ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಭಾವಕ್ಕೊಳಗಾದವರಲ್ಲಿ ಕಂಗನಾ ರಣಾವತ್ ಪ್ರಮುಖರು ಹಾಗೂ ಮೊದಲಿಗರು. ಹಿಂದುತ್ವವನ್ನ ಕಣ ಕಣದಲ್ಲಿಯೂ ತುಂಬಿಕೊಂಡಿರುವ ಕಂಗನಾ ಹಾಗೇ ನೋಡಿದರೆ ಯಾವತ್ತೋ ರಾಜಕೀಯಕ್ಕೆ ಬರಬೇಕಿತ್ತು. ಅದಕ್ಕೆ ಅಷ್ಟೇ ಕಸರತ್ತನ್ನ ಬಾಲಿವುಡ್ ನ ಈ ಕ್ವೀನ್ ಮಾಡಿದ್ದರು ಕೂಡ.
ಮೊನ್ನೆವರೆಗೆ ಬಿಜೆಪಿಯ ಅನಧಿಕೃತ ವಕ್ತಾರರಾಗಿದ್ದ ಕಂಗನಾ ಅವರನ್ನ ಈಗ ಬಿಜೆಪಿ ಪಕ್ಷ ಅಧಿಕೃತವಾಗಿ ಬರಮಾಡಿಕೊಂಡಿದೆ. ರತ್ನ ಗಂಬಳಿಯನ್ನ ಹಾಕಿ ಸ್ವಾಗತವನ್ನೂ ಕೋರಿದೆ. ವರ್ಷಗಳಿಂದ ಸರ್ಕಸ್ ಮಾಡ್ತಿದ್ದ ಕಂಗನಾಗೆ ಕೊನೆಗೂ ಚುನಾವಣೆಯ ಟಿಕೆಟ್ ಸಿಕ್ಕಿದೆ. ಹೌದು. ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಬಾಹುಬಲಿಗಳ ಹೆಸರನ್ನ ಐದನೇ ಬಾರಿ ಇಂದು ಬಿಜೆಪಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ 111 ಅಭ್ಯರ್ಥಿಗಳ ಹೆಸರುಗಳಿವೆ. ಆದರೆ ಆ 111 ಅಭ್ಯರ್ಥಿಗಳಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು ಕಂಗನಾ ಹೆಸರು ಮಾತ್ರ.
ಅಂದ್ಹಾಗೇ ಕಂಗನಾ ಹುಟ್ಟಿದ್ದು ಬೆಳೆದಿದ್ದು ಹಿಮಾಚಲ ಪ್ರದೇಶದಲ್ಲಿ. 55.650 ಕಿ.ಮೀನಷ್ಟು ವಿಸ್ತಾರ ಪ್ರದೇಶವನ್ನೊಂದಿರುವ ಹಿಮಾಚಲದ ಪ್ರತಿಯೊಂದು ಸಮಸ್ಯೆ ಕಂಗನಾಗೆ ಗೊತ್ತು. ಈ ಕಾರಣಕ್ಕೆ ಹಿಮಾಚಲ ಪ್ರದೇಶದಿಂದನೇ ಬಿಜೆಪಿ ಇವರನ್ನ ಕಣಕ್ಕಿಳಿಸಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಕಂಗನಾ ರಣಾವತ್ ಅವರನ್ನ ಕಣಕ್ಕಿಳಿಸಿದೆ. ಸಹಜವಾಗಿ ಈ ಸುದ್ದಿ ಕೇಳಿ ಕಂಗನಾ ರಣಾವತ್ ಸದ್ಯಕ್ಕೆ ಕ್ಲೌಡ್ ನೈನ್ ನಲ್ಲಿದ್ದಾರೆ. ಕಂಗನಾ ಅವರ ಅಸಂಖ್ಯಾತ.. ಅಗಣಿತ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ.
ನಾನು ರಾಜಕೀಯಕ್ಕೆ ಬರಬೇಕು ಎಂದರೆ ಇದು ಸರಿಯಾದ ಸಮಯ ಎಂದಿದ್ದರು. ಕಂಗನಾ ಅವರ ಈ ಮಾತುಗಳನ್ನ ಕೇಳಿದ್ದ ಅನೇಕರು ಅವತ್ತೇ ಈ ಬಾರಿ ಕಂಗನಾ ಚುನಾವಣೆಯ ಕಣಕ್ಕಿಳಿಯುವ ಖಚಿತ ನಿಶ್ಚಿತ ಎಂಬ ಭವಿಷ್ಯವಾಣಿ ನುಡಿದಿದ್ದರು. ಆ ಭವಿಷ್ಯವಾಣಿ ಈಗ ನಿಜವಾಗಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾಗೆ ಟಿಕೆಟ್ ಸಿಕ್ಕಿದೆ.
Discussion about this post