• About us
  • Contact us
  • Disclaimer
Wednesday, November 5, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಂಟ್ವಾಳ ; ” ಗ್ರಾಮ ವಿಕಾಸ ಯಾತ್ರೆ-ಗ್ರಾಮದೆಡೆಗೆ ಶಾಸಕರ ನಡಿಗೆ” – ಕೋಮು ಗಲಭೆಗಳಿಂದ ನಲುಗಿದ್ದ ಬಂಟ್ವಾಳ ನವ ಬಂಟ್ವಾಳ ಸೃಷ್ಟಿಯಾಗಿದೆ‌- ಅಣ್ಣಾಮಲೈ

Coastal Times by Coastal Times
January 28, 2023
in ಕರಾವಳಿ
ಬಂಟ್ವಾಳ ; ” ಗ್ರಾಮ ವಿಕಾಸ ಯಾತ್ರೆ-ಗ್ರಾಮದೆಡೆಗೆ ಶಾಸಕರ ನಡಿಗೆ” – ಕೋಮು ಗಲಭೆಗಳಿಂದ ನಲುಗಿದ್ದ ಬಂಟ್ವಾಳ ನವ ಬಂಟ್ವಾಳ ಸೃಷ್ಟಿಯಾಗಿದೆ‌- ಅಣ್ಣಾಮಲೈ
89
VIEWS
WhatsappTelegramShare on FacebookShare on Twitter

ಬಂಟ್ವಾಳ, ಜ 27 ; ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ವಿಕಾಸ ಯಾತ್ರೆ ಕೈಗೊಂಡಿದ್ದು, ಇಂದು ಯಾತ್ರೆಯ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಪಾಲ್ಗೊಂಡಿದ್ದರು.

ಬಂಟ್ವಾಳ ತಾಲೂಕಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ವಿಕಾಸ ಯಾತ್ರೆ ಕೈಗೊಂಡಿದ್ದು, ಇಂದು ಯಾತ್ರೆಯ ಸಮಾರೋಪ ಸಮಾರಂಭ ಬಿ.ಸಿ ರೋಡ್​ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ , ಈ ಹಿಂದೆ ಕೋಮು ಗಲಭೆಗಳಿಂದ ಬಂಟ್ವಾಳ ಕ್ಷೇತ್ರ ನಲುಗಿತ್ತು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಂಟ್ವಾಳದ ಚಿತ್ರಣ ಬದಲಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಸಾಮರಸ್ಯ ನೆಲೆಸಿದೆ ಎಂದರು.

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಡಿಎಂಕೆ, ಕಾಂಗ್ರೆಸ್ ಹೇಳಿದ ಸುಳ್ಳುಗಳು ಮತ್ತೆ ರಿಪೀಟ್ ಆಗುತ್ತಿದೆ. ರೇಷನ್ ಕಾರ್ಡ್​ಗೆ ಪ್ರತಿ ತಿಂಗಳು 1000 ರೂಪಾಯಿ ನೀಡುವುದಾಗಿ ಹೇಳಿದ್ದರು. ಘೋಷಣೆ ಮಾಡಿ 21 ತಿಂಗಳಾಯಿತು, ಇದುವರೆಗೆ ಯಾರೊಬ್ಬರಿಗೂ 1 ರೂಪಾಯಿ ಕೊಟ್ಟಿಲ್ಲ. ಕೇವಲ ಸುಳ್ಳು ಹೇಳಿಕೊಂಡು ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಸುಳ್ಳು ಭರವಸೆ ನೀಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದರು.

ನವ ಬಂಟ್ವಾಳ ; ಈಗ ಕೋಮುಗಲಭೆ, ಹತ್ಯೆ ಎಲ್ಲವೂ ಸಂಪೂರ್ಣ ನಿಂತು ನವ ಬಂಟ್ವಾಳ ಸೃಷ್ಟಿಯಾಗಿದೆ‌. ಬಂಟ್ವಾಳ ಶಾಸಕರು ವೇದಿಕೆ ಮೇಲೆ ನಿಂತು ರಿಪೋರ್ಟ್ ಕಾರ್ಡ್ ಕೊಡ್ತಾ ಇದಾರೆ. ಬಂಟ್ವಾಳದಲ್ಲಿ ಡಬಲ್ ಇಂಜಿನ್‌ಗೆ ನಾಲ್ಕು ಕೋಚ್ ಹೆಚ್ಚಿದೆ. ಎಂಪಿ, ಶಾಸಕ, ಜಿ.ಪಂ ಸದಸ್ಯರು ಹಾಗೂ ಗ್ರಾ.ಪಂ ಸದಸ್ಯರು ನಾಲ್ಕು ಕೋಚ್. ಇಲ್ಲಿ ಭ್ರಷ್ಟಾಚಾರವೇ ಇಲ್ಲದೇ ಜನರಿಗೆ ಕೊಡುಗೆಗಳು ತಲುಪ್ತಾ ಇದೆ. ಇಡೀ ಕರ್ನಾಟಕ್ಕೆ ದ.ಕ ಮಾಡೆಲ್ ನೀವು ತೋರಿಸಿಕೊಟ್ಟಿದ್ದೀರ‌. ರಾಷ್ಟ್ರೀಯತೆಯ ಮತ್ತು ಭಾವನಾತ್ಮಕತೆಯ ಜನರು ಇಲ್ಲಿ ಜಾಸ್ತಿ ಇದಾರೆ. ಇಲ್ಲಿ 2023ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಬಗ್ಗೆ ಯಾರಿಗೂ ಅನುಮಾನ ‌ಇಲ್ಲ‌.

ಪ್ರಿಯಾಂಕಾ ಗಾಂಧಿ ಅವರು ಬಂದು ಪ್ರತಿ ಮನೆಯ ಮಹಿಳೆಗೆ 2000 ಸಾವಿರ ಕೊಡುತ್ತೇವೆ ಅಂತ ಹೇಳುತಿದ್ದಾರೆ‌. ಕರ್ನಾಟಕದ ಜನ ಕಾಂಗ್ರೆಸ್​ನ ಸುಳ್ಳು ಭರವಸೆಗಳನ್ನ ನಂಬಬೇಡಿ. ಸುಳ್ಳ ಭರವಸೆಗಳ ಬಗ್ಗೆ ಜಾಗರೂಕರಾಗಿರಬೇಕು. ಕಾಂಗ್ರೆಸ್​ ಹೈಕಮಾಂಡ್​ಗೆ ಕರ್ನಾಟಕ ಎಂಟಿಎಂ ಇದ್ದ ಹಾಗೆ. ಅಧಿಕಾರಕ್ಕೆ ಬಂದು ಎಟಿಎಂ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಲೋಕಸಭಾ ಚುನಾವಣೆಗೆ ಎಟಿಎಂ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಇದಕ್ಕೆ ಕರ್ನಾಟಕದ ಜನ ಅವಕಾಶ ನೀಡಬಾರದು ಎಂದರು.

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಶಾಸಕರು ತಮ್ಮ ಕ್ಷೇತ್ರ ಸುತ್ತಾಟದಲ್ಲಿ ಬ್ಯುಸಿಯಾಗಿ ಸಾಧನೆಗಳನ್ನು ಜನರತ್ತ ಕೊಂಡೊಯ್ಯುತ್ತಿದ್ದಾರೆ. ಮಂತ್ರಿಗಳು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಅದರಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ಸಾಧನೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮ ವಿಕಾಸ ಯಾತ್ರೆ ಕೈಗೊಂಡಿದ್ದರು. ಜನವರಿ 14ರಿಂದ ಆರಂಭಗೊಂಡಿದ್ದ ಈ ಯಾತ್ರೆ ಇಂದು ಬಿ.ಸಿ.ರೋಡ್​ನಲ್ಲಿ ಸಮಾರೋಪಗೊಂಡಿದೆ. ಈ ಕಾರ್ಯಕ್ರಮದ ಮೂಲಕ ಶಾಸಕರು ಪ್ರತಿಯೊಂದು ಗ್ರಾಮಗಳಿಗೆ ಯಾತ್ರೆ ಕೈಗೊಂಡು ಸಾಧನೆಗಳನ್ನು ಜನರ ಮುಂದಿಟ್ಟಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲ ರಸ್ತೆಯುದ್ದಕ್ಕೂ ಹರಿದ ಫಿಶ್ ಮೀಲ್ ಫ್ಯಾಕ್ಟರಿಯ ತ್ಯಾಜ್ಯ : ಸರಣಿ ಅಪಘಾತ, ಸ್ಥಳೀಯರಿಂದ ಟ್ಯಾಂಕರ್ ತಡೆದು ಆಕ್ರೋಶ

Next Post

ಶ್ರೀಮತಿ ನಿಶಾ ಯುವರಾಜ್ ಇವರಿಗೆ “ಮಂಗಳೂರು ವಿಶ್ವವಿದ್ಯಾನಿಲಯ” ದಿಂದ ಡಾಕ್ಟರೇಟ್ ಪದವಿ

Related Posts

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ
ಕರಾವಳಿ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
25
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ
ಕರಾವಳಿ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
24
Next Post
ಶ್ರೀಮತಿ ನಿಶಾ ಯುವರಾಜ್ ಇವರಿಗೆ “ಮಂಗಳೂರು ವಿಶ್ವವಿದ್ಯಾನಿಲಯ” ದಿಂದ ಡಾಕ್ಟರೇಟ್ ಪದವಿ

ಶ್ರೀಮತಿ ನಿಶಾ ಯುವರಾಜ್ ಇವರಿಗೆ "ಮಂಗಳೂರು ವಿಶ್ವವಿದ್ಯಾನಿಲಯ” ದಿಂದ ಡಾಕ್ಟರೇಟ್ ಪದವಿ

Discussion about this post

Recent News

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
25
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
24
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿಯ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

November 4, 2025
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ ಸಿಎಲ್-7 ಲೈಸನ್ಸ್ ಬೇಕಾಬಿಟ್ಟಿ ಹಂಚಿಕೆ- ವೈನ್ ಶಾಪ್ ಮಾಲೀಕ ಆರ್.ಧನರಾಜ್ ಆರೋಪ

November 4, 2025
World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್

World Cup 2025: ಮಹಿಳಾ ವಿಶ್ವಕಪ್​ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ; 25 ವರ್ಷದ ಬಳಿಕ ಹೊಸ ಚಾಂಪಿಯನ್ಸ್

November 3, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d