ಮಂಗಳೂರು: ನಗರದಲ್ಲಿ 10 ದಿನಗಳಿಂದ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹೊರವಲಯದ ಕಣ್ಣೂರು ಪ್ರದೇಶದ ಬಳ್ಳೂರುಗುಡ್ಡೆ ಎಂಬಲ್ಲಿ ಗುಡ್ಡೆ ಕುಸಿತ ಉಂಟಾಗಿದ್ದು ಕೆಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಜೆ.ಆರ್.ಲೋಬೊ ಗುಡ್ಡೆ ಕುಸಿತದಿಂದ ತೊಂದರೆಗೊಳಗಾದ ಸ್ಥಳೀಯರ ಅಹವಾಲು ಆಲಿಸಿ, ಸಾಂತ್ವನ ಹೇಳಿದರು. ಇಲ್ಲಿನ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು. ‘ನಿರಂತರ ಮಳೆ ಮುಂದುವರಿದರೆ ಇಲ್ಲಿನ ಮನೆಗಳು ಕುಸಿದು ಬೀಳುವ ಅಪಾಯವಿದೆ. ಹಾಗಾಗಿ ಹೆಚ್ಚಿನ ಹಾನಿ ಉಂಟಾಗದಂತೆ ತಡೆಯಲು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಲೋಬೊ ಸೂಚಿಸಿದರು. ಪಕ್ಷದ ವಾರ್ಡ್ ಘಟಕದ ಅಧ್ಯಕ್ಷ ರಫಿಕ್ ಕಣ್ಣೂರು, ಪಕ್ಷದ ಮುಖಂಡರಾದ ಹಮೀದ್ ಕಣ್ಣೂರು, ಶರೀಫ್, ಹುಸೈನ್, ಅಬ್ದುಲ್ ಖಾದರ್, ಇಫ್ತಿಕಾಬು ಮತ್ತಿತರರು ಜೊತೆಯಲ್ಲಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post