• About us
  • Contact us
  • Disclaimer
Wednesday, November 5, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ರೋಟರಿ ಜಿಲ್ಲೆ 3181ರ 2022-2023 ವರ್ಷದ ಜಿಲ್ಲಾ ಅಧಿವೇಶನ ” ಪರಿಕಲ್ಪನೆ “

Coastal Times by Coastal Times
January 25, 2023
in ಕರಾವಳಿ
ರೋಟರಿ ಜಿಲ್ಲೆ 3181ರ 2022-2023 ವರ್ಷದ ಜಿಲ್ಲಾ ಅಧಿವೇಶನ ” ಪರಿಕಲ್ಪನೆ “
24
VIEWS
WhatsappTelegramShare on FacebookShare on Twitter

ಮಂಗಳೂರು:  ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ವಿಶ್ವದಲ್ಲೇ ಅಗ್ರಮಾನ್ಯ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ಸುಮಾರು 117 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. 35000ಕ್ಕೂ ಹೆಚ್ಚು ಕ್ಲಬ್ಬುಗಳು ಮತ್ತು 12 ಲಕ್ಷಕ್ಕಿಂತಲೂ ಹೆಚ್ಚಿನ ಸದಸ್ಯರನ್ನು ಹೊಂದಿರುವ ಸಂಸ್ಥೆ. ಇದರ ಅಂಗ ಸಂಸ್ಥೆಗಳನ್ನು ರೋಟ‌ಾಕ್ಸ್‌, ಇಂಟಲ್ಯಾಕ್ಸ್ ಹಾಗೂ ರೋಟರಿ ಕಮ್ಯೂನಿಟಿ ಕೊರ್ಲ್ಸ್ (ಗ್ರಾಮೀಣ ದಳ) ಕಾರ್ಯಾನಿರ್ವಹಿಸುತ್ತಿವೆ. 

ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಪೊಲೀಯೊ ಮಹಾಮಾರಿಯನ್ನು ಜಗತ್ತಿನಿಂದ ನಿರ್ಮೂಲನೆ ಮಾಡುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಅಂತಹ ರೋಟರಿ ಸಂಸ್ಥೆಯ ರೋಟರಿ ಜಿಲ್ಲೆ 3181ರ ನಾಯಕರಾಗಿ ಎನ್ . ಪ್ರಕಾಶ ಕಾರಂತರವರು ಈ ಜಿಲ್ಲೆಯ ಚುಕ್ಕಾಣಿ ಹಿಡಿದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.

54 ವರ್ಷಗಳ ಇತಿಹಾಸವುಳ್ಳ ರೋಟರಿ ಬಂಟ್ವಾಳ ಕ್ಲಬ್ಬಿಗೆ ಪ್ರಥಮ ಬಾರಿಗೆ ಜಿಲ್ಲೆಯ ನೇತೃತ್ವವನ್ನು ವಹಿಸುವ ಸುವರ್ಣಾವಕಾಶ ಒದಗಿ ಬಂದಿರುವುದು ನಮ್ಮ ಪುಣ್ಯವೇ ಸರಿ. ಪ್ರತೀ ವರ್ಷದ ಹಾಗೆ ಈ ಸಲ ಜಿಲ್ಲಾ ಅಧಿವೇಶನ “ಪರಿಕಲ್ಪನೆ” ಎಂಬ ಹೆಸರಿನಲ್ಲಿ ಬಂಟ್ವಾಳ ಕ್ಲಬ್ಬಿನ ಮಾಜಿ ಅಧ್ಯಕ್ಷ ಬಿ.ಸಂಜೀವ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಇದೇ ಜನವರಿ 27, 28, 29ರಂದು ನೇತ್ರಾವತಿ ನದಿ ದಡದಲ್ಲಿ ಇರುವ ರಮಣೀಯ ಪ್ರಖ್ಯಾತ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ. ಈ ಜಿಲ್ಲಾ ಅಧಿವೇಶನದಲ್ಲಿ 4 ಕಂದಾಯ ಜಿಲ್ಲೆಗಳಾದ ದಕ್ಷಿಣಕನ್ನಡ, ಕೊಡಗು, ಮೈಸೂರು ಮತ್ತು ಚಾಮಾರಾಜನಗರದ ವಿವಿಧ ಕ್ಲಬ್ಬುಗಳಿಂದ ಸುಮಾರು 2,000 ರೋಟರಿ ಸದಸ್ಯರು ಮತ್ತು ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ.

ರೋಟರಿಯ ಧೈಯ, ಉದ್ದೇಶಗಳಾದ ಗೆಳೆತನ, ಬಾಂದವ್ಯ, ಒಡನಾಟದ ನವೀಕರಣ ಅಲ್ಲದೆ ನಮ್ಮ ಬೇರೆ ಬೇರೆ ಆಹಾರ ಕ್ರಮಗಳ ಸವಿ ಉಣಬಡಿಸುವುದರೊಂದಿಗೆ ಸಾ೦ಸ್ಕೃತಿಕ ಅನಾವರಣ ಹಾಗೂ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ತೋರ್ಪಡಿಕೆ, ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ನಮ್ಮ ಜ್ಞಾನ ಉದ್ದೀಪನಗೊಳಿಸುವುದು.

ಈ ಸಂದರ್ಭದಲ್ಲಿ ಅಧಿವೇಶನವನ್ನು ಅಂತರಾಷ್ಟ್ರೀಯ ರೋಟರಿ ಮಾಜಿ ಅಧ್ಯಕ್ಷರಾದ ಕೆ.ಆರ್. ರವೀಂದ್ರನ್ ಉದ್ಘಾಟಿಸಲಿರುವರು. ಹಾಗೆಯೇ ಅಂತರಾಷ್ಟ್ರೀಯ ರೋಟರಿ ನಿರ್ದೇಶಕರಾದ ಟಿ.ಎನ್ ಸುಬ್ರಮಣಿಯನ್ ಮತ್ತು ಅಂತರಾಷ್ಟ್ರೀಯ ಅಧ್ಯಕ್ಷರ ಪ್ರತಿನಿಧಿಯಾಗಿ ರೋ, ಪಿ.ಡಿ.ಜಿ ರಶ್ಮಿ ಕುಲಕರ್ಣಿಯವರು ಭಾಗವಹಿಸಲಿರುವರು.

ಮೂರು ದಿನ ನಡೆಯುವ ಜಿಲ್ಲಾ ಅಧಿವೇಶನದಲ್ಲಿ ಅಥಿತಿಗಳಾಗಿ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ, ಬಿಗ್ರೇಡಿಯರ್ ಐ.ಎನ್ ರೈ, ಕರ್ನಾಟಕ ಸರಕಾರದ ಮಾಜಿ ಅಡಿಶನಲ್ ಅಡ್ವಕೇಟ್ ಜನರಲ್ ಸಂದೇಶ್ ಚೌಟ, ಖ್ಯಾಶ್ ಚಿ೦ಸಕಿ ಶ್ರೀಮತಿ ವೀಣಾ ಬನ್ನಂಜೆ, ಲೇಖಕ ಗುರುರಾಜ ಕರ್ಜಗಿ, 330. ಸತೀಶ್ ಉಪಕುಲಪತಿ ನಿಟ್ಟೆ ಯುನಿವಟಿ, ಶ್ರೀನಿವಾಸ್ ವಿದ್ಯಾ ಸಂಸ್ಥೆಯ ಉಪ ಕುಲಪತಿಗಳಾದ ಶ್ರೀನಿವಾಸ್‌ರವರು, ಅಂತರಾಷ್ಟ್ರೀಯ ಕಾರ್ಪೋರೇಟ್ ತರಬೇತುದಾರ ಸವೀನ್ ಹೆಗ್ಡೆ ಹಾಗೂ ಹಾಸ್ಯ ಕಲಾವಿದ ವಿಠಲ್‌ ನಾಯ್ಕರವರು ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ರೋಟರಿ ಇತರ ಜಿಲ್ಲೆಗಳ ನಾಯಕರುಗಳಾದ ಪಿಡಿಜಿ ಅಭಿನಂದನ್ ಶೆಟ್ಟಿ, ಪಿಡಿ ಸುನೀಲ್‌ ಜಕಾರಿಯಾ ಮತ್ತು ಮೋಹನ್ ಕೆ.ವಿ ಮತ್ತು ಜಿಲ್ಲಾ ಸಮ್ಮೇಳನದ ಮುಖ್ಯ ಸಲಹೆಗಾರರಾದ ಪಿಡಿಜಿ, ಕೃಷ್ಣ ಶೆಟ್ಟಿ, ಜಿಲ್ಲಾ ಸಲಹೆಗಾರರಾದ ಪಿಡಿಜಿ ಸುರೇಶ್ ಚೆ೦ಗಪ್ಪ, ಜಿಲ್ಲಾ ಕೌನ್ಸಿಲರ್ ಪಿಡಿಜಿ ರಂಗನಾಥ್ ಭಟ್, ಜಿಲ್ಲಾ ತರಬೇತುದಾರ ಪಿಡಿಜಿ ರವೀಂದ್ರ ಭಟ್, ಜಿಲ್ಲಾ ಸಹತರಬೇತುದಾರ ರೂ. ಶೇಖರ್ ಶೆಟ್ಟಿ, ನಿಯೋಜಿತ ಜಿಲ್ಲಾ ಗವರ್ನರ್ ಹೆಚ್. ಆರ್. ಕೇಶವ್, ನಾಮನಿರ್ದೇಶಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಇನ್ನಿತರ ನಾಯಕರ ಪಾಲ್ಗೊಳ್ಳಲಿರುವರು.

ಉಪಸ್ಥಿತರಿರುವವರು: ಎನ್ ಪ್ರಕಾಶ್ ಕಾರಂತ್, ಜಿಲ್ಲಾ ಗವರ್ನರ್, ಬಿ. ಸಂಜೀವ ಪೂಜಾರಿ, ಜಿಲ್ಲಾ ಸಮ್ಮೇಳನ ಅಧ್ಯಕ್ಷರು , ಬಿ. ರಿತೇಶ್ ಬಾಳಿಗ, ಜಿಲ್ಲಾ ಸಮ್ಮೇಳನ ಕಾರ್ಯದರ್ಶಿ . ಪಿಡಿಜಿ. ಕೃಷ್ಣ ಶೆಟ್ಟಿ, ಜಿಲ್ಲಾ ಸಮ್ಮೇಳನ ಮುಖ್ಯ ಸಲಹೆಗಾರರು, ರೊ. ನಾರಾಯಣ ಪಿ.ಎಮ್, ಜಿಲ್ಲಾ ಸಮ್ಮೇಳನ ಸಲಹೆಗಾರರು , ರೊ. ನಾರಾಯಣ ಹೆಗ್ಡೆ, ಜಿಲ್ಲಾ ಆಡಳಿತ, ಕಾರ್ಯದರ್ಶಿ .

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ರಾಮ– ಲಕ್ಷ್ಮಣ ಕಂಬಳ ಫಲಿತಾಂಶ ; ಸತತ ಆರನೇ ವರ್ಷವೂ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಮೆಡಲ್ ಸಾಧನೆ

Next Post

Padma Awards 2023; ಎಸ್ಸೆಂ ಕೃಷ್ಣ ಪದ್ಮವಿಭೂಷಣ, ಎಸ್.ಎಲ್. ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ

Related Posts

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ
ಕರಾವಳಿ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
25
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ
ಕರಾವಳಿ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
25
Next Post
Padma Awards 2023; ಎಸ್ಸೆಂ ಕೃಷ್ಣ ಪದ್ಮವಿಭೂಷಣ, ಎಸ್.ಎಲ್. ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ

Padma Awards 2023; ಎಸ್ಸೆಂ ಕೃಷ್ಣ ಪದ್ಮವಿಭೂಷಣ, ಎಸ್.ಎಲ್. ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ

Discussion about this post

Recent News

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
25
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
25
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್

World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್

November 3, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d