಮ್ಮ ಕೆಲಸ ಮುಗಿಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಪ್ರಿ ಸ್ಕೂಲ್​ಗೆ ಬರುತ್ತಿದ್ದ ಮಕ್ಕಳ ತಂದೆಗೆ ಮುತ್ತು ಕೊಟ್ಟು ಹನಿಟ್ರ್ಯಾಪ್: ಟೀಚರ್ ಸಹಿತ ಮೂವರ ಬಂಧನ

Next Post

ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ಮಂಗಳೂರಿನಲ್ಲಿ ಎಸ್‌ಡಿಪಿಐ ಪ್ರತಿಭಟನೆ

Related Posts

ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳ ನಡುವೆ ಜೈಲಿನಲ್ಲಿ ಮೊಳಕೆಯೊಡೆದ ಪ್ರೇಮ: ಮದುವೆಗಾಗಿ ಸಿಕ್ಕಿತು 15 ದಿನಗಳ ಪೆರೋಲ್
ಕ್ರೈಮ್ ನ್ಯೂಸ್

ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳ ನಡುವೆ ಜೈಲಿನಲ್ಲಿ ಮೊಳಕೆಯೊಡೆದ ಪ್ರೇಮ: ಮದುವೆಗಾಗಿ ಸಿಕ್ಕಿತು 15 ದಿನಗಳ ಪೆರೋಲ್

January 24, 2026
92
ಬೆಳ್ತಂಗಡಿ: ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದ ಎಂಟು ಜನರ ಬಂಧನ
ಕ್ರೈಮ್ ನ್ಯೂಸ್

ಬೆಳ್ತಂಗಡಿ: ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದ ಎಂಟು ಜನರ ಬಂಧನ

January 23, 2026
108
Next Post
ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ಮಂಗಳೂರಿನಲ್ಲಿ ಎಸ್‌ಡಿಪಿಐ ಪ್ರತಿಭಟನೆ

ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ಮಂಗಳೂರಿನಲ್ಲಿ ಎಸ್‌ಡಿಪಿಐ ಪ್ರತಿಭಟನೆ

Discussion about this post

Recent News

ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳ ನಡುವೆ ಜೈಲಿನಲ್ಲಿ ಮೊಳಕೆಯೊಡೆದ ಪ್ರೇಮ: ಮದುವೆಗಾಗಿ ಸಿಕ್ಕಿತು 15 ದಿನಗಳ ಪೆರೋಲ್

ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳ ನಡುವೆ ಜೈಲಿನಲ್ಲಿ ಮೊಳಕೆಯೊಡೆದ ಪ್ರೇಮ: ಮದುವೆಗಾಗಿ ಸಿಕ್ಕಿತು 15 ದಿನಗಳ ಪೆರೋಲ್

January 24, 2026
92
ಬೆಳ್ತಂಗಡಿ: ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದ ಎಂಟು ಜನರ ಬಂಧನ

ಬೆಳ್ತಂಗಡಿ: ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದ ಎಂಟು ಜನರ ಬಂಧನ

January 23, 2026
108
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳ ನಡುವೆ ಜೈಲಿನಲ್ಲಿ ಮೊಳಕೆಯೊಡೆದ ಪ್ರೇಮ: ಮದುವೆಗಾಗಿ ಸಿಕ್ಕಿತು 15 ದಿನಗಳ ಪೆರೋಲ್

ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳ ನಡುವೆ ಜೈಲಿನಲ್ಲಿ ಮೊಳಕೆಯೊಡೆದ ಪ್ರೇಮ: ಮದುವೆಗಾಗಿ ಸಿಕ್ಕಿತು 15 ದಿನಗಳ ಪೆರೋಲ್

January 24, 2026
ಬೆಳ್ತಂಗಡಿ: ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದ ಎಂಟು ಜನರ ಬಂಧನ

ಬೆಳ್ತಂಗಡಿ: ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದ ಎಂಟು ಜನರ ಬಂಧನ

January 23, 2026
ಮಂಗಳೂರು ಡಬಲ್​ ಮರ್ಡರ್​ ಕೇಸ್​ನಲ್ಲಿ ಭಾಗಿಯಾಗಿದ್ದ ದಂಡುಪಾಳ್ಯ ಗ್ಯಾಂಗ್​ನ ಕೊಲೆ ಆರೋಪಿ 29 ವರ್ಷಗಳ ಬಳಿಕ ಬಂಧನ

ಮಂಗಳೂರು ಡಬಲ್​ ಮರ್ಡರ್​ ಕೇಸ್​ನಲ್ಲಿ ಭಾಗಿಯಾಗಿದ್ದ ದಂಡುಪಾಳ್ಯ ಗ್ಯಾಂಗ್​ನ ಕೊಲೆ ಆರೋಪಿ 29 ವರ್ಷಗಳ ಬಳಿಕ ಬಂಧನ

January 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d