• About us
  • Contact us
  • Disclaimer
Monday, March 9, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಫುಟ್ಬಾಲ್ ಪಂದ್ಯ ಸೋತ ಸಿಟ್ಟಿನಲ್ಲಿ ಕೋಚ್​ ಮೇಲೆ ಉಗುಳಿದ ಪ್ಲೇಯರ್​​; 6 ಪಂದ್ಯಗಳಿಗೆ ನಿಷೇಧ

Coastal Times by Coastal Times
September 7, 2025
in ಕ್ರೀಡಾ ಸುದ್ದಿ
ಫುಟ್ಬಾಲ್ ಪಂದ್ಯ ಸೋತ ಸಿಟ್ಟಿನಲ್ಲಿ ಕೋಚ್​ ಮೇಲೆ ಉಗುಳಿದ ಪ್ಲೇಯರ್​​; 6 ಪಂದ್ಯಗಳಿಗೆ ನಿಷೇಧ
24
VIEWS
WhatsappTelegramShare on FacebookShare on Twitter

ಫುಟ್ಬಾಲ್ ಲೀಗ್ ಪಂದ್ಯಗಳಲ್ಲಿ, ಆಟಗಾರರು ಮೈದಾನದಲ್ಲಿ ಜಗಳ ಆಡುವುದು ಸರ್ವೆ ಸಾಮಾನ್ಯ. ಆದರೆ ಇತ್ತೀಚೆಗೆ ನಡೆದ ಅಮೆರಿಕನ್ ಲೀಗ್ಸ್ ಕಪ್ ಫೈನಲ್‌ನಲ್ಲಿ ಉರುಗ್ವೆಯ ತಂಡದ ಫುಟ್ಬಾಲ್ ಆಟಗಾರ ಲೂಯಿಸ್ ಸುವಾರೆಜ್ ಎದುರಾಳಿ ತಂಡದ ಸಹಾಯಕ ತರಬೇತುದಾರರ ಮೇಲೆ ಉಗುಳಿರುವ ಘಟನೆ ನಡೆದಿದ್ದ ಇದರ ವಿಡಿಯೋಗಳು ವೈರಲ್​ ಆಗಿವೆ. ಲೂಯಿಸ್ ಸುವಾರೆಜ್ ಅವರ ಈ ಕೃತ್ಯದಿಂದಾಗಿ ಅವರನ್ನು ನಿಷೇಧಿಸಲಾಗಿದೆ. ಫುಟ್ಬಾಲ್​ನಲ್ಲಿ ಹೀಗೆ ಸಂಭವಿಸಿದ್ದು ಇದೇ ಮೊದಲ ಬಾರಿ ಅಲ್ಲ. ಇದಕ್ಕೂ ಮುನ್ನ ಕ್ಲಬ್ ಫುಟ್‌ಬಾಲ್‌ನಲ್ಲಿ ಆಟಗಾರನೊಬ್ಬ ಎದುರಾಳಿ ತಂಡದ ಪ್ಲೇಯರ್​ಗೆ ಕಚ್ಚಿ ಜನಾಂಗೀಯ ನಿಂದನೆ ಮಾಡಿದ್ದ ಘಟನೆಗಳು ನಡೆದಿವೆ.

ಸೆ.1 ರಂದು ಲೀಗ್ಸ್ ಕಪ್ ಫೈನಲ್ ಪಂದ್ಯದಲ್ಲಿ ಇಂಟರ್ ಮಿಯಾಮಿ ಮತ್ತು ಸಿಯಾಟಲ್ ಸೌಂಡರ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಸಿಯಾಟಲ್ ತಂಡ ಇಂಟರ್ ಮಿಯಾಮಿಯನ್ನು 3-0 ಗೋಲುಗಳಿಂದ ಸೋಲಿಸಿತು. ಪಂದ್ಯದ ನಂತರ ಎರಡೂ ತಂಡಗಳು ಆಟಗಾರರ ನಡುವೆ ಮೈದಾನದಲ್ಲಿಯೇ ಪರಸ್ಪರ ಘರ್ಷಣೆ ಉಂಟಾಯ್ತು. ಈ ವೇಳೆ, ಮಿಯಾಮಿ ತಂಡದ ​ಸೆರ್ಗಿಯೊ ಬಸ್ಕ್ವೆಟ್ಸ್ ಎದುರಾಳಿ ಆಟಗಾರನ ಮೇಲೆ ದೈಹಿಕವಾಗಿ ದಾಳಿ ಮಾಡಿದರು. ಇದರಿಂದಾಗಿ ಎರಡೂ ತಂಡದ ಆಟಗಾರರ ಕೈ ಕೈ ಮಿಲಾಯಿಸಿ ಜಗಳಕ್ಕಿಳಿದ್ದರು. ಇದೇ ವೇಳೆ ಲೂಯಿಸ್ ಸುವಾರೆಜ್ ಸಿಯಾಟಲ್ ಸೌಂಡರ್ಸ್ ತಂಡದ ತರಬೇತುದಾರರನ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ಕೋಪದಲ್ಲಿ ಅವರ ಮೇಲೆ ಉಗುಳಿದ್ದಾರೆ.

Luis Suarez spits at a Seattle Sounders staff member
byu/Delmer9713 insoccer

ಪರಿಸ್ಥಿತಿ ಉದ್ವಿಘ್ನತೆಗೆ ತಲುಪುತ್ತಿದ್ದಂತೆ ಕೋಚ್​ಗಳು ಮೈದಾನಕ್ಕೆ ಆಗಮಿಸಿ ಜಗಳವನ್ನು ತಡೆದರು. ಈ ಘಟನೆ ಬಳಿಕ ಸೆರ್ಗಿಯೊ ಬಸ್ಕ್ವೆಟ್ಸ್ ಅವರನ್ನು ಎರಡು ಪಂದ್ಯಗಳಿಗೆ ನಿಷೇಧಿಸಲಾಯಿತು. ಮತ್ತು ಮಿಯಾಮಿ ಡಿಫೆಂಡರ್ ಥಾಮಸ್ ಅವಿಲ್ಸ್ ಅವರ ವರ್ತನೆಗಾಗಿ ಮೂರು ಪಂದ್ಯಗಳಿಗೆ ನಿಷೇಧಿಸಲಾಯಿತು. ಜೊತೆಗೆ ಕೋಚ್​ ಮೇಲೆ ಉಗಳಿದಕ್ಕಾಗಿ ಲೂಯಿಸ್​ ಸುವಾರೆಜ್​ ಅವರನ್ನು 6 ಪಂದ್ಯಗಳಿಗೆ ನಿಷೇಧಿಸಲಾಗಿದೆ. ಇದಲ್ಲದೆ, ಸೌಂಡರ್ಸ್ ತಂಡದ ಸಹಾಯಕ ಕೋಚ್ ಸ್ಟೀವನ್ ಲೆನ್ಹಾರ್ಟ್ ಅವರು ಮೈದಾನದಲ್ಲಿ ಅಸಭ್ಯ ವರ್ತನೆ ತೋರಿದಕ್ಕಾಗಿ ಐದು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ.

ಕ್ಷಮೆಯಾಚಿಸಿದ ಲೂಯಿಸ್ ಸುವಾರೆಜ್: ಘಟನೆ ಬಳಿಕ ಲೂಯಿಸ್ ಸುವಾರೆಜ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ, ‘ನಾನು ತಪ್ಪು ಮಾಡಿದೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ, ನನಗೆ ಈ ಘಟನೆಯಿಂದ ಬೇಸರವಾಗುತ್ತಿದೆ, ಮತ್ತು ನನ್ನ ವರ್ತನೆಗೆ ಎಲ್ಲರಿಗೂ ಕ್ಷಮೆಯಾಚಿಸಲು ಬಯಸುತ್ತೇನೆ. ಇನ್ನೂ ಸಾಕಷ್ಟು ಋತುಗಳು ಉಳಿದಿವೆ. ಅಭಿಮಾನಿಗಳಿಗೆ ಅರ್ಹವಾದ ವಿಜಯವನ್ನು ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಸುವಾರೆಜ್ ದಾಖಲೆ: ಈ ಋತುವಿನಲ್ಲಿ ಸುವಾರೆಜ್ 22 ಲೀಗ್ ಪಂದ್ಯಗಳಲ್ಲಿ ಆರು ಗೋಲುಗಳನ್ನು ಗಳಿಸಿದ್ದಾರೆ ಮತ್ತು 10 ಅಸಿಸ್ಟ್‌ಗಳನ್ನು ನೀಡಿದ್ದಾರೆ. ಇದಲ್ಲದೆ, ಅವರು ಆರು ಲೀಗ್ ಕಪ್ ಪಂದ್ಯಗಳಲ್ಲಿ ಮೂರು ಗೋಲುಗಳು ಮತ್ತು ಮೂರು ಅಸಿಸ್ಟ್‌ಗಳನ್ನು ನೀಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಪಡುಬಿದ್ರೆ: ಅಕ್ರಮ ಗೋ ಸಾಗಾಟದ ವೇಳೆ ಪೊಲೀಸರ ಮೇಲೆ ಕಾರು ಹತ್ತಿಸಿ ಹತ್ಯೆಗೆ ಯತ್ನಿಸಿದ ಇಬ್ಬರ ಬಂಧನ

Next Post

ಧರ್ಮಸ್ಥಳ ಬುರುಡೆ ಪ್ರಕರಣ: ದೂರು ಕೊಡುವ ಮೊದಲು ಕೇರಳ ಸಂಸದನ ಭೇಟಿಯಾಗಿದ್ದ ಚಿನ್ನಯ್ಯ ತಂಡ!

Related Posts

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!
ಕ್ರೀಡಾ ಸುದ್ದಿ

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
21
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ
ಕ್ರೀಡಾ ಸುದ್ದಿ

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ

March 6, 2026
16
Next Post
ಧರ್ಮಸ್ಥಳ ಬುರುಡೆ ಪ್ರಕರಣ: ದೂರು ಕೊಡುವ ಮೊದಲು ಕೇರಳ ಸಂಸದನ ಭೇಟಿಯಾಗಿದ್ದ ಚಿನ್ನಯ್ಯ ತಂಡ!

ಧರ್ಮಸ್ಥಳ ಬುರುಡೆ ಪ್ರಕರಣ: ದೂರು ಕೊಡುವ ಮೊದಲು ಕೇರಳ ಸಂಸದನ ಭೇಟಿಯಾಗಿದ್ದ ಚಿನ್ನಯ್ಯ ತಂಡ!

Discussion about this post

Recent News

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
21
ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

March 8, 2026
9
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

March 8, 2026
2028ಕ್ಕೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ; ಬಂಟ್ವಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

2028ಕ್ಕೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ; ಬಂಟ್ವಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

March 8, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d