• About us
  • Contact us
  • Disclaimer
Friday, May 9, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

150 ವರ್ಷದ ಸಂಭ್ರಮಾಚರಣೆಯಲ್ಲಿ ಮಂಗಳೂರಿನ ಕುಲಶೇಖರ ಕೊರ್ಡೆಲ್ ಧರ್ಮಕೇಂದ್ರ

Coastal Times by Coastal Times
September 12, 2023
in ಕರಾವಳಿ
150 ವರ್ಷದ ಸಂಭ್ರಮಾಚರಣೆಯಲ್ಲಿ ಮಂಗಳೂರಿನ ಕುಲಶೇಖರ ಕೊರ್ಡೆಲ್ ಧರ್ಮಕೇಂದ್ರ
57
VIEWS
WhatsappTelegramShare on FacebookShare on Twitter

ಮಂಗಳೂರು,ಸೆ 12 : ನಗರದ ಕುಲಶೇಖರ ಕೊರ್ಡೆಲ್ ಧರ್ಮಕೇಂದ್ರಕ್ಕೆ ಈಗ 150 ವರ್ಷಗಳ ಸಂಭ್ರಮ. ಪವಿತ್ರ ಶಿಲುಬೆಯ ಆಶ್ರಯದಲ್ಲಿ ಈ ಅವಧಿಯಲ್ಲಿ ಜನತೆ ಪಡೆದ ವರಗಳು ಅಪಾರ. ಈ ಸಂಭ್ರಮಾಚರಣೆಯನ್ನು ಸೆಪ್ಟಂಬರ್ 14 ಹಾಗೂ 17 ರಂದು ಕೃತಜ್ಞತಾ ಬಲಿಪೂಜೆಯೊಂದಿಗೆ ನೆರವೇರಿಸಲು ಹೋಲಿ ಕ್ರಾಸ್ ಧರ್ಮಕೇಂದ್ರವು ನಿರ್ಧರಿಸಿದೆ ಎಂದು ಧರ್ಮಕೇಂದ್ರದ ಪ್ರಧಾನ ಧರ್ಮಗುರು ಫಾ.ಕ್ಲಿಫರ್ಡ್ ಫೆರ್ನಾಂಡಿಸ್ ತಿಳಿಸಿದ್ದಾರೆ.

ಧರ್ಮಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 14ರಂದು ಈ ಧರ್ಮಕೇಂದ್ರವು ಚಾರಿತ್ರಿಕ ಘಟನಯ 150 ವರುಷಗಳ ಸಂಭ್ರಮವನ್ನು ಭಕ್ತಿಪೂರ್ವಕವಾಗಿ ಆಚರಿಸಲಿದೆ. ಅದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಯುವಜನರ ದಿನ, ದಂಪತಿಗಳ ದಿನ, ಶಿಕ್ಷಕರ ಹಾಗೂ ಆರೋಗ್ಯ ಕಾರ್ಯಕರ್ತರ ದಿನಗಳನ್ನು ಆಚರಿಸಲಾಗಿದ. ಸ. 14 ರಂದು ಸಂಜೆ 5.30 ಕ್ಕೆ ಮಂಗಳೂರು ಧರ್ಮಕ್ಷೇತ್ರದ ಪ್ರಧಾನ ಗುರು ಮೊ, ಮ್ಯಾಕ್ಸಿಮ್ ಮೊರೊನ್ಮಾ ಅವರು ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸುವರು. ಬಳಿಕ ಧರ್ಮಕೇಂದ್ರದಲ್ಲಿ ಸೇವೆ ನೀಡಿದ ಎಲ್ಲಾ ಮುಖ್ಯ ಸ್ಮರ, ಕಾರ್ಯದರ್ಶಿಗಳ, ವಾರ್ಡ್‌ ಮುಖ್ಯ ಸ್ಮರ ಹಾಗೂ ಬೆನಫ್ಯಾಕ್ಟರ್, ಫೌಂಡರ್ ಗಳ ದಿನವನ್ನು ಆಚರಿಸಲಾಗುವುದು, ಸೆ.17 ರಂದು ಹಬ್ಬದ ಸಂಭ್ರಮ. ಸಂಜೆ 5.30ಕ್ಕೆ ಮಂಗಳೂರಿನ ಧರ್ಮಾಧ್ಯಕ್ಷ ಅ. ವಂ. ಡಾ. ಪೀಟರ್ ಪಾವ್ ಸಲ್ಮಾನಾ ಅವರು ಕೃತಜ್ಞತಾ ಬಲಿಪೂಜೆಯನ್ನು ಆರ್ಪಿಸುವರು. ಅಂದು ಈ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಧರ್ಮಗುರುಗಳ ಹಾಗೂ ಇತರ ಧಾರ್ಮಿಕ ವ್ಯಕ್ತಿಗಳ ದಿನವನ್ನಾಗಿ ಆಚರಿಸಲಾಗುವುದು. ಮುಂದಿನ ದಿನಗಳಲ್ಲಿ ಹಿರಿಯ ನಾಗರಕರ ದಿನ, ವಿಕಲಚೇತನರ ದಿನ, ಕ್ರೀಡಾಕೂಟ, ಫ್ಯಾನ್ಸಿ ಫೆಟ್, ಅನಿವಾಸಿ ಭಾರತೀಯರ ದಿನ, ಸರ್ವ ಧರ್ಮ ಕೂಟ ಇತ್ಯಾದಿ ನಡೆಸಲು ಉದ್ದೇಶಿಸಲಾಗಿದೆ.

ಅಮರ ಫ್ರಾದ್ ಸ್ವಾಮಿ : ವಂ. ಅಲೆಕ್ಸಾಂಡರ್ ದೂಬ್ಬಾ ಫ್ರಾನ್ಸಿನಿಂದ ಮಂಗಳೂರಿಗೆ ಬಂದಿದ್ದು, 1865ರಿಂದ 1877ರ ವರೆಗೆ ಮಿಲಾಗ್ರಿಸ್ ಧರ್ಮಕೇಂದ್ರದಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದರು. ಅಲ್ಲಿಂದ ಅವರು ತಮ್ಮ ವ್ಯಾಪ್ತಿಯೊಳಗೆ ಬರುವ ಕುಲಶೇಖರ, ಬೋಂದೆಲ್, ಕೆಲರಾಯ್, ವಾಮಂಜೂರು, ವಾಲೆನ್ಸಿಯಾ, ನಾಗೋರಿ ಮುಂತಾದ ಪ್ರದೇಶಗಳ ಜನರ ಸೇವೆಗಾಗಿ ಕಾಲ್ನಡಿಗೆಯಲ್ಲೇ ಪಯಣಿಸುತ್ತಿದ್ದರು. ಈಗ ಈ ಎಲ್ಲಾ ಪ್ರದೇಶಗಳು ಸ್ವತಂತ್ರ ಧರ್ಮಕೇಂದ್ರಗಳಾಗಿವೆ. ಹಾಗೆ ಪಯಣಿಸುವಾಗ ಅವರು ಕೇವಲ ಕ್ರೈಸ್ತರ ಸೇವೆ ಮಾತ್ರ ಮಾಡದೆ, ಎಲ್ಲಾ ಜನರ ಒಳಿತಿಗಾಗಿ ಶ್ರಮಿಸಿದರು. ಅನೇಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ತಮ್ಮ ಕೈಲಾದ ಸಹಾಯವನ್ನು ನೀಡಿದ್ದರು. ಕೊಂಕಣಿ ಹಾಗೂ ತುಳು ಭಾಷೆಯನ್ನು ಕಲಿತರು. ತಮ್ಮ ವಿಶ್ವಾಸದ ಪ್ರಾರ್ಥನೆಯ ಮೂಲಕ ಜನರ ರೋಗರುಜಿನಗಳನ್ನು ಗುಣವಡಿಸಿದರು, ಕೃಷಿಯ ಫಸಲು ಹಚ್ಚಾಗುವಂತೆಯೂ ಆಶೀರ್ವದಿಸಿದರು. ಅವರ ಆಳವಾದ ಆಧ್ಯಾತ್ಮಿಕ ಜೀವನವನ್ನು ನೋಡಿದ ಜನರು ಅವರನ್ನು ಒಬ್ಬ ಸಂತನಂತೆ ಕಂಡಿದ್ದರು. ಅವರ ಕರುಣಾಮಯಿ ಹೃದಯ ಎಲ್ಲಾ ಜನರನ್ನು ಅವರಲ್ಲಿ ಸೆಳೆಯಿತು. ಈ ಕಾರಣದಿಂದಲೇ ಅವರು ಕೆಥೋಲಿಕ್ ಕ್ರೈಸ್ತರಿಗೆ ಒಲವಿನ ‘ಫ್ರಾಡ್‌ಸಾಯ’ ಆದರೆ ತುಳುವರಿಗೆ ‘ಕುಲಾರ್ದ ಅ‌ ಆದರು. ಈ ಹೆಸರುಗಳು ಈಗಲೂ ಪ್ರಚಲಿತವಾಗಿವೆ. ಕುಲಶೇಖರ ದೇವಾಲಯದ ಶಂಕು ಸ್ಥಾಪನೆ ಮಾಡಿ ಮುಂದಿನ ನಾಲ್ಕು ವರ್ಷಗಳ ಕಾಲ, ಕಟ್ಟಡ ನಿರ್ಮಾಣದ ಜಾಗೆ, ಸುಂದರ ಹಾಗೂ ವಿಶಾಲವಾದ ಪ್ರದೇಶವನ್ನು ಸಜ್ಜುಗೊಳಿಸಿದರು. ಪಿತ್ರಾರ್ಜಿತ ಆಸ್ತಿಯಿಂದ ಹಾಗೂ ಧರ್ಮಾಧ್ಯಕ್ಷರಿಂದ ದೊರೆತ ಒಟ್ಟು 60,000 ಫಾಕ್ಗಳನ್ನು ಈ ಎಲ್ಲಾ ಕೆಲಸಗಳಿಗೆ ವಿನಿಯೋಗಿಸಿದರು. ಕೆಲಸ ಅರ್ಥದಲ್ಲಿರುವಾಗಲೇ, 1877 ರಲ್ಲಿ ಕೊಲೆರಾ ರೋಗಿಗಳ ಶುಶೂಷೆಯಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಅದೇ ರೂಗಳ ಬಲಿಯಾದರು. 1877 ಡಿಸೆಂಬರ್ 11 ರಂದು ಅವರು ದೇವರ ಪಾದ ಸೇರಿದರು. ಅವರ ಇಚ್ಚೆಯಂತೆ ಮರುದಿನ ಅವರನ್ನು ಕುಲಶೇಖರದಲ್ಲಿ ಅವರೇ ಸಿದ್ರಪಡಿಸಿಟ್ಟಿದ ಸಮಾಧಿಯಲ್ಲಿ ಇರಿಸಲಾಯಿತು. ಅಂತಯೇ ಅಂದಿನಿಂದಲೇ ಈ ಕುಲಶೇಖರದ ಭೂಮಿ ಪಾವನವಾಯಿತು. ತಂಡೋಪತಂಡವಾಗಿ ಅವರ ಸಮಾಧಿಗೆ ಭೇಟಿ ನೀಡಿ ಅನೇಕ ವರಗಳನ್ನು ಪಡೆಯಲಾರಂಭಿಸಿದರು. ಅವರು ಪವಾಡಪುರಷರಂದೇ ಪ್ರಸಿದ್ಧರಾದರು. ಅವರ ಸಮಾಧಿಯ ಮಣ್ಣು ಅನೇಕರ ರೋಗಗಳು ಗುಣವಡಿಸುವಲ್ಲಿ ಸಹಕಾರಿಯಾಗಿದೆ. ಇದೇ ನಂಬಿಕೆ ಹಾಗು ಭಕ್ತಿಯು ಈಗಲೂ ಜನರಲ್ಲಿದ್ದು, ಈ ಪುಣ್ಯ ಸಮಾಧಿಯ ಭೇಟಿಗಾಗಿ ಜನರು ನಿರಂತರವಾಗಿ ಬರುತ್ತಿದಾರ, ಫ್ರಾಡ್‌ಸ್ವಾಮಿಯವರು ಇಲ್ಲಿ ಅಮರರಾಗಿದ್ದಾರೆ. ಪ್ರತಿ ವರ್ಷ ಡಿಸೆಂಬರ್ 11ರಂದು ಫ್ರಾದ್ ಸ್ವಾಮಿ ಪುಣ್ಯ ಸ್ಮರಣೆಯ ಅಂಗವಾಗಿ ಸ್ಥಾವಕರ ದಿನವನ್ನು ಆಚರಿಸಲಾಗುತ್ತದೆ.

ಸುದ್ದಿ ಗೋಷ್ಠಿಯಲ್ಲಿ ಅನಿಲ್‌ ಡೇಸಾ,ಡಾ.ಲವಿನಾ ಡಿಮೆಲ್ಲೊ,ರೂತ್‌ ಕ್ಯಾಸ್ತಲಿನೊ, ಎಲಿಯಾಸ್‌ ಫೆರ್ನಾ೦ಡೀಸ್‌ ಉಪಸ್ಥಿತರಿದ್ದರು.

 

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಆಕ್ಷನ್ ಕ್ವೀನ್ ಮಾಲಾಶ್ರೀ ಅಭಿನಯದ “ಮಾರಕಾಸ್ತ್ರ” ಚಿತ್ರ ತೆರೆಗೆ ಸಿದ್ಧ!

Next Post

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.50 ಲ.ರೂ. ಮೌಲ್ಯದ ಚಿನ್ನದ ಪೌಡರ್‌ ವಶ

Related Posts

ರಾಜಸ್ಥಾನ ಆರ್ಟ್ ಮತ್ತು  ಕ್ರಾಫ್ಟ್, ಕರಕುಶಲ ವಸ್ತುಗಳ ಮತ್ತು ಕೈಮಗ್ಗ ಸೀರೆಗಳ ಹಾಗೂ  ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ
ಕರಾವಳಿ

ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್, ಕರಕುಶಲ ವಸ್ತುಗಳ ಮತ್ತು ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ

May 7, 2025
21
ಮಂಗಳೂರು : ರೋಹನ್‌ ಕಾರ್ಪೊರೇಷನ್ ಸಂಸ್ಥೆಯ ರಾಯಭಾರಿಯಾಗಿ ಬಾಲಿವುಡ್‌ ಬಾದ್‌ಶಾ ಶಾರುಖಾನ್
ಕರಾವಳಿ

ಮಂಗಳೂರು : ರೋಹನ್‌ ಕಾರ್ಪೊರೇಷನ್ ಸಂಸ್ಥೆಯ ರಾಯಭಾರಿಯಾಗಿ ಬಾಲಿವುಡ್‌ ಬಾದ್‌ಶಾ ಶಾರುಖಾನ್

May 7, 2025
41
Next Post
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.50 ಲ.ರೂ. ಮೌಲ್ಯದ ಚಿನ್ನದ ಪೌಡರ್‌ ವಶ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.50 ಲ.ರೂ. ಮೌಲ್ಯದ ಚಿನ್ನದ ಪೌಡರ್‌ ವಶ

Discussion about this post

Recent News

ಆಪರೇಶನ್ ಸಿಂಧೂರ: ಪಾಕಿಸ್ತಾನದ ಲಾಹೋರ್​ನಲ್ಲಿನ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

ಆಪರೇಶನ್ ಸಿಂಧೂರ: ಪಾಕಿಸ್ತಾನದ ಲಾಹೋರ್​ನಲ್ಲಿನ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

May 8, 2025
35
ಆಪರೇಷನ್​ ಸಿಂಧೂರ: “ಎಲ್ಲವೂ ನಾಶವಾಯ್ತು..”ಮಧ್ಯರಾತ್ರಿ ಭಾರತ ನಡೆಸಿದ ಕ್ಷಿಪಣಿ ದಾಳಿಯನ್ನು ಕಂಡ ಪಾಕಿಸ್ತಾನದ ಪ್ರತ್ಯಕ್ಷದರ್ಶಿ ಮೊದಲ ಮಾತು

ಆಪರೇಷನ್​ ಸಿಂಧೂರ: “ಎಲ್ಲವೂ ನಾಶವಾಯ್ತು..”ಮಧ್ಯರಾತ್ರಿ ಭಾರತ ನಡೆಸಿದ ಕ್ಷಿಪಣಿ ದಾಳಿಯನ್ನು ಕಂಡ ಪಾಕಿಸ್ತಾನದ ಪ್ರತ್ಯಕ್ಷದರ್ಶಿ ಮೊದಲ ಮಾತು

May 8, 2025
89
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆಪರೇಶನ್ ಸಿಂಧೂರ: ಪಾಕಿಸ್ತಾನದ ಲಾಹೋರ್​ನಲ್ಲಿನ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

ಆಪರೇಶನ್ ಸಿಂಧೂರ: ಪಾಕಿಸ್ತಾನದ ಲಾಹೋರ್​ನಲ್ಲಿನ ವಾಯು ರಕ್ಷಣಾ ವ್ಯವಸ್ಥೆ ಧ್ವಂಸ

May 8, 2025
ಆಪರೇಷನ್​ ಸಿಂಧೂರ: “ಎಲ್ಲವೂ ನಾಶವಾಯ್ತು..”ಮಧ್ಯರಾತ್ರಿ ಭಾರತ ನಡೆಸಿದ ಕ್ಷಿಪಣಿ ದಾಳಿಯನ್ನು ಕಂಡ ಪಾಕಿಸ್ತಾನದ ಪ್ರತ್ಯಕ್ಷದರ್ಶಿ ಮೊದಲ ಮಾತು

ಆಪರೇಷನ್​ ಸಿಂಧೂರ: “ಎಲ್ಲವೂ ನಾಶವಾಯ್ತು..”ಮಧ್ಯರಾತ್ರಿ ಭಾರತ ನಡೆಸಿದ ಕ್ಷಿಪಣಿ ದಾಳಿಯನ್ನು ಕಂಡ ಪಾಕಿಸ್ತಾನದ ಪ್ರತ್ಯಕ್ಷದರ್ಶಿ ಮೊದಲ ಮಾತು

May 8, 2025
ರಾಜಸ್ಥಾನ ಆರ್ಟ್ ಮತ್ತು  ಕ್ರಾಫ್ಟ್, ಕರಕುಶಲ ವಸ್ತುಗಳ ಮತ್ತು ಕೈಮಗ್ಗ ಸೀರೆಗಳ ಹಾಗೂ  ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ

ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್, ಕರಕುಶಲ ವಸ್ತುಗಳ ಮತ್ತು ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ

May 7, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d