ಬಂಟ್ವಾಳ : ಹುಡುಗನ ಹೆಸರಲ್ಲಿ ಬಂಟ್ವಾಳ ತಾಲೂಕಿನ ಹುಡುಗಿಯೊಬ್ಬಳ ಜೊತೆ ಫೇಸ್ಬುಕ್ನಲ್ಲಿ ಪ್ರೇಮದಾಟವಾಡುತ್ತಿದ್ದ ಮಂಗಳಮುಖಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಸಿವಿಲ್ ಇಂಜಿನಿಯರ್ ಎಂದು ಹೇಳಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ಸುಮಾರು ನಾಲ್ಕು ವರ್ಷಗಳಿಂದ ಬಂಟ್ವಾಳದ ಯುವತಿ ಫೇಸ್ಬುಕ್ ಖಾತೆ ನಂಬಿ ಪ್ರೇಮದ ಬಲೆಗೆ ಬಿದ್ದಿದ್ದಳು. ಫೇಸ್ಬುಕ್ ಮೆಸೆಂಜರ್ನಲ್ಲಿ ಚಾಟಿಂಗ್, ದೂರವಾಣಿ ಕರೆಯಲ್ಲೂ ಇಬ್ಬರೂ ಮಾತನಾಡುತ್ತಿದ್ದರು. ಮಗಳ ಪ್ರೇಮ ಪ್ರಕರಣ ತಾಯಿಗೆ ಗೊತ್ತಾಗಿದ್ದು, ಮನೆಯವರ ಮಾತಿಗೆ ಎದುರಾಡಿದ್ದ ಹುಡುಗಿ, ಮದುವೆಯಾದರೆ ಆತನನ್ನೇ ಎಂದು ಹೇಳಿ ರಂಪ ಮಾಡಿದ್ದಳು. ಕೊನೆಗೆ ಹುಡುಗಿಯ ರಂಪಾಟದಿಂದ ಬೇಸತ್ತ ಮನೆಮಂದಿ ಬಂಟ್ವಾಳದ ಮಹಿಳಾ ವಕೀಲರೊಬ್ಬರ ಬಳಿ ಸಲಹೆ ಕೇಳಿದ್ದರು. ಪ್ರೇಮಿಯ ಮೊಬೈಲ್ ನಂಬರ್ ಆಧರಿಸಿ ಪ್ರದೀಪ್ ಅನ್ನುವ ಹುಡುಗ ಯಾರು ಅನ್ನೋದ್ರ ಬಗ್ಗೆ ಪೊಲೀಸರು ಟ್ರೇಸ್ ಮಾಡಿದ್ದರು. ಚೆಕ್ ಮಾಡಿದಾಗ, ಕುಂದಾಪುರದ ಶಂಕರನಾರಾಯಣ ಎಂಬಲ್ಲಿಂದ ಫೋನ್ ಬರುತ್ತಿರುವುದು ತಿಳಿದುಬಂದಿತ್ತು. ಕೊನೆಗೆ ಅಲ್ಲಿನ ಪೊಲೀಸರು ಮತ್ತು ವಿಟ್ಲ ಪೊಲೀಸರ ಸಹಾಯದಿಂದ ಮಹಿಳಾ ವಕೀಲೆ ಶೈಲಜಾ ರಾಜೇಶ್ ನೇರವಾಗಿ ಪ್ರದೀಪ್ ಅನ್ನೋ ಹುಡುಗನ ಮನೆಗೆ ಎಂಟ್ರಿ ಕೊಟ್ಟಿದ್ದರು. ಪೊಲೀಸ್ ಮತ್ತು ವಕೀಲೆಯನ್ನು ನೋಡಿದಾಗಲೇ ಆ ಮನೆಯಲ್ಲಿದ್ದ ವ್ಯಕ್ತಿ ಶಾಕ್ ಆಗಿದ್ದ. ಇಲ್ಲಿಂದ ಹುಡುಗನ ನೋಡಲು ಹೋಗಿದ್ದವರು ಕೂಡ ಶಾಕ್ ಆಗಿದ್ದರು. ಜ್ಯೋತಿ ಎಂಬ ಹೆಸರಿನ ಮಂಗಳಮುಖಿಯಾಗಿದ್ದ ಆ ವ್ಯಕ್ತಿ ಫೇಸ್ಬುಕ್ ನಲ್ಲಿ ತನ್ನ ಹೆಸರನ್ನು ಪ್ರದೀಪ್ ಎಂದು ತೋರಿಸಿ ಯುವತಿಗೆ ಜಾಲ ಬೀಸಿದ್ದಳು. ಇದೀಗ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳಮುಖಿಯನ್ನು ಬಂಧಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post