ಬೆಂಗಳೂರು: “ಕರಾವಳಿಯಲ್ಲಿ ಕೋಮುಗಲಭೆ ಸಂಬಂಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಅದನ್ನು ಹತ್ತಿಕ್ಕದೆ ಬಿಡುವುದಿಲ್ಲ” ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಆ್ಯಂಟಿ ಕಮ್ಯೂನಲ್ ಫೋರ್ಸ್ಗೆ ಯಾವ ರೀತಿ ಪವರ್ ಕೊಡಬೇಕು ಎಂಬುದನ್ನು ಚರ್ಚೆ ಮಾಡಿದ್ದೇವೆ. ನಿನ್ನೆಯೇ ತಕ್ಷಣ ಜಾರಿಯಾಗುವಂತೆ ಆದೇಶ ಕೂಡ ಮಾಡಲಾಗಿದೆ. ಇದರ ಬಗ್ಗೆ ಡಿಜಿ ಕ್ರಮ ತಗೆದುಕೊಳ್ಳುತ್ತಾರೆ. ಈ ಭಾಗವನ್ನು ಬಹಳ ಸೂಕ್ಷ್ಮವಾಗಿ ತೆಗೆದುಕೊಂಡಿದ್ದೇವೆ. ಉಡುಪಿ, ಶಿವಮೊಗ್ಗ, ಮಂಗಳೂರು ಸೇರಿ ಕಮ್ಯೂನಲ್ ಚಟುವಟಿಕೆ ಆಗುವ ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳಾಗಿ ಪರಿಗಣಿಸಿದ್ದೇವೆ” ಎಂದು ಅವರು ಇದೇ ವೇಳೆ ಸ್ಪಷ್ಟನೆ ನೀಡಿದರು.
“ಯಾರ ವಿರುದ್ಧವಾದರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಯಾವ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ಹೇಳುವುದಿಲ್ಲ. ಇದನ್ನು ಹತ್ತಿಕ್ಕದೆ ಬಿಡುವುದಿಲ್ಲ. ಅಲ್ಲಿಯ ವಾತಾವರಣ ಕೆಡಿಸಿಬಿಟ್ಟಿದ್ದಾರೆ. ಕೆಟ್ಟು ಹೋಗಿದೆ. ದ್ವೇಷಭಾವನೆ ಬಂದಿದೆ. ಇದನ್ನು ನಿಲ್ಲಿಸದೇ ಬಿಡುವುದಿಲ್ಲ. ಎಲ್ಲವೂ ಕೊನೆಯಾಗುತ್ತದೆ ಎಂಬ ವಿಶ್ವಾಸ ಇಟ್ಟುಕೊಂಡು ಮಾಡುತ್ತಿದ್ದೇವೆ” ಎಂದು ಪರಮೇಶ್ವರ್ ಹೇಳಿದರು.
“ರಾಜಕೀಯ ನಾಯಕರು ಘಟನೆಗಳ ಹಿಂದೆ ಇದ್ದಾರಾ? ಇದನ್ನೆಲ್ಲಾ ಪರಿಶೀಲನೆ ಮಾಡಿಕೊಳ್ಳುತ್ತೇವೆ. ಹತ್ಯೆ ಆದ ತಕ್ಷಣ ನಾಲ್ವರನ್ನು ಬಂಧಿಸಿದ್ದೇವೆ. ಅವರ ಹೇಳಿಕೆಗಳಲ್ಲಿ ಇನ್ನೂ ಗಂಭೀರವಾದ ಮಾಹಿತಿಗಳು ಸಿಕ್ಕಿವೆ. ಏನು ಕ್ರಮ ತಗೋಬೇಕೋ ತಗೋತೇವೆ” ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.
Discover more from Coastal Times Kannada
Subscribe to get the latest posts sent to your email.
Discussion about this post