ಮೂಡುಬಿದಿರೆ, ಮಾ.25: ಮತ್ಸ್ಯೋದ್ಯಮಿ, ಅಲ್ ಫುರ್ಖಾನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಎಂ. ಮೊಹಿದ್ದೀನ್ ಕುಂಞಿ ಉಳ್ಳಾಲ (78) ಇಂದು ಮುಂಜಾವ ಇಲ್ಲಿನ ಪುತ್ತಿಗೆಯಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಉಳ್ಳಾಲದವರಾಗಿದ್ದು, ಇದೀಗ ಮೂಡುಬಿದಿರೆ ಸಮೀಪದ ಪುತ್ತಿಗೆ ನಿವಾಸಿಯಾಗಿರುವ ಹಾಜಿ ಮೊಹಿದ್ದೀನ್ ಕುಂಞಿ ಮತ್ಸ್ಯೋದ್ಯಮಿಯಾಗಿದ್ದರು. ಪರೋಪಕಾರಿಯಾಗಿದ್ದ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಶಿಕ್ಷಣ ಪ್ರೇಮಿಯಾಗಿರುವ ಅವರು ಒಂದೇ ಕ್ಯಾಂಪಸ್ನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡುವ ಉದ್ದೇಶದಿಂದ ಅಲ್ ಪುರ್ಖಾನ್ ಶಿಕ್ಷಣ ಸಂಸ್ಥೆಯನ್ನು 17 ವರ್ಷದ ಹಿಂದೆ ಸ್ಥಾಪಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಮೃತರು, ಮೂವರು ಪುತ್ರರು ಮತ್ತು ನಾಲ್ಕು ಮಂದಿ ಪುತ್ರಿಯರು, ಪತ್ನಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೂಲತಃ ಉಳ್ಳಾಲದ ಪ್ರಸ್ತುತ ಮೂಡುಬಿದಿರೆ ಸಮೀಪದ ಪುತ್ತಿಗೆ ನಿವಾಸಿಯಾಗಿದ್ದ ಹಾಜಿ ಮೊಹಿದ್ದೀನ್ ಕುಂಞಿ ಉದ್ಯಮಿಯಾಗಿದ್ದರು.
Related
Discussion about this post