• About us
  • Contact us
  • Disclaimer
Wednesday, November 5, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಫೆ. 11ರಿಂದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪುನರ್‌ ಪ್ರತಿಷ್ಠೆ ಸಹಿತ ಬ್ರಹ್ಮಕಲಶೋತ್ಸವ

Coastal Times by Coastal Times
January 15, 2024
in ಕರಾವಳಿ
ಮಂಗಳೂರು: ಫೆ. 11ರಿಂದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪುನರ್‌ ಪ್ರತಿಷ್ಠೆ ಸಹಿತ ಬ್ರಹ್ಮಕಲಶೋತ್ಸವ
124
VIEWS
WhatsappTelegramShare on FacebookShare on Twitter

ಮಂಗಳೂರು: ಇಲ್ಲಿನ ಉರ್ವ ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದ ಪುನರ್‌ ಪ್ರತಿಷ್ಠೆ ಸಹಿತ ಬ್ರಹ್ಮಕಲಶೋತ್ಸವವು ಫೆ.11ರಿಂದ ಫೆ.15ರ ವರೆಗೆ ನೆರವೇರಲಿದೆ ಎಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್‌ ತಿಳಿಸಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಫೆ.11ರಿಂದ ಬ್ರಹ್ಮಕಲಶೋತ್ಸವದ ವೈದಿಕ ವಿಧಿ-ವಿಧಾನಗಳು ಆರಂಭವಾಗಲಿದ್ದು ಫೆ.13ರಂದು ದೇವರ ಪುನರ್‌ ಪ್ರತಿಷ್ಠೆ ನೆರವೇರಲಿದೆ. ಫೆ.15ರಂದು ಬ್ರಹ್ಮಕಲಶೋತ್ಸವ ಸಂಪನ್ನವಾಗಲಿದೆ. ಫೆ.16ರಂದು ವರ್ಷಾವಧಿ ಮಹಾಪೂಜೆಗೆ ಪ್ರಸಾದ ಹಾರಿಸುವಿಕೆ, ಫೆ.23 ಚಂಡಿಕಾಯಾಗ, ಫೆ.26 ಹಾಗೂ 27ರಂದು ವರ್ಷಾವಧಿ ಮಹಾಪೂಜೆ ನಡೆಯಲಿದೆ. ಮಾ. 2ರಂದು ಕ್ಷೇತ್ರದ ಶ್ರೀ ಮಲರಾಯ ಪರಿವಾರ ದೈವಗಳ ನೇಮ ನಡೆಯಲಿದೆ ಎಂದರು.

ಫೆ. 9ರಂದು ಹೊರೆಕಾಣಿಕೆ ಮೆರವಣಿಗೆ : ಹೊರೆಕಾಣಿಕೆ ಮೆರವಣಿಗೆಯನ್ನು ಭವ್ಯವಾಗಿ ಸಂಘಟಿಸುವ ನಿಟ್ಟಿನಲ್ಲಿ ವಿಶೇಷವಾಗಿ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ. ಫೆ.9ರಂದು ಮಧ್ಯಾಹ್ನ 3ಕ್ಕೆ ಹೊರೆಕಾಣಿಕೆ ಮೆರವಣಿಗೆಯು ಕೂಳೂರು ಗೋಲ್ಡ್‌ ಪಿಂಚ್‌ ಸಿಟಿ ಮೈದಾನದಿಂದ ಹಾಗೂ ನಗರದ ಕೇಂದ್ರ ಮೈದಾನದಿಂದ ಏಕಕಾಲದಲ್ಲಿ ಹೊರಡಲಿದೆ. ಎರಡೂ ಕಡೆಯ ಹೊರೆಕಾಣಿಕೆಯ ಮೆರವಣಿಗೆಯು ಲೇಡಿಹಿಲ್‌ ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ಒಟ್ಟು ಸೇರಿ ಕ್ಷೇತ್ರಕ್ಕೆ ಆಗಮಿಸಲಿದೆ ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಆಡಳಿತ ವ್ಯವಸ್ಥೆಯಿಂದ ಬೇಕಾದ ಎಲ್ಲ ಕ್ರಮಗಳ ಅನುಷ್ಠಾನಕ್ಕೆ ಶ್ರಮಿಸಲಾಗುವುದು ಎಂದರು.

6 ಕೋ.ರೂ ವೆಚ್ಚದ “ಶ್ರೀ ಮಾರಿಯಮ್ಮ ಸಮುದಾಯ ಭವನ’ : ಸುಮಾರು 6 ಕೋ.ರೂ. ವೆಚ್ಚದಲ್ಲಿ ಶ್ರೀ ಮಾರಿಯಮ್ಮ ಸಮುದಾಯ ಭವನ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ನಿರ್ಮಾಣ ಕಾರ್ಯವು ಅಂತಿಮ ಹಂತದಲ್ಲಿದ್ದು, ಭಕ್ತರ ಸಹಕಾರದಿಂದ ಸಾಕಾರವಾಗುತ್ತಿದೆ. ಉದ್ಘಾಟನೆ ಫೆ.3ರಂದು ಬೆಳಗ್ಗೆ 10ಕ್ಕೆ ನೆರವೇರಲಿದೆ ಎಂದು ಡಾ| ಜಿ. ಶಂಕರ್‌ ತಿಳಿಸಿದರು.

ಬ್ರಹ್ಮಶ್ರೀ ಕೋಡಿಕಲ್‌ ಸುಬ್ರಹ್ಮಣ್ಯ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್‌ ಕುಮಾರ್‌ ಕರ್ಕೇರ, ಪ್ರ. ಸಂಚಾಲಕ ಗೌತಮ್‌ ಸಾಲ್ಯಾನ್‌ , ಪ್ರ. ಕಾರ್ಯದರ್ಶಿ ಜಗದೀಶ್‌ ಬಂಗೇರ ಬೋಳೂರು, ಉಪಾಧ್ಯಕ್ಷ ಕುಮಾರ್‌ ಮೆಂಡನ್‌ ಬೈಕಂಪಾಡಿ, ಕೋಶಾಧಿಕಾರಿ ವಸಂತ ಅಮೀನ್‌ ಬೈಕಂಪಾಡಿ, 7 ಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್‌ ಸುವರ್ಣ, ಆಡಳಿತ ಮೊಕ್ತೇಸರ ಲಕ್ಷ್ಮಣ ಅಮೀನ್‌ ಕೋಡಿಕಲ್‌, ಪ್ರಚಾರ ಸಮಿತಿಯ ಯಶವಂತ ಬೋಳೂರು, ಪ್ರಮುಖರಾದ ಶಿವಾನಂದ್‌, ಗಣೇಶ್‌ ಕುಲಾಲ್‌, ಉಷಾರಾಣಿ, ಶಶಿಧರ ಕೋಡಿಕಲ್‌, ಮಾಧವ ಸುವರ್ಣ, ಭರತ್‌ ಉಳ್ಳಾಲ್‌ ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಬೈಕಂಪಾಡಿ ಕೆಮಿಕಲ್ ಕಾರ್ಖಾನೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಬೆಂಕಿ ಅವಘಡ; ಓರ್ವ ಮೃತ್ಯು

Next Post

ಮಂಗಳೂರು ಕುಲಶೇಖರ : ಪತ್ನಿಯಿಂದ ಪತಿಗೆ ಹಲ್ಲೆ , ಪ್ರಕರಣ ದಾಖಲು

Related Posts

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ
ಕರಾವಳಿ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
31
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ
ಕರಾವಳಿ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
31
Next Post
ಮಂಗಳೂರು ಕುಲಶೇಖರ : ಪತ್ನಿಯಿಂದ ಪತಿಗೆ ಹಲ್ಲೆ , ಪ್ರಕರಣ ದಾಖಲು

ಮಂಗಳೂರು ಕುಲಶೇಖರ : ಪತ್ನಿಯಿಂದ ಪತಿಗೆ ಹಲ್ಲೆ , ಪ್ರಕರಣ ದಾಖಲು

Discussion about this post

Recent News

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
31
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
31
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್

World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್

November 3, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d