• About us
  • Contact us
  • Disclaimer
Thursday, September 18, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಗಂಜಿಮಠ: ‘ ಝಾರಾ ಕನ್ವೆಂಶನ್ ಸೆಂಟರ್ ’ ಉದ್ಘಾಟನೆ

Coastal Times by Coastal Times
December 26, 2021
in ಕರಾವಳಿ
ಗಂಜಿಮಠ: ‘ ಝಾರಾ ಕನ್ವೆಂಶನ್ ಸೆಂಟರ್ ’ ಉದ್ಘಾಟನೆ
267
VIEWS
WhatsappTelegramShare on FacebookShare on Twitter

ಮಂಗಳೂರು, ಡಿ.26: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗಂಜಿಮಠದಲ್ಲಿ ಝಾರಾ ಕನ್ವೆಂಶನ್ ಸೆಂಟರ್ ಸಭಾಂಗಣವು ರವಿವಾರ ಉದ್ಘಾಟನೆಗೊಂಡಿತು.

ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮತ್ತು ದ.ಕ.ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸಭಾಂಗಣಗಳನ್ನು ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಉದ್ಯಮಿ ಝಕರಿಯಾ ಜೋಕಟ್ಟೆ ಸಾರ್ವಜನಿಕರ ಹಿತದೃಷ್ಟಿಯಿಂದ ಜನನಿಬಿಡ ಪ್ರದೇಶದಲ್ಲಿ ಈ ಸಭಾಂಗಣವನ್ನು ನಿರ್ಮಿಸಿದ್ದಾರೆ. ಇದನ್ನು ಸರ್ವರೂ ಸದುಪಯೋಗಪಡಿಸಿಕೊಳ್ಳಬೇಕು. ಇದರ ಸ್ಥಾಪಕ ಮತ್ತು ಈ ಸಭಾಂಗಣವನ್ನು ಮುನ್ನಡೆಸುವವರಿಗೆ ಅಲ್ಲಾಹನು ಸಮೃದ್ಧಿ ನೀಡಲಿ ಎಂದರು.

ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ ಝಕರಿಯಾ ಜೋಕಟ್ಟೆ ದ.ಕ.ಜಿಲ್ಲೆಯಲ್ಲಿ ಇಂದು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಲಾದ ಈ ಸುಸಜ್ಜಿತ ಸಭಾಂಗಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ನೂತನ ಸದಸ್ಯ ಮಂಜುನಾಥ್ ಭಂಡಾರಿ ಝಾರಾ ಕನ್‌ವೆನ್ಶನ್‌ನ ಲಾಂಛನ ಅನಾವರಣಗೊಳಿಸಿದರು.

ಶಾಸಕ ಯು.ಟಿ.ಖಾದರ್ ಹಾಲ್ ಬುಕ್ಕಿಂಗ್ ವ್ಯವಸ್ಥೆಯ ಪ್ರೊಫೈಲ್ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಝಾರಾ ಕನ್ವೆನ್ಶನ್ ಸೆಂಟರ್‌ನ ಅಧ್ಯಕ್ಷ ಬಿ. ಝಕರಿಯಾ ಜೋಕಟ್ಟೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಝಾರಾ ಕನ್ವೆನ್ಶನ್ ಸೆಂಟರ್‌ನ ನಿರ್ದೇಶಕರಾದ ಝಹೀರ್ ಝಕರಿಯಾ, ನಝೀರ್ ಝಕರಿಯಾ, ಝಾಹಿದ್ ಝಕರಿಯಾ, ಮತ್ತಿತರರು ಉಪಸ್ಥಿತರಿದ್ದರು.

ಅತಿಥಿಗಳಾಗಿ ರಾಜ್ಯ ವಕ್ಫ್ ಬೋರ್ಡ್‌ನ ಅಧ್ಯಕ್ಷ ಮೌಲಾನಾ ಶಾಫಿ ಸಅದಿ, ಡಾ.ಅಬ್ದುಲ್ ಹಕೀಂ ಅಝ್‌ಹರಿ, ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಪೊಂಪೈ ಚರ್ಚ್‌ನ ಧರ್ಮಗುರು ಫಾ. ಆ್ಯಂಟನಿ ಲೋಬೊ, ಮಾಜಿ ಸಚಿವರಾದ ಬಿ.ರಮನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯ್ದಿನ್ ಬಾವಾ, ಜೆ.ಆರ್.ಲೋಬೊ, ಎನ್‌ಆರ್‌ಐ ಫೋರಂನ ನಿಕಟಪೂರ್ವ ಅಧ್ಯಕ್ಷೆ ಡಾ. ಆರತಿ ಕೃಷ್ಣ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಬಿ.ಎಂ. ಮುಮ್ತಾಝ್ ಅಲಿ, ಅಬ್ದುಲ್ಲಾ ಮೋನು ಕತರ್, ಅಂತಾರಾಷ್ಟ್ರೀಯ ತರಬೇತುದಾರ ಮುನವ್ವರ್ ಝಮಾ, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ವೈಟ್‌ಸ್ಟೋನ್ ಡೆವೆಲಪರ್ಸ್‌ನ ಆಡಳಿತ ನಿರ್ದೇಶಕ ಬಿ.ಎಂ. ಶರೀಫ್, ಸೂರಲ್ಪಾಡಿ ಜುಮಾ ಮಸೀದಿಯ ಖತೀಬ್ ಮೌಲಾನಾ ಉಸ್ಮಾನ್ ದಾರಿಮಿ, ಗಂಜಿಮಠ ಗ್ರಾಪಂ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಸದಸ್ಯೆ ಅನಿತಾ ಡಿಸೋಜ, ಮುಹಮ್ಮದ್ ಫಾರೂಕ್ ಜುಬೈಲ್ ಭಾಗವಹಿಸಿದ್ದರು.

ಹಲವು ಸಭಾಂಗಣಗಳ ಸಂಕೀರ್ಣವಾದ, ಸಂಪೂರ್ಣ ಹವಾ ನಿಯಂತ್ರಿತ ಸಭಾಂಗಣದಲ್ಲಿ ಅಲಂಕೃತ ದೀಪಾಲಂಕಾರ, ವೈಫೈ ನೀರು : ಎಲ್ಇಡಿ ಸೀನ್‌ಗಳು, ವರ್ಟಿಕಲ್ ಗಾರ್ಡನ್, ಸ್ಟೋನ್ ಫೌಂಟೆನ್, 24 ತಾಸುಗಳ ವಿದ್ಯುತ್ ವ್ಯವಸ್ಥೆ, ವಿಶಾಲವಾದ ಅಡುಗೆ ಕೋಣೆ, ಸಸ್ಯಾಹಾರಿ ಮತ್ತು ಶಾಕಾಹಾರಿ ಊಟೋಪಚಾರಕ್ಕೆ ಪ್ರತ್ಯೇಕ ಊಟದ ಕೋಣೆಗಳಿವೆ.

ಸುಮಾರು 650 ಕಾರುಗಳ ಪಾರ್ಕಿಂಗ್‌ಗೆ ವ್ಯವಸ್ಥೆಯಿದ್ದು, ಮುಖ್ಯ ಸಭಾಂಗಣ ‘ಆರೈಡ್’ನಲ್ಲಿ 700, ಒಂದನೇ ಮಹಡಿಯ ‘ಸಾಫಾನ್’ ಸಭಾಂಗಣದಲ್ಲಿ 650, ನೆಲ ಅಂತಸ್ತಿನ ‘ಟುಲಿಪ್’ ಸಭಾಂಗಣದಲ್ಲಿ 800, ಪಾರ್ಟಿ ಹಾಲ್ ‘ಐರಿಸ್’ನಲ್ಲಿ 300, ಬೂಬೆಲ್ ಸಭಾಂಗಣದಲ್ಲಿ 200, ಸ್ನೇಹ ಕೂಟದ ‘ಪರ್ಪಲ್’ ಸಭಾಂಗಣದಲ್ಲಿ 500, ಲ್ಯಾವೆಂಡರ್ ಸೆಮಿನಾರ್ ಸಭಾಂಗಣದಲ್ಲಿ 500 ಹಾಗೂ ‘ಝೀ ಗೌಂಡ್’ ಹೊರಾಂಗಣದಲ್ಲಿ 600 ಆಸನಗಳ ವ್ಯವಸ್ಥೆಯಿರುತ್ತದೆ. ಅತಿಥಿಗಳಿಗೆ ವಾಸ್ತವ್ಯಕ್ಕಾಗಿ ಸಭಾಂಗಣದಲ್ಲಿ ಮೂರು ಎಕ್ಸಿಕ್ಯುಟಿವ್ ಸೂಟ್ ರೂಮ್‌ಗಳಿರುತ್ತವೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಕ್ರೈಸ್ತ ಯುವತಿಗೆ ಡ್ರಗ್ಸ್ ಕೊಟ್ಟು ನಿರಂತರ ದುರ್ಬಳಕೆ ! ಆರೋಪಿ ಸಿದ್ದಿಕ್ ನನ್ನು ಬಂಧಿಸಿದ ಸುರತ್ಕಲ್ ಪೊಲೀಸರು

Next Post

ನಾಳೆಯಿಂದ 10 ದಿನ ನೈಟ್ ಕರ್ಫ್ಯೂ: ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಓಡಾಟ ನಿಷಿದ್ಧ

Related Posts

ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ- ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ
ಕರಾವಳಿ

ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ- ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ

September 18, 2025
14
ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಮಾದಕ ವ್ಯಸನ ಮತ್ತು ಸಾಮಾಜಿಕ ಸಾಮರಸ್ಯದ ಜಾಗೃತಿ ಕಾರ್ಯಕ್ರಮ
ಕರಾವಳಿ

ರೋಟರಿ ಶಿಕ್ಷಣ ಸಂಸ್ಥೆಯಲ್ಲಿ ಮಾದಕ ವ್ಯಸನ ಮತ್ತು ಸಾಮಾಜಿಕ ಸಾಮರಸ್ಯದ ಜಾಗೃತಿ ಕಾರ್ಯಕ್ರಮ

September 18, 2025
16
Next Post
ನಾಳೆಯಿಂದ 10 ದಿನ ನೈಟ್ ಕರ್ಫ್ಯೂ: ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಓಡಾಟ ನಿಷಿದ್ಧ

ನಾಳೆಯಿಂದ 10 ದಿನ ನೈಟ್ ಕರ್ಫ್ಯೂ: ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಓಡಾಟ ನಿಷಿದ್ಧ

Discussion about this post

Recent News

ಬಾಲಿವುಡ್‌ ನಟಿ ದಿಶಾ ಪಟಾಣಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

ಬಾಲಿವುಡ್‌ ನಟಿ ದಿಶಾ ಪಟಾಣಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

September 18, 2025
33
ಭೂಗತ ಪಾತಕಿ ಛೋಟಾ ರಾಜನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಭೂಗತ ಪಾತಕಿ ಛೋಟಾ ರಾಜನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

September 18, 2025
12
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಾಲಿವುಡ್‌ ನಟಿ ದಿಶಾ ಪಟಾಣಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

ಬಾಲಿವುಡ್‌ ನಟಿ ದಿಶಾ ಪಟಾಣಿ ಮನೆ ಮೇಲೆ ದಾಳಿ ಮಾಡಿದ್ದ ಇಬ್ಬರು ಆರೋಪಿಗಳು ಎನ್‌ಕೌಂಟರ್‌ಗೆ ಬಲಿ

September 18, 2025
ಭೂಗತ ಪಾತಕಿ ಛೋಟಾ ರಾಜನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಭೂಗತ ಪಾತಕಿ ಛೋಟಾ ರಾಜನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

September 18, 2025
ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ- ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ

ಲಯನ್ಸ್ ಇಂಟ‌ರ್ ನ್ಯಾಷನಲ್ ಜಿಲ್ಲೆ 317ಡಿ- ಸೆ. 21 ರಂದು ಪುರಭವನದಲ್ಲಿ ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ದೆ

September 18, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d