• About us
  • Contact us
  • Disclaimer
Tuesday, June 3, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಡೆಗೂ ಆಕೆ ಕೇರಳದ ಮುಸ್ಲಿಂ ಯುವಕನನ್ನು ಮದುವೆ ಆಗಿಬಿಟ್ಟಳು: ಕ್ಷಮಿಸಿ ಎಂದ ಹಿಂದೂ ಮುಖಂಡ

Coastal Times by Coastal Times
August 11, 2024
in ಕರಾವಳಿ
ಕಡೆಗೂ ಆಕೆ ಕೇರಳದ ಮುಸ್ಲಿಂ ಯುವಕನನ್ನು ಮದುವೆ ಆಗಿಬಿಟ್ಟಳು: ಕ್ಷಮಿಸಿ ಎಂದ ಹಿಂದೂ ಮುಖಂಡ
97
VIEWS
WhatsappTelegramShare on FacebookShare on Twitter

ಮಂಗಳೂರು, ಆಗಸ್ಟ್​​ 10: ಮುಸ್ಲಿಂ ಯುವಕನೊಂದಿಗೆ ನಾಪತ್ತೆಯಾಗಿದ್ದ ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ ಪ್ರಕರಣ ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ಕೇರಳದ ಮೊಹಮ್ಮದ್ ಅಶ್ಫಾಕ್‌ ವಿಸ್ಮಯಳನ್ನು ಮದುವೆಯಾಗಿದ್ದಾನೆ. ಈ ಕುರಿತು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್ ಫೇಸ್​​ಬುಕ್​ ಪೋಸ್ಟ್ ಹಾಕಿದ್ದು, ವಿಸ್ಮಯ ತಂದೆಯ ಬಳಿ ಕ್ಷಮೆಯಾಚಿಸಿದ್ದಾರೆ. ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ, ಕ್ರಿಮಿನಲ್​ ಹಿನ್ನೆಲೆ ಉಳ್ಳ ಮೊಹಮ್ಮದ್ ಅಶ್ಫಾಕ್​​​ನ ಪ್ರೀತಿ ಬಲೆಗೆ ಬಿದ್ದಿದ್ದಳು. ಮೊಹಮ್ಮದ್ ಅಶ್ಫಾಕ್​​ನಿಗೆ ಈಗಾಗಲೇ ಒಂದು ಮದುವೆಯಾಗಿದೆ. ಅಲ್ಲದೆ ಮೊಹಮ್ಮದ್ ಅಶ್ಫಾಕ್​ನ ವಿರುದ್ಧ ಕಾಸರಗೋಡಿನ ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಕಾಸರಗೋಡಿನಲ್ಲೇ ವಿಸ್ಮಯ ಮತ್ತು ಆಶ್ಫಕ್​ನ ನಡುವೆ ಲವ್ವಿ ಡವ್ವಿ ನಡೆದಿತ್ತು.

ವಿಸ್ಮಯ ತಂದೆ ವಿನೋದ್​ ಅವರು ವಿಸ್ಮಯಳನ್ನು ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇರಿಸಿ ಬಿಸಿಎ ಶಿಕ್ಷಣ ಕೊಡಿಸುತ್ತಿದ್ದರು. ಇಲ್ಲಿಯೂ ಆಕೆಯನ್ನು ಬಿಡದ ಆಶ್ಫಕ್​​ ಕಳೆದ ಜೂನ್​ 6 ರಂದು ಉಳ್ಳಾಲದಿಂದ ವಿಸ್ಮಯ ಕರೆದುಕೊಂಡು ಹೋಗಿದ್ದನು. ವಿದ್ಯಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ವಿಸ್ಮಯಳನ್ನ ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂ‌ನ್ 30ರಂದು ಆಶ್ಫಕ್​​ ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದನು.

ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿಸಿಎ ಕಲಿಯುತ್ತಿದ್ದ ಕಾಸರಗೋಡು ಮೂಲದ ಮಲಯಾಳಿ ಬಿಲ್ಲವ ಸಮುದಾಯದ ವಿದ್ಯಾರ್ಥಿನಿ ವಿಸ್ಮಯಾಳನ್ನು ಕಳೆದ ಜೂನ್ 30ರಂದು ಮೊಹಮ್ಮದ್ ಅಶ್ಫಾಕ್ ಎಂಬಾತ ಅಪಹರಿಸಿದ್ದ ಎಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾಸರಗೋಡು ವಿದ್ಯಾನಗರ ನಿವಾಸಿ ವಿಸ್ಮಯಾ ತಂದೆ ವಿನೋದ್ ಅವರೇ ತನ್ನ ಮಗಳನ್ನು ಅಪಹರಿಸಿದ್ದಾನೆಂದು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮೊಹಮ್ಮದ್ ಅಶ್ಫಾಕ್ ಜೊತೆಗೆ ಕಾಸರಗೋಡಿನಲ್ಲೇ ಇದ್ದ ವಿಸ್ಮಯಾಳನ್ನು ಮಂಗಳೂರಿಗೆ ಕರೆತಂದು ಕೌನ್ಸಿಲಿಂಗ್ ಸೆಂಟರಿನಲ್ಲಿ ಇರಿಸಿದ್ದರು.

ಒಂದು ತಿಂಗಳ ಕೌನ್ಸೆಲಿಂಗ್ ಬಳಿಕ ಸ್ವಲ್ಪ ಮಟ್ಟಿಗೆ ಮನಸ್ಸು ಬದಲಿಸಿದ ರೀತಿಯಿದ್ದ ವಿಸ್ಮಯಾಳನ್ನು ಮನೆಯವರೇ ಕರೆದೊಯ್ದಿದ್ದು, ಸಂಬಂಧಿಕರ ಮನೆಯಲ್ಲಿ ಇರಿಸಿಕೊಂಡಿದ್ದರು. ಆದರೆ, ಇದರ ನಡುವೆಯೇ ಮೊಹಮ್ಮದ್ ಅಶ್ಫಾಕ್ ಕೇರಳ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದಾನೆಂದು ಹೇಳಲಾಗುತ್ತಿದ್ದು, ತನ್ನ ಪತ್ನಿಯನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ಅರ್ಜಿ ಹಾಕಿದ್ದ. ಕೋರ್ಟ್ ಆದೇಶ ಪ್ರಕಾರ, ವಿದ್ಯಾನಗರ ಪೊಲೀಸರು ವಿಸ್ಮಯಾಳನ್ನು ಪತ್ತೆಹಚ್ಚಿ ಹೈಕೋರ್ಟಿಗೆ ಹಾಜರುಪಡಿಸಿದ್ದರು. ಹೈಕೋರ್ಟಿನಲ್ಲಿ ವಿಸ್ಮಯಾ, ತನ್ನ ಪ್ರಿಯಕರ ಮೊಹಮ್ಮದ್ ಅಶ್ಫಾಕ್ ನನ್ನು ನೋಡುತ್ತಿದ್ದಂತೆ ಆತನನ್ನೇ ಮದುವೆಯಾಗುತ್ತೇನೆ, ಹೆತ್ತವರ ಜೊತೆಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.

ಕ್ಷಮೆ ಕೇಳಿದ ಶರಣ್ ಪಂಪವೆಲ್: ‘ಕ್ಷಮಿಸಿ ವಿನೋದ್ ರವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’. ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಳನ್ನು ನಟೋರಿಯಸ್ ಕ್ರಿಮಿನಲ್ ಮೊಹಮ್ಮದ್ ಆಶ್ಫಕ್​​ ಮದುವೆಯಾಗಿದ್ದಾನೆ ಎಂದು ಫೇಸ್​ಬುಕ್​ನಲ್ಲಿ ಫೋಸ್ಟ್​ ಹಾಕಿದ್ದಾರೆ.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಯೆನೆಪೊಯ ಇನ್‌ಸ್ಟಿಟ್ಯೂಟ್‌ನಲ್ಲಿ ಸೈಬರ್ ಕ್ರೈಮ್ ಮತ್ತು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಜಾಗೃತಿ ಅಧಿವೇಶನ

Next Post

ಮಂಗಳೂರು: ಐಟಿಐ ತೇರ್ಗಡೆಯಾದವರಿಗೆ ದುಬೈ ಶಿಪ್ ಯಾರ್ಡ್​ನಲ್ಲಿ ತರಬೇತಿ: ಅರ್ಜಿ ಆಹ್ವಾನ

Related Posts

ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿಯ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮ್ ಯುವಕರ ಗಡಿಪಾರು
ಕರಾವಳಿ

ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿಯ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮ್ ಯುವಕರ ಗಡಿಪಾರು

June 2, 2025
51
ಬಂಟ್ವಾಳ: 2.1 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ (ಎಡಭಾಗವನ್ನು) ಸಂಚಾರಕ್ಕೆ ಮುಕ್ತ
ಕರಾವಳಿ

ಬಂಟ್ವಾಳ: 2.1 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ (ಎಡಭಾಗವನ್ನು) ಸಂಚಾರಕ್ಕೆ ಮುಕ್ತ

June 2, 2025
48
Next Post
ಮಂಗಳೂರು: ಐಟಿಐ ತೇರ್ಗಡೆಯಾದವರಿಗೆ ದುಬೈ ಶಿಪ್ ಯಾರ್ಡ್​ನಲ್ಲಿ ತರಬೇತಿ: ಅರ್ಜಿ ಆಹ್ವಾನ

ಮಂಗಳೂರು: ಐಟಿಐ ತೇರ್ಗಡೆಯಾದವರಿಗೆ ದುಬೈ ಶಿಪ್ ಯಾರ್ಡ್​ನಲ್ಲಿ ತರಬೇತಿ: ಅರ್ಜಿ ಆಹ್ವಾನ

Discussion about this post

Recent News

ಉಳ್ಳಾಲ: ಕೇರಳದಿಂದ ಕರ್ನಾಟಕಕ್ಕೆ ಕಂಟೇನರ್ ವಾಹನದಲ್ಲಿ ಹಿಂಸಾತ್ಮಕ ಸಾಗಿಸುತ್ತಿದ್ದ 24 ಜಾನುವಾರುಗಳ ರಕ್ಷಣೆ

ಉಳ್ಳಾಲ: ಕೇರಳದಿಂದ ಕರ್ನಾಟಕಕ್ಕೆ ಕಂಟೇನರ್ ವಾಹನದಲ್ಲಿ ಹಿಂಸಾತ್ಮಕ ಸಾಗಿಸುತ್ತಿದ್ದ 24 ಜಾನುವಾರುಗಳ ರಕ್ಷಣೆ

June 3, 2025
19
ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿಯ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮ್ ಯುವಕರ ಗಡಿಪಾರು

ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿಯ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮ್ ಯುವಕರ ಗಡಿಪಾರು

June 2, 2025
51
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಉಳ್ಳಾಲ: ಕೇರಳದಿಂದ ಕರ್ನಾಟಕಕ್ಕೆ ಕಂಟೇನರ್ ವಾಹನದಲ್ಲಿ ಹಿಂಸಾತ್ಮಕ ಸಾಗಿಸುತ್ತಿದ್ದ 24 ಜಾನುವಾರುಗಳ ರಕ್ಷಣೆ

ಉಳ್ಳಾಲ: ಕೇರಳದಿಂದ ಕರ್ನಾಟಕಕ್ಕೆ ಕಂಟೇನರ್ ವಾಹನದಲ್ಲಿ ಹಿಂಸಾತ್ಮಕ ಸಾಗಿಸುತ್ತಿದ್ದ 24 ಜಾನುವಾರುಗಳ ರಕ್ಷಣೆ

June 3, 2025
ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿಯ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮ್ ಯುವಕರ ಗಡಿಪಾರು

ದ.ಕ.ಜಿಲ್ಲೆ: ಅರುಣ್ ಕುಮಾರ್ ಪುತ್ತಿಲ, ತಿಮರೋಡಿ, ಭರತ್ ಕುಮ್ಡೇಲು ಸೇರಿದಂತೆ 36 ಮಂದಿಯ ಗಡಿಪಾರಿಗೆ ಕಾನೂನು ಪ್ರಕ್ರಿಯೆ 21 ಹಿಂದೂ 15 ಮುಸ್ಲಿಮ್ ಯುವಕರ ಗಡಿಪಾರು

June 2, 2025
ಬಂಟ್ವಾಳ: 2.1 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ (ಎಡಭಾಗವನ್ನು) ಸಂಚಾರಕ್ಕೆ ಮುಕ್ತ

ಬಂಟ್ವಾಳ: 2.1 ಕಿಮೀ ಉದ್ದದ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ (ಎಡಭಾಗವನ್ನು) ಸಂಚಾರಕ್ಕೆ ಮುಕ್ತ

June 2, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d