• About us
  • Contact us
  • Disclaimer
Saturday, July 12, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪುತ್ತೂರು; ನಾಪತ್ತೆಯಾಗಿದ್ದ ಮೈಸೂರಿನ ಫೋಟೊಗ್ರಾಫರ್ ಕೊಲೆ, ನಾಲ್ವರು ಆರೋಪಿಗಳ ಬಂಧನ

Coastal Times by Coastal Times
November 25, 2021
in ಕ್ರೈಮ್ ನ್ಯೂಸ್
ಪುತ್ತೂರು; ನಾಪತ್ತೆಯಾಗಿದ್ದ ಮೈಸೂರಿನ ಫೋಟೊಗ್ರಾಫರ್ ಕೊಲೆ, ನಾಲ್ವರು ಆರೋಪಿಗಳ ಬಂಧನ
35
VIEWS
WhatsappTelegramShare on FacebookShare on Twitter

ಪುತ್ತೂರು, ನ.24: ಕಳೆದ ಏಳು ದಿನಗಳಿಂದ ನಾಪತ್ತೆಯಾಗಿದ್ದ ಮೈಸೂರಿನಲ್ಲಿ ಫೋಟೊಗ್ರಾಫರ್ ಆಗಿರುವ ಮೂಲತಃ ಮಂಗಳೂರು ನಿವಾಸಿ ಜಗದೀಶ್ (58) ಅವರ ಮೃತದೇಹ ಬುಧವಾರ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿತ್ತಡಿ ಸಮೀಪದ ಮುಗುಳಿ ಎಂಬಲ್ಲಿನ ಸರಕಾರಿ ರಕ್ಷಿತಾರಣ್ಯದಲ್ಲಿ ಪತ್ತೆಯಾಗಿದೆ.

ಅವರನ್ನು ಸಂಬಂಧಿಕರೇ ಕೊಲೆ ಮಾಡಿ ಹೂತು ಹಾಕಿದ್ದರು ಎಂದು ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ಮಾವ ಬಾಲಕೃಷ್ಣ ರೈ, ಆತನ ಪುತ್ರ ಪ್ರಶಾಂತ್ ರೈ, ಪತ್ನಿ ಜಯಲಕ್ಷ್ಮೀ ಮತ್ತು ಪಕ್ಕದ ಮನೆಯ ನಿವಾಸಿ ಜೀವನ್ ಪ್ರಸಾದ್ ಬಂಧಿತ ಆರೋಪಿಗಳು.

ಜಗದೀಶ (52) ಕೊಲೆಯಾದವರು.

ಘಟನೆ ವಿವರ: ಮೂಲತಃ ಮಂಗಳೂರು ನಿವಾಸಿಯಾಗಿರುವ ಜಗದೀಶ್ ಮೈಸೂರಿನಲ್ಲಿ ಫೋಟೊಗ್ರಾಫರ್ ಆಗಿದ್ದರು. ಅವರು 3 ವರ್ಷಗಳ ಹಿಂದೆ ಕುಂಜೂರು ಪಂಜದಲ್ಲಿ ಸುಮಾರು 2 ಎಕರೆ ಜಮೀನು ಖರೀದಿಸಿದ್ದರು. ಆಗಾಗ ಇಲ್ಲಿಗೆ ಆಗಮಿಸಿ ಕೃಷಿಯನ್ನು ನೋಡಿಕೊಂಡು ಹೋಗುತ್ತಿದ್ದರು. ಅದೇ ರೀತಿ ನ.18ರಂದು ಜಮೀನು ನೋಡಿ ಹೋಗಲೆಂದು ಮೈಸೂರಿನಿಂದ ಪುತ್ತೂರಿಗೆ ಆಗಮಿಸಿದ್ದರು. ಆಂದೇ ಹಿಂದಿರುಗಿ ಬರುವುದಾಗಿ ಮನೆಯವರಿಗೆ ತಿಳಿಸಿದ್ದ ಅವರು ಮನೆಗೆ ಹಿಂದಿರುಗಿರಲಿಲ್ಲ. ಈ ಬಗ್ಗೆ ಜಗದೀಶ್‌ರ ಪತ್ನಿ ಕುಟುಂಬಸ್ಥರಿಗೆ ತಿಳಿಸಿದ್ದು, ಮಂಗಳೂರಿನಲ್ಲಿ ವಾಸ್ತವ್ಯವಿರುವ ಜಗದೀಶ್‌ರ ಸಹೋದರ ಶಶಿಧರ್ ಅವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಜಗದೀಶ್‌ರ ನಾಪತ್ತೆಗೆ ಸಂಬಂಧಿಸಿ ಶಶಿಧರ್ ಅವರು ತಮ್ಮ ಮಾವ ಮತ್ತು ಅವರ ಪುತ್ರನ ಬಗ್ಗೆ ಶಂಕೆ ವ್ಯಕ್ತಪಡಿಸಿ ಮತ್ತೊಂದು ದೂರು ನೀಡಿದ್ದರು. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಜಗದೀಶ್ ರ ಕೊಲೆ ನಡೆಸಿದ ಪ್ರಕರಣ ಬಯಲಾಗಿದೆ.

ಆರೋಪಿಗಳಾದ ಜಗದೀಶ್‌ರ ಮಾವ ಬಾಲಕೃಷ್ಣ ರೈ, ಆತನ ಪುತ್ರ ಪ್ರಶಾಂತ್ ರೈ, ಪತ್ನಿ ಜಯಲಕ್ಷ್ಮೀ ಮತ್ತು ಪಕ್ಕದ ಮನೆಯ ನಿವಾಸಿ ಜೀವನ್ ಪ್ರಸಾದ್ ಎಂಬವರು ಸೇರಿಕೊಂಡು ಜಗದೀಶ್‌ರನ್ನು ಕೊಲೆಗೈದು ಮೃತದೇಹವನ್ನು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿತ್ತಡಿ ಸಮೀಪದ ಮುಗುಳಿ ಎಂಬಲ್ಲಿನ ಸರಕಾರಿ ರಕ್ಷಿತಾರಣ್ಯದಲ್ಲಿ ಹೂತು ಹಾಕಿದ್ದರೆನ್ನಲಾಗಿದ್ದು, ಅದನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ, ಪುತ್ತೂರು ತಹಶೀಲ್ದಾರ್, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸರ್ಕಲ್ ಇನ್‌ಸ್ಪೆಕ್ಟರ್ ಮತ್ತು ಬೆರಳಚ್ಚು ತಜ್ಞರು ತೆರಳಿ ಸ್ಥಳ ಮಹಜರು ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Share this:

  • Facebook
  • X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು : 64ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆ ಪ್ರತಿನಿಧಿಸಲು ಎಂಟು ಶೂಟರ್‌ಗಳು

Next Post

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ : ಆರೋಪಿ ವಕೀಲ ರಾಜೇಶ್ ಭಟ್ ಬಂಧನಕ್ಕೆ ಎನ್‌ಎಸ್‌ಯುಐ ಮನವಿ

Related Posts

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ
ಕ್ರೈಮ್ ನ್ಯೂಸ್

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

July 12, 2025
25
58 ಮಂದಿ ಬಲಿ ಪಡೆದಿದ್ದ ಕೊಯಮತ್ತೂರು ಬಾಂಬ್ ಸ್ಫೋಟದ ರೂವಾರಿ ‘ಟೈಲರ್ ರಾಜಾ’ 27 ವರ್ಷಗಳ ಬಳಿಕ ಕರ್ನಾಟಕದಲ್ಲಿ ಅರೆಸ್ಟ್!
ಕ್ರೈಮ್ ನ್ಯೂಸ್

58 ಮಂದಿ ಬಲಿ ಪಡೆದಿದ್ದ ಕೊಯಮತ್ತೂರು ಬಾಂಬ್ ಸ್ಫೋಟದ ರೂವಾರಿ ‘ಟೈಲರ್ ರಾಜಾ’ 27 ವರ್ಷಗಳ ಬಳಿಕ ಕರ್ನಾಟಕದಲ್ಲಿ ಅರೆಸ್ಟ್!

July 11, 2025
112
Next Post
ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ : ಆರೋಪಿ ವಕೀಲ ರಾಜೇಶ್ ಭಟ್ ಬಂಧನಕ್ಕೆ ಎನ್‌ಎಸ್‌ಯುಐ ಮನವಿ

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ : ಆರೋಪಿ ವಕೀಲ ರಾಜೇಶ್ ಭಟ್ ಬಂಧನಕ್ಕೆ ಎನ್‌ಎಸ್‌ಯುಐ ಮನವಿ

Discussion about this post

Recent News

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

July 12, 2025
25
ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

July 12, 2025
32
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

ಮಂಗಳೂರಿಗೆ ಡ್ರಗ್ಸ್ ಪೂರೈಕೆ ಜಾಲ ; ಡಾಕ್ಟರೇ ಡ್ರಗ್ ಪೆಡ್ಲರ್! ಬೀದರ್ ಮೂಲದ ವೈದ್ಯನ ಬಂಧನ

July 12, 2025
ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

ಅಹಮದಾಬಾದ್​ ವಿಮಾನ ದುರಂತ: ಇಂಜಿನ್​ಗೆ ಇಂಧನ ಪೂರೈಕೆ ಆಗದಿರುವುದೇ ವಿಮಾನ ದುರಂತಕ್ಕೆ ಕಾರಣ: ತನಿಖಾ ವರದಿಯಲ್ಲಿ ಆಘಾತಕಾರಿ ಅಂಶ ಬಯಲು

July 12, 2025
ಸುಳ್ಯ: ಜ್ವರದ ಚಿಕಿತ್ಸೆಗೆಂದು ಬಂದ ಬಾಲಕಿಗೆ ಗರ್ಭಿಣಿ ಎಂದು ವರದಿ ಆರೋಪ!: ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರ ದೂರು

ಸುಳ್ಯ: ಜ್ವರದ ಚಿಕಿತ್ಸೆಗೆಂದು ಬಂದ ಬಾಲಕಿಗೆ ಗರ್ಭಿಣಿ ಎಂದು ವರದಿ ಆರೋಪ!: ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರ ದೂರು

July 12, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d