• About us
  • Contact us
  • Disclaimer
Tuesday, April 7, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಫಿಫಾ ವಿಶ್ವಕಪ್‌ ಫುಟ್‌ಬಾಲ್‌: ಇರಾನ್​ ಮೇಲೆ ಗೋಲಿನ ಸುರಿಮಳೆಗೈದ ಇಂಗ್ಲೆಂಡ್

Coastal Times by Coastal Times
November 22, 2022
in ಕ್ರೀಡಾ ಸುದ್ದಿ
ಫಿಫಾ ವಿಶ್ವಕಪ್‌ ಫುಟ್‌ಬಾಲ್‌: ಇರಾನ್​ ಮೇಲೆ ಗೋಲಿನ ಸುರಿಮಳೆಗೈದ ಇಂಗ್ಲೆಂಡ್
51
VIEWS
WhatsappTelegramShare on FacebookShare on Twitter

ದೋಹಾ: ಮಾಜಿ ಚಾಂಪಿಯನ್​ ಇಂಗ್ಲೆಂಡ್‌ ತಂಡ ಫಿಫಾ ವಿಶ್ವ ಕಪ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಖಲೀಫಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂನಲ್ಲಿ ನಡೆದ ಸೋಮವಾರದ ಈ ಮುಖಾಮುಖಿಯಲ್ಲಿ ಇರಾನ್‌ ತಂಡದ ಮೇಲೆ ಸವಾರಿ ಮಾಡಿ 6-2 ಗೋಲುಗಳ ಅಧಿಕಾರಯುತ ಗೆಲುವು ದಾಖಲಿಸಿದೆ.

ಬುಕಾಯೊ ಸಾಕಾ ಎರಡು ಗೋಲುಗಳನ್ನು ತಂದಿತ್ತರೆ, ಜೂಡ್‌ ಬೆಲಿಂಗಮ್‌, ರಹೀಮ್‌ ಸ್ಟರ್ಲಿಂಗ್‌, ಮಾರ್ಕಸ್‌ ರಶ್‌ಫೋರ್ಡ್‌ ಮತ್ತು ಜಾಕ್‌ ಗ್ರೀಲಿಶ್‌ ಅವರು ತಲಾ ಒಂದು ಗೋಲು ತಂದಿತ್ತರು. ಮೊದಲ ಅರ್ಧ ಗಂಟೆಯ ಆಟದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನೀಡಿದವು. ಇದರಿಂದ ಆರಂಭದಲ್ಲಿ ಗೋಲು ಬರಲಿಲ್ಲ. 35ನೇ ನಿಮಿಷದಲ್ಲಿ ಇಂಗ್ಲೆಂಡ್‌ ಗೋಲಿನ ಖಾತೆ ತೆರೆಯಿತು. ಲೂಕ್‌ ಶಾ ನೀಡಿದ ನಿಖರ ಪಾಸ್‌ನಲ್ಲಿ ಚೆಂಡನ್ನು ಹೆಡ್‌ ಮಾಡಿದ ಬೆಲಿಂಗಮ್‌ ಗುರಿ ಸೇರಿಸಿದರು.

ಮೊದಲ ಗೋಲು ಬಿದ್ದದ್ದೇ ತಡ, ಆಟದ ಚಿತ್ರಣವೇ ಬದಲಾಯಿತು. ಅದುವರೆಗೂ ನಿಧಾನಗತಿಯ ಆಟವಾಡುತ್ತಿದ್ದ ಇಂಗ್ಲೆಂಡ್‌ ಆಟಗಾರರು ಎದುರಾಳಿ ತಂಡದ ಗೋಲುಪೆಟ್ಟಿಗೆ ಗುರಿಯಾಗಿಸಿ ಮೇಲಿಂದ ಮೇಲೆ ದಾಳಿ ನಡೆಸಿದರು. ಎಂಟು ನಿಮಿಷಗಳ ಬಳಿಕ ಇಂಗ್ಲೆಂಡ್‌ ಮುನ್ನಡೆಯನ್ನು ಹೆಚ್ಚಿಸಿತು. ಹ್ಯಾರಿ ಮಗುಯೆರ್‌ ಅವರು ಹೆಡರ್‌ ಮೂಲಕ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಬುಕಾಯೊ ಸಾಕಾ ಗುರಿ ಸೇರಿಸಿದರು. ವಿರಾಮಕ್ಕೆ ತೆರಳಲು ಕೆಲವೇ ನಿಮಿಷಗಳಿದ್ದಾಗ ಸ್ಟರ್ಲಿಂಗ್‌ (45+1) ತಮ್ಮ ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ನಾಯಕ ಹ್ಯಾರಿ ಕೇನ್‌ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಅವರು ಯಾವುದೇ ತಪ್ಪು ಮಾಡಲಿಲ್ಲ.

ಎರಡನೇ ಅವಧಿಯಲ್ಲೂ ಇಂಗ್ಲೆಂಡ್‌ನ ಪ್ರಾಬಲ್ಯ ಮುಂದುವರಿಯಿತು. 62ನೇ ನಿಮಿಷದಲ್ಲಿ ಸಾಕಾ ತಮ್ಮ ಎರಡನೇ ಗೋಲು ಗಳಿಸಿದರು. ಇರಾನ್‌ನ ಡಿಫೆಂಡರ್‌ಗಳನ್ನು ಚಾಣಾಕ್ಷತನದಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿ ಮುನ್ನಡೆಯನ್ನು 4–0ಗೆ ಹೆಚ್ಚಿಸಿದರು. ಇದಾದ ಮೂರು ನಿಮಿಷಗಳ ಬಳಿಕ ಮೆಹ್ದಿ ತರೆಮಿ ಅವರು ಗೋಲು ಗಳಿಸಿ ಇರಾನ್‌ನ ಹಿನ್ನಡೆಯನ್ನು 1–4ಕ್ಕೆ ತಗ್ಗಿಸಿದರು. ಆದರೆ ರಶ್‌ಫೋರ್ಡ್‌ (71ನೇ ನಿ.) ಹಾಗೂ ಗ್ರೀಲಿಶ್‌ (90ನೇ ನಿ.) ಅವರು ಗೋಲು ಗಳಿಸಿ ಇಂಗ್ಲೆಂಡ್‌ನ ಗೆಲುವಿನ ಅಂತರ ಹಿಗ್ಗಿಸಿದರು. ಪಂದ್ಯ ಕೊನೆಗೊಳ್ಳಲು ಕೆಲವು ಸೆಕೆಂಡುಗಳು ಇರುವಾಗ ತರೆಮಿ ತಮ್ಮ ಹಾಗೂ ತಂಡದ ಎರಡನೇ ಗೋಲು ಗಳಿಸಿದರು.

🏴󠁧󠁢󠁥󠁮󠁧󠁿🦁 @England are in the Group B driver's seat #FIFAWorldCup | #Qatar2022

— FIFA World Cup (@FIFAWorldCup) November 21, 2022

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ, ಆಟೊ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಪರಿಹಾರ : ಎಡಿಜಿಪಿ ಅಲೋಕ್‌ ಕುಮಾರ್‌

Next Post

ಮಂಗಳೂರು ಆಟೊ ರಿಕ್ಷಾದಲ್ಲಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

Related Posts

IPL 2026: ಬೆಂಗಳೂರು(ಆರ್‌ಸಿಬಿ)ರೂ.16,705 ಕೋಟಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ರೂ.15,290 ಕೋಟಿಗೆ ಸೇಲ್! ಹೊಸ ಮಾಲೀಕರು ಇವರು
ಕ್ರೀಡಾ ಸುದ್ದಿ

IPL 2026: ಬೆಂಗಳೂರು(ಆರ್‌ಸಿಬಿ)ರೂ.16,705 ಕೋಟಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ರೂ.15,290 ಕೋಟಿಗೆ ಸೇಲ್! ಹೊಸ ಮಾಲೀಕರು ಇವರು

March 26, 2026
20
ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!
ಕ್ರೀಡಾ ಸುದ್ದಿ

ನ್ಯೂಜಿಲೆಂಡ್​ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್​ ಆದ ಭಾರತ!

March 9, 2026
24
Next Post
ಮಂಗಳೂರು ಆಟೊ ರಿಕ್ಷಾದಲ್ಲಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

ಮಂಗಳೂರು ಆಟೊ ರಿಕ್ಷಾದಲ್ಲಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

Discussion about this post

Recent News

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

April 5, 2026
13
ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ

ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ

April 4, 2026
26
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

April 5, 2026
ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ

ಇನಾಯತ್ ಆಲಿ ನೇತೃತ್ವದ ಗುರುಪುರ ಮೂಳೂರು–ಅಡ್ಡೂರು ಜೋಡುಕರೆ ಕಂಬಳಕ್ಕೆ ಚಾಲನೆ

April 4, 2026
ಮಿಫ್ಸೆ-ಮಿನ್ನರ್ವ ಕಾಲೇಜಿನಲ್ಲಿ ವಿ.ಟಿ.ಯು (VTU) ಕಾರ್ಯಕ್ರಮಗಳ ಉದ್ಘಾಟನೆ: ಕೌಶಲ್ಯಾಧಾರಿತ ಶಿಕ್ಷಣಕ್ಕೆ ಸ್ಪೀಕರ್ ಯು.ಟಿ. ಖಾದರ್ ಕರೆ

ಮಿಫ್ಸೆ-ಮಿನ್ನರ್ವ ಕಾಲೇಜಿನಲ್ಲಿ ವಿ.ಟಿ.ಯು (VTU) ಕಾರ್ಯಕ್ರಮಗಳ ಉದ್ಘಾಟನೆ: ಕೌಶಲ್ಯಾಧಾರಿತ ಶಿಕ್ಷಣಕ್ಕೆ ಸ್ಪೀಕರ್ ಯು.ಟಿ. ಖಾದರ್ ಕರೆ

April 4, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d