ಮಂಗಳೂರು, ಜುಲೈ 14 : ಎಂಆರ್ ಪಿಎಲ್ ಸ್ಥಾವರದಲ್ಲಿ ಅನಿಲ ಸೋರಿಕೆ ಕುರಿತಾಗಿ ಪರಿಶೀಲಿಸಲು ತೆರಳಿದ್ದಾಗ ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದ ದೀಪಚಂದ್ರ ಭಾರ್ತಿ ಮತ್ತು ಕೇರಳ ಮೂಲದ ಬಿಜಿಲ್ ಪ್ರಸಾದ್ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಇನ್ನಿಬ್ಬರು ಕಾರ್ಮಿಕರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಶವ ಕೊಂಡೊಯ್ದವರಿಗೆ ಕುಟುಂಬಸ್ಥರಿಂದ ದಿಗ್ಬಂಧನ: ಮೃತ ದೀಪಚಂದ್ರ ಅವರ ಶವವನ್ನು ಪ್ರಯಾಗರಾಜ್ ಜಿಲ್ಲೆಯ ಅವರ ಊರಿಗೆ ಒಯ್ದ ಸಂದರ್ಭದಲ್ಲಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಎಂಆರ್ ಪಿಎಲ್ ಕಡೆಯಿಂದ ಜೊತೆಗೆ ತೆರಳಿದ್ದ ಸಹೋದ್ಯೋಗಿಗಳಿಗೆ ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಆರ್ ಪಿಎಲ್ ಅಧಿಕಾರಿಗಳು ಯಾಕೆ ಬರಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಬಡ ಕಾರ್ಮಿಕರ ಸಾವು ಆಗಿದೆ. ಪರಿಹಾರದ ಬಗ್ಗೆ ಯಾಕೆ ಇನ್ನೂ ಮಾಹಿತಿ ನೀಡಿಲ್ಲ. ಸಾವಿಗೆ ಹೊಣೆ ಯಾರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶವ ಕೊಂಡೊಯ್ದ ತಂಡದಲ್ಲಿದ್ದ ಪ್ರತಿನಿಧಿಯೊಬ್ಬರು ತಮ್ಮ ಸ್ಥಿತಿ ತೀರಾ ಸಂಕಷ್ಟದಲ್ಲಿದೆ. ನಮ್ಮನ್ನು ಇಲ್ಲಿನ ಜನರು ಕೂಡಿ ಹಾಕಿದ್ದಾರೆ. ಇವರನ್ನು ಹೇಗೆ ಮನವೊಲಿಸುವುದು, ಇಲ್ಲಿಂದ ಮರಳುವುದು ಹೇಗೆಂದು ತಿಳಿಯುತ್ತಿಲ್ಲ. ಕೂಡಲೇ ಎಂಆರ್ ಪಿಎಲ್ ಮ್ಯಾನೇಜ್ಮೆಂಟ್ ಪರಿಹಾರದ ಬಗ್ಗೆ ಘೋಷಣೆ ಮಾಡಬೇಕು. ನಮ್ಮ ರಕ್ಷಣೆಗೆ ಮಧ್ಯ ಪ್ರವೇಶ ಮಾಡಬೇಕು ಎಂದು ದುಃಖ ತೋಡಿಕೊಂಡು ವಿಡಿಯೋ ಮಾಡಿದ್ದು ಸಂಸ್ಥೆಯ ನೌಕರರಿದ್ದ ವಾಟ್ಸಪ್ ಗ್ರೂಪಿಗೆ ಹಾಕಿದ್ದಾರೆ. ನೂರಾರು ಜನರು ಇಲ್ಲಿಂದ ತೆರಳಿರುವ ಸಹೋದ್ಯೋಗಿಗಳಿಗೆ ಮುತ್ತಿಗೆ ಹಾಕಿದ್ದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.
ಪ್ರತಿಭಟನೆ: ಮೃತಪಟ್ಟ ನೌಕರರ ಕುಟುಂಬಗಳಿಗೆ ಕಂಪೆನಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕಂಪೆನಿಯ ನೌಕರರ ಸಂಘಟನೆ ಸೋಮವಾರ ಬೆಳಗ್ಗೆ 9 ಗಂಟೆಗೆ ಎಂಆರ್ಪಿಎಲ್ ಕಾರ್ಗೊ ಗೇಟ್ ಮುಂಭಾಗ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post