ಮಂಗಳೂರು, ಫೆ 15: ಮ್ಯಾಟ್ರಿಮನಿಯಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ ನಂಬಿಸಿ ಹಣ ಪಡೆದು ವ್ಯಕ್ತಿಯೋರ್ವ ವಂಚಿಸಿರುವ ಘಟನೆ ಮಾಸುವ ಮುನ್ನವೇ ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಮತ್ತೊಬ್ಬನ ಕಹಾನಿ ಬಯಲಾಗಿದೆ. ಈಗಾಗಲೇ ಮೂರ್ನಾಲ್ಕು ಮದುವೆಯಾಗಿ ವಂಚಿಸಿದ್ದಾನೆಂದು ಸ್ವತಃ ಪತ್ನಿಯೇ ಬಟಾ ಬಯಲು ಮಾಡಿದ್ದು, ಬಜೆಪೆ ನಿವಾಸಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.
ಸಂತ್ರಸ್ತೆ ಪ್ರೀತಿಗೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಮನೀಶ್, ಬ್ಲ್ಯಾಕ್ಮೇಲ್ ಮಾಡಿ ಆಕೆಯನ್ನು ಮದುವೆ ಆಗಿದ್ದ ಎಂದು ದೂರಲಾಗಿದೆ. ಮದುವೆಗೆ ಮೂರು ದಿನ ಇರುವಾಗ ಹಣ ಇಲ್ಲ ಎಂದು ಈತ ಆತ್ಮಹತ್ಯೆ ನಾಟಕವಾಡಿದ್ದ. ಹೀಗಾಗಿ ಮದುವೆಯ ಎಲ್ಲ ಖರ್ಚನ್ನು ತಾವೇ ನೋಡಿಕೊಂಡು ಪ್ರೀತಿ ಪೋಷಕರು ವಿವಾಹ ಕಾರ್ಯ ನಡೆಸಿದ್ದರು. ಮದುವೆಯಾದ ಬಳಿಕ ಎರಡು ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್ಗೆ ಕೆಲಸ ಕೊಡಿಸಲು ಕೂಡ ಪ್ರೀತಿ ಸಹಾಯ ಮಾಡಿದ್ದರು. ಆದ್ರೆ ದುಬೈಗೆ ಹೋದ ಈತ ಬಹರೇನ್ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿ ಶುರುಮಾಡಿದ್ದಾನೆ. ವಿಚಾರ ತಿಳಿದು ಈತನ ಇತಿಹಾಸವನ್ನು ಪ್ರೀತಿ ಕೆದಕಿದ್ದು, ಈ ವೇಳೆ ಮನೀಶ್ನ ನಿಜರೂಪ ಬಯಲಾಗಿದೆ.
ಮದುವೆಗೆ ಮೂರು ದಿನ ಇರುವಾಗ ಆತ್ಮಹತ್ಯೆ ಯತ್ನದ ನಾಟಕವಾಡಿದ್ದ. ಮದುವೆಗೆ ಹಣ ಇಲ್ಲ, ನೀವೇ ಏನಾದ್ರೂ ಮಾಡಬೇಕೆಂದು ಕಳ್ಳಾಟ ತೋರಿಸಿದ್ದ. ಆಬಳಿಕ ಮದುವೆಯ ಎಲ್ಲಾ ಖರ್ಚನ್ನು ನಮ್ಮ ಪೋಷಕರೇ ಹಾಕಿ ಮದುವೆ ಮಾಡಿಸಿದ್ದರು. ನನ್ನ ತಂದೆ ಪೈಂಟರ್ ಆಗಿದ್ದು ಕಷ್ಟಪಟ್ಟು ದುಡಿದ ಹಣದಲ್ಲಿ ಮದುವೆ ಮಾಡಿಸಿದ್ದರು. ಆದರೆ ಆತನಿಗೆ ಹಣದ ಬೆಲೆ ಗೊತ್ತಿಲ್ಲ. ಮದುವೆ ಬಳಿಕ ಎರಡು ಲಕ್ಷ ಕೊಟ್ಟು ವಿದೇಶದಲ್ಲಿ ಕೆಲಸ ಕೊಡಿಸುವುದಕ್ಕೂ ಸಹಾಯ ಮಾಡಿದ್ದೆ. ಆದರೆ, ದುಬೈಗೆ ಹೋದ ಬಳಿಕ ಬದಲಾಗಿದ್ದು ಅಲ್ಲಿ ಬಹರೇನ್ ನಲ್ಲಿರುವ ಮಂಗಳೂರು ಮೂಲದ ಮಹಿಳೆಯ ಜೊತೆ ಪ್ರೀತಿ ನಾಟಕ ಶುರು ಮಾಡಿದ್ದಾನೆ. ಇದರ ಬಗ್ಗೆ ತಿಳಿಯುತ್ತಲೇ ಮನೀಶ್ ಇತಿಹಾಸ ಕೆದಕಿದಾಗ, ಮದುವೆಗೂ ಮುನ್ನ ಈತ ಹಲವು ಯುವತಿಯರ ಜೊತೆ ಆಫೇರ್ ಹೊಂದಿದ್ದುದು ಬಯಲಾಗಿದೆ. ಅವರೆಲ್ಲರ ಬಳಿಯೂ ಹಣ ಪಡೆದು ಮೋಸ ಮಾಡಿದ್ದಾಗಿ ಯುವತಿ ಮಾಹಿತಿ ಸಂಗ್ರಹಿಸಿದ್ದಾಳೆ.
ಹಣ ವಾಪಸ್ ಕೇಳಿದ್ರೆ ಎಲ್ಲಾ ಯುವತಿಯರ ಬಳಿ ಒಂದೇ ರೀತಿಯ ನಾಟಕ ಮಾಡ್ತಿದ್ದ. ತನಗೆ ಬ್ರೈನ್ ಟ್ಯೂಮರ್ ಇದೆ ಎಂದು ಹೇಳಿ ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡುತ್ತಿದ್ದ. ಆನಂತರ, ಟಿಕ್ ಟಾಕ್ ಮಾಡಿ ಹೊಸ ಯುವತಿಯರಿಗೆ ಗಾಳ ಹಾಕಿ ಬಲೆಗೆ ಹಾಕುತ್ತಿದ್ದ ಎಂದು ಆತನ ಪತ್ನಿ ಈಗ ಆರೋಪ ಮಾಡಿದ್ದಾಳೆ. ಇಂತಹ ಗಂಡ ತನಗೆಂದೂ ಬೇಡ, ಮತ್ತೆ ಯಾರೊಬ್ಬ ಯುವತಿಯೂ ಈತನಿಂದ ಮೋಸ ಹೋಗಬಾರದು ಎಂದು ಹೇಳಿ ಪೊಲೀಸ್ ದೂರು ನೀಡುತ್ತಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾಳೆ.
Discover more from Coastal Times Kannada
Subscribe to get the latest posts sent to your email.








Discussion about this post