ಬೆಳ್ತಂಗಡಿ, ಮಾ.8 : ಸುಮಾರು 40 ಪ್ರಯಾಣಿಕರಿದ್ದ ಬಸ್ಸು ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಬ್ರೇಕ್ ಫೇಲ್ ಆಗಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅನಾಹುತವೊಂದು ತಪ್ಪಿದೆ. ಘಟನೆಯೂ ಶುಕ್ರವಾರ ಬೆಳಗ್ಗೆ ನಡೆದಿದೆ. ಅಪಘಾತಕ್ಕಿಡಾದ ಕೆಎಸ್ ಆರ್ಟಿಸಿ ಬಸ್ಸು ಚಾರ್ಮಾಡಿ ಘಾಟ್ ನ ತಿರುವಿಗೆ ತಲುಪಿದಾಗ ಬರೇಕ್ ಪೈಲ್ ಆಗಿದೆ. ಇದು ಗಮನಕ್ಕೆ ಬರುತ್ತಲೇ ಚಾಲಕ ರಸ್ತೆಬದಿಯ ಡಿವೈಡರ್ಗೆ ಢಿಕ್ಕಿ ಹೊಡೆಸಿ ಬಸ್ಸನ್ನು ನಿಲ್ಲುವಂತೆ ಮಾಡಿದ್ದಾನೆ. ರಸ್ತೆ ಬದಿಯ ಡಿವೈಡರ್ಗೆ ಢಿಕ್ಕಿ ಹೊಡೆದು ಬಸ್ ನಿಂತಿದೆ.
ಬಸ್ಸು ಚಿಕ್ಕಮಗಳುರು ಜಿಲ್ಲೆಯ ಕಡೂರಿನಿಂದ ಮಂಗಳೂರಿಗೆ ಬರುತ್ತಿತ್ತು. ಬಸ್ಸಿನಲ್ಲಿ 70 ಮಂದಿ ಪ್ರಯಾಣಿಕರಿದ್ದು, ಯಾರಿಗೂ ಕಿಂಚಿತ್ತು ಗಾಯವು ಆಗಿಲ್ಲ ಎಂದು ತಿಳಿದು ಬಂದಿದೆ. ಚಾರ್ಮಾಡಿ ಘಾಟ್ ಅತ್ಯಂತ ಅಪಾಯಕಾರಿ ತಿರುವುಗಳಿಂದ ಕೂಡಿದೆ. ಇಲ್ಲಿ ವಾಹನದ ಬ್ರೆಕ್ ಪೈಲ್ ಆದ್ರೆ ಕಂದಕಕ್ಕೆ ಉರುಳಿ ಬಿಳುವ ಸಂಭವನೀಯತೆ ಅಧಿಕ. ಇಂತಹ ಆಪಾಯಕಾರಿ ಸ್ಥಿತಿಯಲ್ಲೂ ಚಾಲಕ ಆತಂಕಕ್ಕೆ ಒಳಗಾಗದೇ ಸಮಯಪ್ರಜ್ಞೆ ಮೆರೆದ ಹಿನ್ನಲೆಯಲ್ಲಿ ಪ್ರಯಾಣಿಕರ ಜೀವ ಉಳಿದಿದೆ.
Discussion about this post