• About us
  • Contact us
  • Disclaimer
Friday, August 7, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ನಕಲಿ ಐಡಿ ಕಾರ್ಡ್ ಬಳಸಿ ದಿಲ್ಲಿಯಲ್ಲಿ ಅಡಗಿದ್ದ ಪಾಕಿಸ್ತಾನ ಉಗ್ರನ ಬಂಧನ: ದಾಳಿ ಸಂಚು ವಿಫಲ

Coastal Times by Coastal Times
October 12, 2021
in ಕ್ರೈಮ್ ನ್ಯೂಸ್, ರಾಷ್ಟ್ರೀಯ ಸುದ್ದಿ
ನಕಲಿ ಐಡಿ ಕಾರ್ಡ್ ಬಳಸಿ ದಿಲ್ಲಿಯಲ್ಲಿ ಅಡಗಿದ್ದ ಪಾಕಿಸ್ತಾನ ಉಗ್ರನ ಬಂಧನ: ದಾಳಿ ಸಂಚು ವಿಫಲ
23
VIEWS
WhatsappTelegramShare on FacebookShare on Twitter

ಹೊಸದಿಲ್ಲಿ: ದಿಲ್ಲಿ ಪೊಲೀಸರ ವಿಶೇಷ ಘಟಕವು ಪಾಕಿಸ್ತಾನ ಮೂಲದ ಭಯೋತ್ಪಾದಕನೊಬ್ಬನನ್ನು ಮಂಗಳವಾರ ನಗರದಲ್ಲಿ ಬಂಧಿಸಿದೆ. ನವರಾತ್ರಿ ಸಂದರ್ಭದಲ್ಲಿ ರಾಜಧಾನಿಯಲ್ಲಿ ನಡೆಯಬಹುದಾಗಿದ್ದ ಬೃಹತ್ ಭಯೋತ್ಪಾದನಾ ದಾಳಿಯನ್ನು ತಪ್ಪಿಸಲಾಗಿದೆ.

ದಿಲ್ಲಿಯ ಲಕ್ಷ್ಮಿ ನಗರದ ರಮೇಶ್ ಪಾರ್ಕ್ ಪ್ರದೇಶದಿಂದ ಪಾಕಿಸ್ತಾನದ ಉಗ್ರ ಮೊಹಮ್ಮದ್​ ಅಸ್ರಫ್​ ಒಂದು ದಶಕಕ್ಕೂ ಹಿಂದಿನಿಂದ ನಕಲಿ ಹೆಸರಿನಲ್ಲಿ ಭಾರತದಲ್ಲಿ ವಾಸಿಸುತ್ತಿದ್ದಾನೆ. ಗುರುತಿನ ದಾಖಲಾತಿಗಳನ್ನು ಪಡೆಯುವುದಕ್ಕೋಸ್ಕರ ಘಾಜಿಯಾಬಾದ್​ನಲ್ಲಿ ಒಬ್ಬ ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದ ಎಂದು ವಿಶೇಷ ಘಟಕದ ಡಿಸಿಪಿ ಪ್ರಮೋದ್​ ಖುಷ್​ವಾಹ ಹೇಳಿದ್ದಾರೆ. ಸುಮಾರು 10-15 ವರ್ಷಗಳಿಂದಲೂ ಆತ ಅಲಿ ಎಂಬ ಹೆಸರಿನಲ್ಲಿ ಗುರುತಿಸಿಕೊಂಡು ಭಾರತದಲ್ಲಿ ನೆಲೆಸಿದ್ದ.

ಬಂಧಿತನ ಅಡಗುದಾಣದಿಂದ ಒಂದು ಎಕೆ-47 ಅಸಾಲ್ಟ್ ರೈಫಲ್, ಒಂದು ಹೆಚ್ಚುವರಿ ಮ್ಯಾಗಜೀನ್ ಮತ್ತು 60 ರೌಂಡ್ಸ್, ಒಂದು ಹ್ಯಾಂಡ್ ಗ್ರೆನೇಡ್, ಎರಡು ಪಿಸ್ತೂಲುಗಳು ಹಾಗೂ 50 ರೌಂಡ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಭಯೋತ್ಪಾದಕ ಮೊಹಮ್ಮದ್ ಅಶ್ರಫ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೂಲದವನಾಗಿದ್ದಾನೆ. ಆತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, ಸ್ಫೋಟಕ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಪಾಕಿಸ್ತಾನದ ಐಎಸ್ಐನಿಂದ ತರಬೇತಿ ಪಡೆದಿದ್ದ ಉಗ್ರ ಅಸ್ರಫ್​ ಬಾಂಗ್ಲಾದೇಶದ ಮೂಲಕ ಸಿಲಿಗುರಿ ಗಡಿಪ್ರದೇಶದಿಂದ ಭಾರತ ಪ್ರವೇಶಿಸಿದ್ದ. ನಸೀರ್​ ಎಂಬ ಕೋಡ್​ ನೇಮ್​ ಹೊಂದಿದ ಪಾಕಿಸ್ತಾನಿ ಏಜೆಂಟ್​ ಅವನಿಗೆ ಸೂಚನೆಗಳನ್ನು ಕೊಡುತ್ತಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿದ್ದ. ‘ಪೀರ್​ ಮೌಲಾನಾ’ ಎಂಬುದಾಗಿಯೂ ಅಸ್ರಫ್​ ವೇಷ ಬದಲಾಯಿಸಿಕೊಂಡು ಅಡ್ಡಾಡಿದ್ದಾನೆ. ಸದ್ಯ ಸ್ಲೀಪರ್​ ಸೆಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ದೊಡ್ಡ ಭಯೋತ್ಪಾದಕ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಎಂದು ಡಿಸಿಪಿ ಖುಷ್​ವಾಹ ತಿಳಿಸಿದ್ದಾರೆ.

ಮೊಹಮ್ಮದ್ ಅಶ್ರಫ್ ಭಾರತದಲ್ಲಿ ಅಲಿ ಅಹ್ಮದ್ ನೂರಿ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದ. ಆತನ ಬಳಿಯಿಂದ ಪಾಸ್‌ಪೋರ್ಟ್, ಗುರುತಿನ ಚೀಟಿ ಸೇರಿದಂತೆ ಅನೇಕ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಹಬ್ಬದ ಆರಂಭಕ್ಕೂ ಮುನ್ನ ವಿಶೇಷ ಪೊಲೀಸ್ ಘಟಕವು ಉತ್ತಮ ಕಾರ್ಯಾಚರಣೆ ನಡೆಸಿದೆ. ನಮ್ಮ ತಂಡವು ಬೃಹತ್ ಭಯೋತ್ಪಾದನಾ ಸಂಚನ್ನು ವಿಫಲಗೊಳಿಸಿದೆ’ ಎಂದು ಪೊಲೀಸ್ ಆಯುಕ್ತ ರಾಕೇಶ್ ಆಸ್ಥಾನಾ ತಿಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related


Discover more from Coastal Times Kannada

Subscribe to get the latest posts sent to your email.

Previous Post

ಬೆಂಗಳೂರಿನಲ್ಲಿ ಕಾಣೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ

Next Post

ತಾಯಿ-ಮಗುವಿನ ಮೇಲೆ ಹರಿದ ಸಾರಿಗೆ ಬಸ್​!​ ಸ್ಥಳದಲ್ಲೇ ಇಬ್ಬರ ಸಾವು

Related Posts

ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ
ಕ್ರೈಮ್ ನ್ಯೂಸ್

ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ

August 7, 2026
31
ಬೆಳ್ತಂಗಡಿ : ದರೋಡೆ ಪ್ರಕರಣ; 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ
ಕ್ರೈಮ್ ನ್ಯೂಸ್

ಬೆಳ್ತಂಗಡಿ : ದರೋಡೆ ಪ್ರಕರಣ; 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ

August 6, 2026
35
Next Post
ತಾಯಿ-ಮಗುವಿನ ಮೇಲೆ ಹರಿದ ಸಾರಿಗೆ ಬಸ್​!​ ಸ್ಥಳದಲ್ಲೇ ಇಬ್ಬರ ಸಾವು

ತಾಯಿ-ಮಗುವಿನ ಮೇಲೆ ಹರಿದ ಸಾರಿಗೆ ಬಸ್​!​ ಸ್ಥಳದಲ್ಲೇ ಇಬ್ಬರ ಸಾವು

Discussion about this post

Recent News

ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ

ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ

August 7, 2026
31
ಬಂಟ್ವಾಳ: ಬಿಸಿ ರೋಡ್ ಬಳಿ ಟಿಪ್ಪರ್ ಸ್ಕೂಟರಿಗೆ ಡಿಕ್ಕಿ ; ಸಹ ಸವಾರ ಆಸ್ಪತ್ರೆಯಲ್ಲಿ ಸಾವು, ಸವಾರ ಗಂಭೀರ

ಬಂಟ್ವಾಳ: ಬಿಸಿ ರೋಡ್ ಬಳಿ ಟಿಪ್ಪರ್ ಸ್ಕೂಟರಿಗೆ ಡಿಕ್ಕಿ ; ಸಹ ಸವಾರ ಆಸ್ಪತ್ರೆಯಲ್ಲಿ ಸಾವು, ಸವಾರ ಗಂಭೀರ

August 7, 2026
57
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ

ತ್ರಿಕೋನ ಪ್ರೇಮ ಪ್ರಕರಣ: ಆತ್ಮಹತ್ಯೆಗೂ ಮುನ್ನ ಹೊಸ ಲವ್ವರ್‌ಗೆ ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ,ಇಬ್ಬರು ಲವರ್‌ಗಳು ಪರಾರಿ

August 7, 2026
ಬಂಟ್ವಾಳ: ಬಿಸಿ ರೋಡ್ ಬಳಿ ಟಿಪ್ಪರ್ ಸ್ಕೂಟರಿಗೆ ಡಿಕ್ಕಿ ; ಸಹ ಸವಾರ ಆಸ್ಪತ್ರೆಯಲ್ಲಿ ಸಾವು, ಸವಾರ ಗಂಭೀರ

ಬಂಟ್ವಾಳ: ಬಿಸಿ ರೋಡ್ ಬಳಿ ಟಿಪ್ಪರ್ ಸ್ಕೂಟರಿಗೆ ಡಿಕ್ಕಿ ; ಸಹ ಸವಾರ ಆಸ್ಪತ್ರೆಯಲ್ಲಿ ಸಾವು, ಸವಾರ ಗಂಭೀರ

August 7, 2026
ರಾ.ಹೆ. 66ರ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಹೆದ್ದಾರಿ ಪ್ರಾಧಿಕಾರ ಕಾರ್ಯಾಚರಣೆ; ಕಲ್ಲಾಪಿನಲ್ಲಿ ಅನಧಿಕೃತ ಮೀನು ಮಾರುಕಟ್ಟೆ ತೆರವು

ರಾ.ಹೆ. 66ರ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಹೆದ್ದಾರಿ ಪ್ರಾಧಿಕಾರ ಕಾರ್ಯಾಚರಣೆ; ಕಲ್ಲಾಪಿನಲ್ಲಿ ಅನಧಿಕೃತ ಮೀನು ಮಾರುಕಟ್ಟೆ ತೆರವು

August 7, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d