ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಸರ್ಕಾರ, ಅಳೆದು ತೂಗಿ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರುಗಳನ್ನು ಶುಕ್ರವಾರ ನೇಮಕ ಮಾಡಿದೆ. ಈ ಸಂಬಂಧ ಸರ್ಕಾರ ಪ್ರಕಟಣೆ ಹೊರಡಿಸಲಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ತುಮಕೂರು ಜಿಲ್ಲೆಯ ಹೊಣೆ ನೀಡಲಾಗಿದೆ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
01. ಡಿ.ಕೆ.ಶಿವಕುಮಾರ್ – ಬೆಂಗಳೂರು ನಗರ
02. ಜಿ.ಪರಮೇಶ್ವರ್ – ತುಮಕೂರು
03. ಎಚ್.ಕೆ.ಪಾಟೀಲ – ಗದಗ
04. ಕೆ.ಎಚ್.ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
05. ರಾಮಲಿಂಗಾ ರೆಡ್ಡಿ – ರಾಮನಗರ
06. ಕೆ.ಜೆ.ಜಾರ್ಜ್ – ಚಿಕ್ಕಮಗಳೂರು
07. ಎಂ.ಬಿ.ಪಾಟೀಲ – ವಿಜಯಪುರ
08. ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ
09. ಎಚ್.ಸಿ. ಮಹಾದೇವಪ್ಪ – ಮೈಸೂರು
10. ಸತೀಶ್ ಜಾರಕಿಹೊಳಿ – ಬೆಳಗಾವಿ
11. ಪ್ರಿಯಾಂಕ್ ಖರ್ಗೆ – ಕಲಬುರಗಿ
12. ಶಿವಾನಂದ ಪಾಟೀಲ – ಹಾವೇರಿ
13. ಬಿ.ಝಡ್. ಜಮೀರ್ ಅಹಮದ್ ಖಾನ್ – ವಿಜಯನಗರ
14. ಶರಣ ಬಸಪ್ಪ ದರ್ಶನಾಪುರ – ಯಾದಗಿರಿ
15. ಈಶ್ವರ್ ಖಂಡ್ರೆ – ಬೀದರ್
16. ಚಲುವರಾಯಸ್ವಾಮಿ – ಮಂಡ್ಯ
17. ಎಸ್.ಎಸ್.ಮಲ್ಲಿಕಾರ್ಜುನ – ದಾವಣಗೆರೆ
18. ಸಂತೋಷ್ ಲಾಡ್ – ಧಾರವಾಡ
19. ಶರಣ ಪ್ರಕಾಶ್ ಪಾಟೀಲ – ರಾಯಚೂರು
20. ಆರ್.ಬಿ.ತಿಮ್ಮಾಪೂರ – ಬಾಗಲಕೋಟೆ
21. ಕೆ.ವೆಂಕಟೇಶ್ – ಚಾಮರಾಜನಗರ
22. ತಂಗಡಗಿ ಶಿವರಾಜ್ ಸಂಗಪ್ಪ – ಕೊಪ್ಪಳ
23. ಡಿ.ಸುಧಾಕರ್ – ಚಿತ್ರದುರ್ಗ
24. ಬಿ.ನಾಗೇಂದ್ರ – ಬಳ್ಳಾರಿ
25. ಕೆ.ಎನ್.ರಾಜಣ್ಣ – ಹಾಸನ
26. ಬಿ.ಎಸ್.ಸುರೇಶ್ – ಕೋಲಾರ
27. ಲಕ್ಷ್ಮೀ ಹೆಬ್ಬಾಳಕರ್ – ಉಡುಪಿ
28. ಮಂಕಾಳ್ ವೈದ್ಯ – ಉತ್ತರ ಕನ್ನಡ
29. ಮಧು ಬಂಗಾರಪ್ಪ – ಶಿವಮೊಗ್ಗ
30. ಎಂ.ಸಿ.ಸುಧಾಕರ್ – ಚಿಕ್ಕಬಳ್ಳಾಪುರ
31. ಎಚ್.ಸಿ.ಭೋಸರಾಜು – ಕೊಡಗು