ಮೂಡುಬಿದಿರೆ: ಒಂಟಿಕಟ್ಟೆ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಭಾನುವಾರ ಮುಕ್ತಾಯಗೊಂಡ 19 ನೇ ವರ್ಷದ ಕೋಟಿ– ಚೆನ್ನಯ ಜೋಡುಕರೆ ಕಂಬಳದಲ್ಲಿ ದಾಖಲೆ 221 ಜತೆ ಕೋಣಗಳು ಭಾಗವಹಿಸಿದ್ದು, ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಕಂಬಳ ವೀಕ್ಷಣೆ ಮಾಡಿದರು.
ಆರೂವರೆ ಕೋಲು ನಿಶಾನೆಗೆ ನೀರು ಹಾಯಿಸಿದ ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ಹಾಗೂ ಹಲಗೆ ಮುಟ್ಟಿದವರು ಬೈಂದೂರು ಭಾಸ್ಕರ ದೇವಾಡಿಗ.
ಫಲಿತಾಂಶದ ವಿವರ: ಹಗ್ಗ ಹಿರಿಯ ಪದವು ಕಾನಡ್ಕ ಪ್ಲೇವಿ ಡಿಸೋಜ ಎ. ( ಪ್ರಥಮ) ಕೋಣ ಓಡಿಸಿದವರು ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಮಿಜಾರು ಪ್ರಸಾದ್ ನಿಲಯ ಪ್ರಸಿದ್ಧ್ ಶಕ್ತಿಪ್ರಸಾದ್ ಶೆಟ್ಟಿ ಎ.(ದ್ವಿತೀಯ) ಕೋಣ ಓಡಿಸಿದವರು ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಹಗ್ಗ ಹಿರಿಯ ವಿಭಾಗದ ಮೊದಲ ಸ್ಪರ್ಧೆಯಲ್ಲಿ ಸಮಬಲದ ಫಲಿತಾಂಶದೊಂದಿಗೆ ಸಮಬಲದ ಹೋರಾಟದಲ್ಲಿ ಅಂತ್ಯವಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post