• About us
  • Contact us
  • Disclaimer
Tuesday, September 16, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಭಾರತೀಯ ಅಂಚೆ ಇಲಾಖೆಯ ಸೂಪರ್​ ಟಾಪ್​ ಅಪ್​ ಹೆಲ್ತ್ ಇನ್ಶೂರೆನ್ಸ್ ಯೋಜನೆ: 756 ರೂ.ಗೆ 15 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ

Coastal Times by Coastal Times
July 16, 2025
in ಆರೋಗ್ಯ, ಕರಾವಳಿ
ಭಾರತೀಯ ಅಂಚೆ ಇಲಾಖೆಯ ಸೂಪರ್​ ಟಾಪ್​ ಅಪ್​ ಹೆಲ್ತ್ ಇನ್ಶೂರೆನ್ಸ್ ಯೋಜನೆ: 756 ರೂ.ಗೆ 15 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ
229
VIEWS
WhatsappTelegramShare on FacebookShare on Twitter

ಮಂಗಳೂರು: ಭಾರತೀಯ ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಇದೀಗ ಭಾರತೀಯ ನಾಗರಿಕರಿಗೆ ಶ್ರೇಷ್ಠವಾದ, ಕಡಿಮೆ ಖರ್ಚಿನ ಆರೋಗ್ಯ ವಿಮಾ ಯೋಜನೆಯನ್ನು ಪರಿಚಯಿಸಿದೆ. 756 ರೂ. ಮಾತ್ರದಲ್ಲಿ ರೂ. 15 ಲಕ್ಷವರೆಗೆ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಲಭ್ಯವಿರುವ ಈ ಯೋಜನೆ, ಗ್ರಾಮೀಣ ಮತ್ತು ನಗರ ಎಲ್ಲ ಜನರಿಗೂ ನೇರವಾಗಿ ಲಾಭ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ಕೊರೊನಾ ಸಾಂಕ್ರಾಮಿಕ ನಂತರ ಭಾರತದಲ್ಲಿ ಆರೋಗ್ಯದ ಮೇಲಿನ ಜಾಗೃತಿ ಹೆಚ್ಚಾಗಿದೆ. ಆದರೆ ಆಸ್ಪತ್ರೆ ವೆಚ್ಚಗಳು ಕೂಡಾ ಅತಿರೇಕವಾಗಿ ಏರಿಕೆಯಾಗಿದ್ದು, ಸಾಮಾನ್ಯ ಕುಟುಂಬಗಳಿಗೆ ವೈದ್ಯಕೀಯ ವೆಚ್ಚ ಭಾರವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಅಂಚೆ ಇಲಾಖೆ ಭಾರತದಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ದರದಲ್ಲಿ ರೂ. 15 ಲಕ್ಷದ ವಿಮಾ ಭದ್ರತೆ ನೀಡುವ ‘ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆ’ಯನ್ನು ಪ್ರಾರಂಭಿಸಿದೆ.

ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?: ಈ ಯೋಜನೆ ಟಾಪ್-ಅಪ್ ಪ್ಲ್ಯಾನ್​ ಮೇಲೆ ನಡೆಯುತ್ತದೆ. ಅಂದರೆ, ನಿಮಗೆ ಆಯುಷ್ಮಾನ್, ಖಾಸಗಿ ಇನ್ಶೂರೆನ್ಸ್ ಅಥವಾ ಯಾವುದಾದರೂ ರೂಪದಲ್ಲಿ ಮೊದಲ ರೂ. 2 ಲಕ್ಷದ ವೆಚ್ಚವನ್ನು ನೀವು ಭರಿಸುವ ಅಗತ್ಯವಿದೆ. ಆದರೆ ಅದನ್ನು ಮೀರಿದ ಆಸ್ಪತ್ರೆ ವೆಚ್ಚಗಳನ್ನು ರೂ. 15 ಲಕ್ಷದವರೆಗೆ ಈ ಯೋಜನೆ ಭರಿಸುತ್ತದೆ.

ಇದಕ್ಕೆ ಜೊತೆಯಾಗಿ, ನೀವು ಅಂಚೆ ಇಲಾಖೆ ನೀಡುವ ರೂ. 2 ಲಕ್ಷದ ಸಾಮಾನ್ಯ ಆರೋಗ್ಯ ವಿಮಾ (ವರ್ಷಕ್ಕೆ ರೂ. 4,800 – 40 ವರ್ಷದೊಳಗಿನವರಿಗೆ) ಜೊತೆಗೆ ಈ ಯೋಜನೆಯನ್ನು ಒಟ್ಟು ರೂ. 5,556ರ ಪ್ಲ್ಯಾನ್​ನಲ್ಲಿ ಪಡೆದುಕೊಂಡರೆ, ರೂ. 17 ಲಕ್ಷದ ವಿಮಾ ನಿಮ್ಮದಾಗುತ್ತದೆ.

ಅಂಚೆ ಇಲಾಖೆಯ ಈ ಹೊಸ ಹೆಲ್ತ್ ಇನ್ಶೂರೆನ್ಸ್ ಯೋಜನೆ, ಭಾರತೀಯ ಆರೋಗ್ಯ ವಿಮಾದಲ್ಲಿ ಹೊಸ ಪ್ರಯತ್ನ. ರೂ. 756ರಲ್ಲಿ ರೂ. 15 ಲಕ್ಷದ ವಿಮಾ ಪಡೆಯುವುದು ಒಂದು ಕ್ರಾಂತಿಕಾರಿ ಹೆಜ್ಜೆ. ಆರೋಗ್ಯದ ಹಕ್ಕನ್ನು ಪ್ರತಿಯೊಬ್ಬರಿಗೂ ಸಮಾನವಾಗಿ ನೀಡುವ ಸಾರ್ಥಕ ಪ್ರಯತ್ನ ಇದಾಗಿದೆ. ಸಾಮಾನ್ಯ ಕುಟುಂಬಗಳು, ಖಾಸಗಿ ಯೋಜನೆಗಳಿಗೆ ಹಣವಿಲ್ಲದೆ ಇರುವವರು, ಗ್ರಾಮೀಣ ಜನತೆ ಎಲ್ಲರಿಗೂ ಈ ಯೋಜನೆಯು ಅನುಕೂಲಕರವಾಗಲಿದೆ.

ಈ ಬಗ್ಗೆ ಮಾತನಾಡಿದ ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಕೆ.ಸುಧಾಕರ ಮಲ್ಯ, “ಅಂಚೆ ಇಲಾಖೆಯಲ್ಲಿ ಐಪಿಪಿಬಿ ಮತ್ತು ಖಾಸಗಿ ವಿಮಾ ಸಂಸ್ಥೆಯೊಂದಿಗೆ ಟಾಪ್ ಅಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆ. 15 ಲಕ್ಷ ರೂ. ವಿಮಾ ಮೊತ್ತ ನೀಡಲಾಗುತ್ತದೆ. ಇದರಲ್ಲಿ ಮೊದಲ 2 ಲಕ್ಷವನ್ನು ವಿಮೆ ಪಡೆದವರೇ ಭರಿಸಬೇಕಾಗುತ್ತದೆ. 2 ಲಕ್ಷದ ಮೇಲೆ 15 ಲಕ್ಷ ರೂ.ವರೆಗೆ ವಿಮೆಯನ್ನು ಕ್ಯಾಶ್ ಲೆಸ್ ಆಗಿ ಇದರಲ್ಲಿ ಪಡೆಯಬಹುದು” ಎಂದು ಹೇಳಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಮೂಡುಬಿದಿರೆ: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿಗೆ ಬ್ಲ್ಯಾಕ್​ಮೇಲ್, ಮತ್ತೆ ರೇಪ್; ಮೂವರನ್ನು ಬಂಧಿಸಿದ ಬೆಂಗಳೂರು ಪೊಲೀಸರು

Next Post

ಹೆಂಡತಿಯ ತಲೆ ಬೋಳಿಸಿ ವಿಕೃತಿ ಮೆರೆದ ಪಾಪಿ ಪತಿ, ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

Related Posts

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು
ಕರಾವಳಿ

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

September 15, 2025
52
ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ
ಕರಾವಳಿ

ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

September 15, 2025
56
Next Post
ಹೆಂಡತಿಯ ತಲೆ ಬೋಳಿಸಿ ವಿಕೃತಿ ಮೆರೆದ ಪಾಪಿ ಪತಿ, ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

ಹೆಂಡತಿಯ ತಲೆ ಬೋಳಿಸಿ ವಿಕೃತಿ ಮೆರೆದ ಪಾಪಿ ಪತಿ, ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ

Discussion about this post

Recent News

ನಿರ್ದೇಶಕ ಶಶಾಂಕ್ ಸಾರಥ್ಯದ”ಬ್ರ್ಯಾಟ್” (BRAT )  ಚಿತ್ರದ ‘ಗಂಗಿ ಗಂಗಿ’…  ಹಾಡು ರಿಲೀಸ್.

ನಿರ್ದೇಶಕ ಶಶಾಂಕ್ ಸಾರಥ್ಯದ”ಬ್ರ್ಯಾಟ್” (BRAT ) ಚಿತ್ರದ ‘ಗಂಗಿ ಗಂಗಿ’… ಹಾಡು ರಿಲೀಸ್.

September 15, 2025
10
ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

September 15, 2025
52
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನಿರ್ದೇಶಕ ಶಶಾಂಕ್ ಸಾರಥ್ಯದ”ಬ್ರ್ಯಾಟ್” (BRAT )  ಚಿತ್ರದ ‘ಗಂಗಿ ಗಂಗಿ’…  ಹಾಡು ರಿಲೀಸ್.

ನಿರ್ದೇಶಕ ಶಶಾಂಕ್ ಸಾರಥ್ಯದ”ಬ್ರ್ಯಾಟ್” (BRAT ) ಚಿತ್ರದ ‘ಗಂಗಿ ಗಂಗಿ’… ಹಾಡು ರಿಲೀಸ್.

September 15, 2025
ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

ಸೌದಿ ಅರೇಬಿಯಾ ಬಸ್‌ಗಳ ನಡುವೆ ಅಪಘಾತ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಳ್ಳಾಲದ ಯುವಕ ದಾರುಣ ಸಾವು

September 15, 2025
ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

ಉಳ್ಳಾಲ ಹಠಾತ್ತನೇ ಕೈಕೊಟ್ಟ ಇಂಜಿನ್ ಬೋಟ್ ನಲ್ಲಿ ಇದ್ದ 13 ಮಂದಿ ಮೀನುಗಾರರು ಈಜಿ ಪ್ರಾಣ ರಕ್ಷಿಸಿಕೊಂಡರು , ಬೋಟ್ ಸಂಪೂರ್ಣ ಹಾನಿ

September 15, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d