• About us
  • Contact us
  • Disclaimer
Wednesday, February 4, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಬಡ್ಡಿ ವಿಶ್ವಕಪ್: ಸತತ 2ನೇ ಬಾರಿ ಕಬಡ್ಡಿಯಲ್ಲಿ ವಿಶ್ವಕಪ್ ಗೆದ್ದ ಭಾರತದ ವನಿತೆಯರು

Coastal Times by Coastal Times
November 25, 2025
in ಕ್ರೀಡಾ ಸುದ್ದಿ
ಕಬಡ್ಡಿ ವಿಶ್ವಕಪ್: ಸತತ 2ನೇ ಬಾರಿ ಕಬಡ್ಡಿಯಲ್ಲಿ ವಿಶ್ವಕಪ್ ಗೆದ್ದ ಭಾರತದ ವನಿತೆಯರು
36
VIEWS
WhatsappTelegramShare on FacebookShare on Twitter

ಬಾಂಗ್ಲಾದೇಶ: ಸೋಮವಾರ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 2025ರ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆ ಮೂಲಕ ಭಾರತೀಯ ನಾರಿಯರು ಸತತ ಎರಡನೇ ಬಾರಿಗೆ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ರೋಚಕ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 35-28 ಅಂಕಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.

2012ರಲ್ಲಿ ಬಿಹಾರದಲ್ಲಿ ಕೊನೆಯ ಬಾರಿ ವಿಶ್ವಕಪ್ ಪಂದ್ಯ ನಡೆದಿತ್ತು. ಆ ಬಳಿಕ 13 ವರ್ಷಗಳ ನಂತರ ಎರಡನೇ ಆವೃತ್ತಿಯ ಮಹಿಳೆಯರ ವಿಶ್ವಕಪ್ ಟೂರ್ನಿ ಆಯೋಜಿಸಲಾಗಿತ್ತು. ಮೊದಲ ಆವೃತ್ತಿಯಲ್ಲಿ ಕೂಡ ಭಾರತ ತಂಡ ಚಾಂಪಿಯನ್ ಆಗಿತ್ತು.

ಸತತ 12 ಗೆಲುವು: ಈ ಎರಡೂ ಕೂಟಗಳ 12 ಪಂದ್ಯಗಳನ್ನು (6+6) ಗೆಲ್ಲುವ ಮೂಲಕ ಭಾರತದ ವನಿತೆಯರು ವಿಶ್ವಕಪ್ ಕಬಡ್ಡಿಯಲ್ಲಿ ಅಜೇಯ ಅಭಿಯಾನ ಕಾಯ್ದುಕೊಂಡರು. ಚೈನೀಸ್ ತೈಪೆ ವಿರುದ್ಧ ಆಡಿದ ಮೂರೂ ಪಂದ್ಯಗಳನ್ನು ಭಾರತ ಜಯಿಸಿತು. ಇದರಲ್ಲಿ ಒಂದು ಗೆಲುವು 2023ರ ಏಷ್ಯನ್ ಗೇಮ್ಸ್ ಫೈನಲ್ ನಲ್ಲಿ ಒಲಿದಿತ್ತು. ಅಂತರ 26 25.

ಬಲವಾದ ಡಿಫೆನ್ಸ್ ಮತ್ತು ಪರಿಣಾಮಕಾರಿ ರೈಡಿಂಗ್ ಕಾಂಬಿನೇಶನ್ ಮೂಲಕ ಭಾರತ ಹೋರಾಟ ಆರಂಭಿಸಿತು. ಮಧ್ಯಾಂತರದ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಸಂಜುದೇವಿ ಮೊದಲ ಅಂಕ ತಂದಿತ್ತರು. ಆರಂಭದಲ್ಲಿ ಚೈನೀಸ್ ತೈಪೆ ಆಟ ಬಿರುಸಿನಿಂದ ಕೂಡಿತ್ತು. 13 12, 17 14… ಹೀಗೆ ಪೈಪೋಟಿ ಸಾಗಿತು. ವಿರಾಮದ ವೇಳೆ ಭಾರತ 20 16 ಲೀಡ್ ಗಳಿಸಿತ್ತು.

ಪಂದ್ಯದ ಮುಕ್ತಾಯಕ್ಕೆ ಇನ್ನೇನು 4 ನಿಮಿಷ ಇರುವಾಗ, ಚೈನೀಸ್ ತೈಪೆ ಸೂಪರ್ ಟ್ಯಾಕಲ್ ಮೂಲಕ ಅಂತರವನ್ನು 30 26ಕ್ಕೆ ತಂದು ಭರವಸೆ ಮೂಡಿಸಿತು. ಆದರೆ ಎದುರಾಳಿಯನ್ನು ಆಲೌಟ್ ಮಾಡುವ ಮೂಲಕ ಭಾರತ ಮೇಲುಗೈ ಸಾಧಿಸಿತು.

ನಾಯಕಿ ರೀತು ನೇಗಿ, ಉಪನಾಯಕಿ ಪುಷ್ಪಾ ರಾಣಾ, ಚಂಪಾ ಠಾಕೂರ್, ಭಾವನಾ ಠಾಕೂರ್, ಸಾಕ್ಷಿ ಶರ್ಮ ಅವರೆಲ್ಲ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದರು. ಸುರತ್ಕಲ್ ನ ಇಡ್ಯಾ ನಿವಾಸಿ ಧನಲಕ್ಷ್ಮೀ ಪೂಜಾರಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಏಕೈಕ ಆಟಗಾರ್ತಿ ಆಗಿದ್ದರು. ಭಾರತದ ಗೆಲುವಿನಲ್ಲಿ ಪ್ರಧಾನ ಕೋಚ್ ತೇಜಸ್ವಿನಿ, ಸಹಾಯಕ ಕೋಚ್ ಪ್ರಿಯಾಂಕಾ ಅವರ ಪಾತ್ರ ನಿರ್ಣಾಯಕವಾಗಿತ್ತು.

ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ : ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಗೆದ್ದ ಖುಷಿಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ‘2025ರ ಕಬಡ್ಡಿ ವಿಶ್ವಕಪ್ ಗೆಲ್ಲುವ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ ನಮ್ಮ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಅಭಿನಂದನೆಗಳು. ಅವರು ಅತ್ಯುತ್ತಮ ಕ್ರೀಡಾ ಸಮರ್ಪಣಾ ಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಈ ಗೆಲುವು ಅಸಂಖ್ಯಾತ ಯುವಕರಿಗೆ ಸ್ಫೂರ್ತಿ’ ಎಂದಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಧರ್ಮಸ್ಥಳ ಬುರುಡೆ ಕೇಸ್​: ಮಾಸ್ಕ್​​ ಮ್ಯಾನ್​​ ಚಿನ್ನಯ್ಯಗೆ ಷರತ್ತಿನ ಜಾಮೀನು

Next Post

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಆಗಮನ ನ.28 ರಂದು ಉಡುಪಿ ನಗರದ ಸುತ್ತ ಮುತ್ತಲ ಶಾಲೆಗಳಿಗೆ ರಜೆ

Related Posts

ಮಂಗಳೂರು: ಡಿಸೆಂಬರ್ 19ರಿಂದ 22ರವರೆಗೆ ಯೆಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ, 5ನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ – 2025
ಕರಾವಳಿ

ಮಂಗಳೂರು: ಡಿಸೆಂಬರ್ 19ರಿಂದ 22ರವರೆಗೆ ಯೆಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ, 5ನೇ ರಾಷ್ಟ್ರೀಯ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ – 2025

December 18, 2025
32
ವಿಶ್ವಕಪ್​ ಗೆದ್ದ ಪ್ರತಿಯೊಬ್ಬ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಸಿಕ್ತು ಟಾಟಾ ಸಿಯೆರಾ ಎಸ್‌ಯುವಿ ಗಿಫ್ಟ್!
ಕ್ರೀಡಾ ಸುದ್ದಿ

ವಿಶ್ವಕಪ್​ ಗೆದ್ದ ಪ್ರತಿಯೊಬ್ಬ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ ಸಿಕ್ತು ಟಾಟಾ ಸಿಯೆರಾ ಎಸ್‌ಯುವಿ ಗಿಫ್ಟ್!

December 18, 2025
34
Next Post
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಆಗಮನ ನ.28 ರಂದು ಉಡುಪಿ ನಗರದ ಸುತ್ತ ಮುತ್ತಲ ಶಾಲೆಗಳಿಗೆ ರಜೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಆಗಮನ ನ.28 ರಂದು ಉಡುಪಿ ನಗರದ ಸುತ್ತ ಮುತ್ತಲ ಶಾಲೆಗಳಿಗೆ ರಜೆ

Discussion about this post

Recent News

ತೀವ್ರ ರಕ್ತದೊತ್ತಡ ; ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಸಾವು

ತೀವ್ರ ರಕ್ತದೊತ್ತಡ ; ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಸಾವು

February 3, 2026
65
ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ, ಮಲ್ಪಿಪ್ಲೆಕ್ಸ್‌ನಲ್ಲಿ ಕೇವಲ 99 ರೂಪಾಯಿ ಟಿಕೇಟು!

ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ, ಮಲ್ಪಿಪ್ಲೆಕ್ಸ್‌ನಲ್ಲಿ ಕೇವಲ 99 ರೂಪಾಯಿ ಟಿಕೇಟು!

February 3, 2026
32
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ತೀವ್ರ ರಕ್ತದೊತ್ತಡ ; ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಸಾವು

ತೀವ್ರ ರಕ್ತದೊತ್ತಡ ; ಮಂಗಳೂರು ಸಿಎಆರ್ ಹೆಡ್ ಕಾನ್ಸ್ ಟೇಬಲ್ ಕುಸಿದು ಬಿದ್ದು ಸಾವು

February 3, 2026
ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ, ಮಲ್ಪಿಪ್ಲೆಕ್ಸ್‌ನಲ್ಲಿ ಕೇವಲ 99 ರೂಪಾಯಿ ಟಿಕೇಟು!

ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ, ಮಲ್ಪಿಪ್ಲೆಕ್ಸ್‌ನಲ್ಲಿ ಕೇವಲ 99 ರೂಪಾಯಿ ಟಿಕೇಟು!

February 3, 2026
ಮಂಗಳೂರು ಅಡ್ಯಾರ್​​​​ ಕಣ್ಣೂರು ನದಿ ಮಧ್ಯದ ನಡುಪಳ್ಳಿ ದರ್ಗಾದಲ್ಲಿ ಉರುಸ್​​: ಭಕ್ತರಿಗಾಗಿ 52 ದೋಣಿಗಳನ್ನು ಜೋಡಿಸಿ ತಾತ್ಕಾಲಿಕ ಸೇತುವೆ ನಿರ್ಮಾಣ

ಮಂಗಳೂರು ಅಡ್ಯಾರ್​​​​ ಕಣ್ಣೂರು ನದಿ ಮಧ್ಯದ ನಡುಪಳ್ಳಿ ದರ್ಗಾದಲ್ಲಿ ಉರುಸ್​​: ಭಕ್ತರಿಗಾಗಿ 52 ದೋಣಿಗಳನ್ನು ಜೋಡಿಸಿ ತಾತ್ಕಾಲಿಕ ಸೇತುವೆ ನಿರ್ಮಾಣ

February 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d