ಮಂಗಳೂರು ಆ.19: : ಕರಾವಳಿಯ ಹೆಸರಾಂತ ಜಾನಪದ ಕ್ರೀಡೆ ಕಂಬಳ ಕಳೆದ ವರ್ಷ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನೆರವೇರಿದ ಬಳಿಕ ಇದೇ ಮೊದಲ ಬಾರಿಗೆ ಮಲೆನಾಡಿಗೂ ವಿಸ್ತರಿಸಲು ಸನ್ನದ್ಧವಾಗಿದ್ದು, ಅದಕ್ಕಾಗಿ ಈಗಲೇ ಪೂರಕ ಸಿದ್ಧತೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ, ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3181 ಮತ್ತು 3182 ಹಾಗೂ ಶಿವಮೊಗ್ಗ ಕಂಬಳ ಸಮಿತಿಯನ್ನು ರಚಿಸಿ ಇದರ ಸಹಯೋಗದೊಂದಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ 2025ರ ಏಪ್ರಿಲ್ 19 ಮತ್ತು 20ರಂದು ಆಯೋಜಿಸಲಾಗುವುದು ಎಂದು ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರಾವಳಿ ಕರ್ನಾಟಕ ಜಾನಪದ, ಕ್ರೀಡೆಯನ್ನು ವಿಶ್ವ ಪಾರಂಪರಿಕ ತಾಣವಾದ ಶಿವಮೊಗ್ಗದಲ್ಲಿ ನಡೆಸಲು ಶ್ರೀಮತಿ ಕಲ್ಪನ ಸಂತೋಷ, ಕೆ. ಎಸ್. ನಾಗಪಾತ್ರಿಗಳು, ಶ್ರೀ ನಾಗಯಕ್ಷೆ ದೇವಸ್ಥಾನ, ಹೆಗಲತ್ತಿ, ತೀರ್ಥಹಳ್ಳಿ (ತಾ) ಇವರು ಯೋಜಿಸಿದ್ದು, ಇಂತಹ ಜನಪ್ರಿಯ ಜಾತ್ಯಾತೀತ ರೈತ ಕ್ರೀಡೆಯನ್ನು ಜೋಗದ ಸಿರಿಯಲ್ಲಿ ಮೊಳಗಿ ಕೊಡಚಾದ್ರಿ ಶಿಖರದಿ ಹೊಮ್ಮಲು ಶಿವಮೊಗ್ಗ ನಗರದ ಅಭಿವೃದ್ಧಿ ಯೋಜನೆಯ ರುವಾರಿ 7 ಬಾರಿ ಶಾಸಕರಾಗಿ, ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಹಲವು ಇಲಾಖೆಗಳ ಸಚಿವರಾಗಿ, ಶ್ರೀಗಂಧ ಸಂಸ್ಥೆಯ ಅಧ್ಯಕ್ಷರು ಮತ್ತು ಸಾಂಸ್ಕೃತಿಕ ರಾಯಭಾರಿಯು ಹಾಗೂ ನಂದನ ಮತ್ತು ಫೇಸ್ ವಿದ್ಯಾಸಂಸ್ಥೆಯ ಅಧ್ಯಕ್ಷರು ಆಗಿರುವ ಶ್ರೀ ಕೆ.ಎಸ್. ಈಶ್ವರಪ್ಪ ಮತ್ತು ಅವರ ಮಗ ಕಾಂತೇಶ್ “ಮಲೆನಾಡ ಕಂಬಳ” ವನ್ನು ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬೈಂದೂರು, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಸಹಬಾಗಿತ್ವದಲ್ಲಿ ಹಚ್ಚ ಹಸಿರ ಪಶ್ಚಿಮ ಘಟ್ಟಗಳ ದ್ದಾರ ಶಿವಮೊಗ್ಗ ತುಂಗೆಯ ತಟದಲ್ಲಿ “ಮಲೆನಾಡ ಕ೦ಬಳ”ವನ್ನು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಹಾಗೂ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ 3181 ಮತ್ತು 3182 ಹಾಗೂ ಶಿವಮೊಗ್ಗ ಕಂಬಳ ಸಮಿತಿಯನ್ನು ರಚಿಸಿ ಇದರ ಸಹಯೋಗದೊಂದಿಗೆ ಜನಪ್ರತಿನಿಧಿಗಳನ್ನು, ಸರ್ವಧರ್ಮೀಯರನ್ನು ಹಾಗೂ ಎಲ್ಲಾ ಕಂಬಳ ಅಭಿಮಾನಿಗಳನ್ನು ಒಗ್ಗೂಡಿಸಿ “ಮಲೆನಾಡ ತುಂಗ-ಭದ್ರ ಜೋಡುಕರೆ ಕಂಬಳ”ವನ್ನು ಆಯೋಜಿಸಲು ತೀರ್ಮಾನಿಸಿರುತ್ತೇವೆ. ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ಜನಪದವನ್ನು ಸದಾ ಸಾರುವ ಮಲೆನಾಡು ಇಂದು ಕೃಷಿ ಸಂತುಸ್ಟಿಗಾಗಿ ಮತ್ತು ಸ್ಥಳೀಯ ಪರಂಪರೆಯ ಪಸರಣಕ್ಕೆ ಇದು ಸಾಕ್ಷಿಯಾಗಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು. ಈ ಬಾರಿ 25 ಕಂಬಳ: ಕರಾವಳಿಯಲ್ಲಿ ಈ ಬಾರಿ 25 ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದೆ. ದಿನಾಂಕವನ್ನೂ ನಿಗದಿ ಮಾಡಲಾಗಿದೆ ಎಂದರು.
ಗೌರವಾಧ್ಯಕ್ಷರು: ಕೆ.ಎಸ್. ಇಶ್ವರಪ್ಪ , ಅಧ್ಯಕ್ಷರು: ಮುಚ್ಚೂರು ಕಲ್ಕಾಡೆ ಲೋಕೆಶ್ ಶೆಟ್ಟಿ , ಮುಖ್ಯ ಕಾರ್ಯದರ್ಶಿ: ಎಲಿಯಾಸ್ ಸ್ಯಾಂಕ್ಟಿಸ್ , ಕಾರ್ಯಧ್ಯಕ್ಷರು: ಕಾಂತೇಶ್ ಕೆ.ಇ, ಜಿಲ್ಲಾ ಕಂಬಳ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ ಉಡಿಪಿ ಕಾಸರಗೋಡು, ರೋಟರಿ ಇಂಟರ್ ನ್ಯಾಶನಲ್ ಡೊಸ್ಟ್ರಿಕ್ 3181 ಮತ್ತು 3182 ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತಿ ಇದ್ದರು.
Discussion about this post